ಅನಂತ ಕುಮಾರ್ ಹೆಗಡೆ MP ಸದಸ್ಯತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು

Feb 3, 2020, 8:53 PM IST

ಬೆಂಗಳೂರು, (ಫೆ.03): ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಪ್ರಧಾನಮಂತ್ರಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. 

‘ರಾಷ್ಟ್ರ ವಿರೋಧಿಗಳನ್ನು ಹೊಸಕಿ ಹಾಕುವ ಸಾಮರ್ಥ್ಯ ಕೇಂದ್ರಕ್ಕಿದೆ’

ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರೊಂದಿಗಿನ ಅಡ್ಜಸ್ಟ್​ಮೆಂಟ್ ಎಂದು ವ್ಯಾಖ್ಯಾನಿಸಿದ ಸಂಸದ ಹೆಗಡೆಯವರ ಹೇಳಿಕೆ ನೀಡಿದ ಆರೋಪದಡಿ ಸಂಸದ ಹೆಗಡೆ ವಿರುದ್ಧ ರಾಷ್ಟ್ರದ್ರೋಹದ ಕೇಸನ್ನೂ ಕಾಂಗ್ರೆಸ್ ದಾಖಲಿಸಿದ್ದು, ಸಂಸದ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಲೋಕಸಭಾ ಸ್ಪೀಕರ್‌ಗೆ ಕಾಂಗ್ರೆಸ್ ದೂರು ನೀಡಿದೆ.