UP Elections: ಉತ್ತರ ಪ್ರದೇಶದಲ್ಲಿ ಯೋಗಿ ಗೆಲುವಿಗೆ ಕಾರಣವಾಗಿದ್ದೇ ಅದೊಂದು ಅಂಶ!

Mar 10, 2022, 5:51 PM IST

ಲಕ್ನೋ(ಮಾ.10): ಯುಪಿ ಗೆಲುವಿನ ಬಗ್ಗೆ ವಸಂತಿ ಹರಿಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಜನರೊಂದಿಗಿದ್ದು, ಅವರ ನಾಡಿಮಿಡಿತ ಅರಿತ ಅವರು 'ಹಣದುಬ್ಬರ ಹಾಗೂ ನಿರುದ್ಯೋಗ ಈ ವಿಚಾರವಾಆಗಿ ಉತ್ತರ ಪ್ರದೆಶ ಜನರಿಗೆ ಸರ್ಕಕಾರದ ಮೇಲೆ ಅಸಮಾಧಾನವಿತ್ತು. ಮಂದಿರ, ಜಾತಿ ಈ ವಿಚಾರವಾಗಿ ಜನರಲ್ಲಿ ಹೆಚ್ಚಿನ ಆಸಕ್ತಿ ಇದ್ದಿದ್ದು ಕಂಡು ಬಂದಿಲ್ಲ. ಒಂದೆರಡು ಕಡೆ ಮಾತ್ರ ಈ ಬಗ್ಗೆ ಮಾತನಾಡಲಾಗುತ್ತಿತ್ತು. ದಿನ ನಿತ್ಯದ ಈ ಸಮಸ್ಯೆಗಳಿಗೆ ಯಾವ ರಾಜಕೀಯ ಪಕ್ಷ ಪರಿಹಾರ ನೀಡಬಹುದು ಎಂದು ಯೋಚಿಸಿ ಜನರು ಆಯ್ಕೆ ಮಾಡಿರಬಹುದು. ಎಲ್ಲಾ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜನ ಸಾಮಾನ್ಯರು ಆಯ್ಕೆ ಮಾಡಿರಬಹುದು. 

ಆರಂಭದಲ್ಲಿ ಸಮಾಜವಾದಿ ಪಕ್ಷದ ಬಗ್ಗೆ ಜನರಲ್ಲಿ ಮಮಕಾರ ಇತ್ತಾದರೂ, ಅನೇಕರಲ್ಲಿ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಮೆಚ್ಚುಗೆ ಇತ್ತು. ಬಹುಶಖ ಇದೇ ಬಿಜೆಪಿಯನ್ನು ಗೆಲುವಿನ ದಡಕ್ಕೆ ತಲುಪಿಸಿರಬಹುದು. ಇಷ್ಟೇ ಅಲ್ಲದೇ ಯುಪಿಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಉತ್ತರ ಪ್ರದೇಶದಲ್ಲಿರುವ ಪತ್ರಕರ್ತೆ ವಸಂತಿ ಹರಿಪ್ರಕಾಶ್ ಏನು ಹೇಳಿದ್ದಾರೆ? ನೀವೇ ನೋಡಿ