'ಪ್ರೀತ್ಸೋದ್ ತಪ್ಪಾ' ಕಾಲಕ್ಕೆ ಹೋಗಿ ಬಂದ ಶಿಲ್ಪಾ ಶೆಟ್ಟಿ-ರವಿಚಂದ್ರನ್; KD ಚಿತ್ರದಲ್ಲಿಲ್ವಾ ರತಿ-ಮನ್ಮಥರ ಜೋಡಿ..?

'ಪ್ರೀತ್ಸೋದ್ ತಪ್ಪಾ' ಕಾಲಕ್ಕೆ ಹೋಗಿ ಬಂದ ಶಿಲ್ಪಾ ಶೆಟ್ಟಿ-ರವಿಚಂದ್ರನ್; KD ಚಿತ್ರದಲ್ಲಿಲ್ವಾ ರತಿ-ಮನ್ಮಥರ ಜೋಡಿ..?

Published : Jul 14, 2025, 04:17 PM IST

1998ರಲ್ಲಿ ಬಂದ ಪ್ರೀತ್ಸೋದ್ ತಪ್ಪಾ ಮೂವಿನಲ್ಲಿ ರವಿಮಾಮ ಮೊಟ್ಟ ಮೊದಲ ಬಾರಿಗೆ ಶಿಲ್ಪಾಶೆಟ್ಟಿಯನ್ನ ಕನ್ನಡಕ್ಕೆ ಕರೆತಂದಿದ್ರು. ಬಾಲಿವುಡ್ ನಲ್ಲಿ ಮಿಂಚ್ತಾ ಇದ್ದ ಈ ಮಂಗಳೂರು ಬೆಡಗಿಯನ್ನ ಕರುನಾಡಿಗೆ ಕರೆದುಕೊಂಡು ಬಂದಿದ್ರು.

ಧ್ರುವ ಸರ್ಜಾ ನಟನೆಯ ಕೆಡಿ (KD) ಸಿನಿಮಾದ ಬೆಂಗಳೂರು ಇವೆಂಟ್​ನಲ್ಲಿ ರವಿಮಾಮ ಮತ್ತು ಶಿಲ್ಪಾ ಶೆಟ್ಟಿ ವೇದಿಕೆ ಹಂಚಿಕೊಂಡಿದ್ದಾರೆ. ಈ ಜೋಡಿಯನ್ನ ಒಟ್ಟಾಗಿ ನೋಡಿದವರಿಗೆ ‘ಪ್ರೀತ್ಸೋದ್ ತಪ್ಪಾ..?’ ಅನ್ನೋ ಪ್ರಶ್ನೆ ಕಾಡದೇ ಇರುತ್ತಾ,.? ದಶಕಗಳ ಬಳಿಕ ಒಟ್ಟಾಗಿ ಕಾಣಿಸಿಕೊಂಡ ರವಿಚಂದ್ರನ್ & ಶಿಲ್ಪಾ ಒಂದಿಷ್ಟು ಗುಟ್ಟು ಹೇಳಿದ್ದಾರೆ.

KD ಸಿನಿಮಾದ ಪ್ರಮೋಷನಲ್ ಇವೆಂಟ್ಸ್ ಮುಂಬೈ, ಹೈದ್ರಾಬಾದ್​, ಚೆನ್ನೈ ನಂತರ ಬೆಂಗಳೂರಿನಲ್ಲಿ ಕೂಡ ನಡೆದಿದೆ. ಬೆಂಗಳೂರಿನ ಇವೆಂಟ್​​ನ  ವಿಶೇಷತೆ ಅಂದ್ರೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ವೇದಿಕೆ ಮೇಲೆ ಮುಖಾ ಮುಖಿ ಆಗಿದ್ರು. ಇವರಿಬ್ಬರನ್ನೂ ಒಟ್ಟಿಗೆ ನೋಡಿದಾಗ ಪ್ರೀತ್ಸೋದ್ ತಪ್ಪಾ ನೆನಪಾಗದೇ ಇರುತ್ತಾ..?

1998ರಲ್ಲಿ ಬಂದ ಪ್ರೀತ್ಸೋದ್ ತಪ್ಪಾ ಮೂವಿನಲ್ಲಿ ರವಿಮಾಮ ಮೊಟ್ಟ ಮೊದಲ ಬಾರಿಗೆ ಶಿಲ್ಪಾಶೆಟ್ಟಿಯನ್ನ ಕನ್ನಡಕ್ಕೆ ಕರೆತಂದಿದ್ರು. ಬಾಲಿವುಡ್ ನಲ್ಲಿ ಮಿಂಚ್ತಾ ಇದ್ದ ಈ ಮಂಗಳೂರು ಬೆಡಗಿಯನ್ನ ಕರುನಾಡಿಗೆ ಕರೆದುಕೊಂಡು ಬಂದಿದ್ರು.

ಪ್ರೀತ್ಸೋದ್ ತಪ್ಪಾ ಸಿನಿಮಾದ ಒಂದೊಂದು ಹಾಡುಗಳು ಬಿಗ್ಗೆಸ್ಟ್ ಹಿಟ್. ಅದ್ರಲ್ಲೂ ಶಿಲ್ಪಾ ಶೆಟ್ಟಿ ‘ರಾಜಾ ರಾಜಾ.. ನನ್ನ ಕನಸಿನ ರಾಜಾ..’ ಅಂತ ಹಾಡಿ ಕುಣಿದಿದ್ದು ಮರೆಯುದುಂಟಾ..? ಆ ಹಾಡಿನ ಶೂಟಿಂಗ್​ ಹಿಂದಿನ ಗಮ್ಮತ್ತಿನ ಕಥೆಯನ್ನ ಶಿಲ್ಪಾ ವಿವರಿಸಿದ್ದು ಹೀಗೆ
ಬೈಟ್ : ( 05.24 - 06.02 )

ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಅನ್ನೋ ಎರಡೆರಡು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಈ ಸೂಪರ್ ಹಿಟ್ ಜೋಡಿ ಇದೀಗ ಕೆಡಿ ಸಿನಿಮಾದಲ್ಲಿ ಒಟ್ಟಾಗಿದೆ. ಆದ್ರೆ ಇಲ್ಲಿ ಇಬ್ಬರ ಕಾಂಬಿನೇಷನ್ ಇರೋದಿಲ್ಲ. ಶಿಲ್ಪಾ ಶೆಟ್ಟಿ ಇಲ್ಲಿ ಸತ್ಯವತಿ ಅನ್ನೋ ಪವರ್​ಫುಲ್ ಲೇಡಿ ಪಾತ್ರದಲ್ಲಿ ನಟಿಸಿದ್ರೆ,  ರವಿಚಂದ್ರನ್ ಅಂಡರ್​ವರ್ಕ್ಡ್ ಲಿಂಕ್ ಇರುವ ಅಣ್ಣಯ್ಯಪ್ಪ ಅನ್ನೋ ಪಾತ್ರ ಮಾಡಿದ್ದಾರೆ.

ಕೆಡಿ ಅಡ್ಡಾದಲ್ಲಿ ಈ ಸೂಪರ್ ಜೋಡಿಯ ಕಾಂಬಿನೇಷನ್​ ಇಲ್ಲದೇ ಹೋದ್ರೂ ಕೆಡಿ  ಪ್ರಮೋಷನಲ್ ಇವೆಂಟ್​ನಲ್ಲಂತೂ ಈ ಜೋಡಿ ವೇದಿಕೆ ಹಂಚಿಕೊಂಡಿದೆ. ಹಳೆ ನೆನಪುಗಳನ್ನ ತೆರೆದಿಟ್ಟು ಎಲ್ಲರನ್ನೂ ರಂಜಿಸಿದೆ. ಎಲ್ಲರೂ ಒಂದೊಮ್ಮೆ ‘ಪ್ರೀತ್ಸೋದ್ ತಪ್ಪಾ’ ಕಾಲಕ್ಕೆ ಹೋಗಿ ಬಂದಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more