Mysuru: ಮಾರ್ಚ್‌ನಲ್ಲಿ ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ವೇದಿಕೆ ಸಜ್ಜು

Mysuru: ಮಾರ್ಚ್‌ನಲ್ಲಿ ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ವೇದಿಕೆ ಸಜ್ಜು

Published : Feb 23, 2022, 12:00 PM IST

ರಾಷ್ಟ್ರೀಯ ಮಾನ್ಯತೆ ಹೊಂದಿರುವ ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ಮತ್ತೊಮ್ಮೆ ವೇದಿಕೆ ಸಿದ್ದವಾಗಿದೆ. ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ರಂಗ ರಸಮಯ ಕ್ಷಣ ಮತ್ತೆ ಬಂದಿದೆ. ಮುಂದಿನ ತಿಂಗಳು 10 ದಿನಗಳ ಕಾಲ ನಡೆಯುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ರಂಗಾಯಣ ಸಜ್ಜಾಗುತ್ತಿದೆ.

ಒಂದೆಡೆ ಕೊರೊನಾ ಮೂರನೇ ಅಲೆಯ ಅಬ್ಬರ, ಮತ್ತೊಂದೆಡೆ ಅಥಿತಿಗಳ ಆಹ್ವಾನದ ವಿಚಾರದಲ್ಲಿ ಏರ್ಪಟ್ಟಿದ್ದ ವಿವಾದ. ಎರಡೂ ಕಾರಣಗಳಿಂದಾಗಿ ಮೈಸೂರಿನ ರಂಗಾಯಣ(Rangayana)ದ ಬಹುರೂಪಿ ರಂಗೋತ್ಸವ ಕಳೆದ ವರ್ಷ ಡಿಸೆಂಬರ್‌(December)ನಲ್ಲಿ ನಿಂತು ಹೋಗಿತ್ತು.‌ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಉತ್ಸವಕ್ಕೆ ಆಹ್ವಾನಿಸಿರುವುದರ ವಿರುದ್ಧ ಎಡಪಂಥೀಯ ಸದಸ್ಯರು ದನಿ ಎತ್ತಿದ್ದರು. ಇದರ ಜೊತೆಗೆ ಕೊರೊನಾ(Corona) ಅಬ್ಬರ ಹೆಚ್ಚಾಗಿ ಬಹುರೂಪಿ ನಾಟಕೋತ್ಸವ ಮುಂದೂಡಲ್ಪಟ್ಟಿತ್ತು.

 ಈಗ ಮತ್ತೊಮ್ಮೆ ಬಹುರೂಪಿಗೆ ಕಾಲ ಕೂಡಿ ಬಂದಿದ್ದು, ಮಾರ್ಚ್(March) 11 ರಿಂದ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಜರುಗಲಿದೆ. ಈ ಬಾರಿ "ತಾಯಿ" ಎಂಬ ಶೀರ್ಷಿಕೆ ಅಡಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದ್ದು, ತಾಯಿ ಬಗ್ಗೆ ವಿಸ್ತೃತ ಚರ್ಚೆಯನ್ನೊಳಗೊಂಡ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ.

ಜಮೀನು, ಜಲ, ಜಾನುವಾರು, ಜಂಗಲ್, ಜನ ಎಂಬ ಪಂಚಸೂತ್ರದಲ್ಲಿ ತಾಯಿ(Mother) ಮತ್ತು ತಾಯ್ತನ ನೋಡುವ ಪ್ರಯತ್ನ ರಂಗೋತ್ಸವದಲ್ಲಿ ನಡೆಯಲಿದೆ. ವಿವಿಧ ರಾಜ್ಯ, ಜಿಲ್ಲೆಗಳ ಶ್ರೇಷ್ಠ ನಾಟಕಗಳ ಪ್ರದರ್ಶನ, ಜಾನಪದ ಕಲಾಪ್ರದರ್ಶನ, ಚಲನಚಿತ್ರೋತ್ಸವ(Film Festival), ಪುಸ್ತಕ ಪ್ರದರ್ಶನ(Book Exhibition), ಕರಕುಶಲ ಪ್ರದರ್ಶನ, ಪ್ರಾತ್ಯಕ್ಷಿಕೆ, ಆಹಾರ ಮೇಳ ಸೇರಿ ಹಲವು ಕಾರ್ಯಕ್ರಮಗಳನ್ನು ರಂಗಾಯಣ ಆಯೋಜನೆ ಮಾಡಿಕೊಂಡಿದ್ದು, ಈ ಬಾರಿ ಬಹುರೂಪಿಯಲ್ಲಿ ವಿವಿಧ ರಾಜ್ಯ, ವಿವಿಧ ಭಾಷೆಗಳ ಒಟ್ಟು 35 ನಾಟಕಗಳ ಪ್ರದರ್ಶನಗೊಳ್ಳಲಿವೆ. 

KPAC Lalitha Passes Away : ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ ಇನ್ನಿಲ್ಲ

ರಾಷ್ಟ್ರ ಪ್ರಖ್ಯಾತ ನಟಿ ಶಬಾನಾ ಆಜ್ಮಿ(Shabana Azmi), ನಾಸಿರುದ್ದೀನ್ ಶಾ, ಅಮೋಲ್ ಪಾಲೇಕರ್, ಶ್ರೀಲಂಕಾ(Srilanka)ದ ಪರಾಕ್ರಮ ನಿರಿಯಲ್ಲ, ಪ್ರಸನ್ನ, ಅನಂತ್ ನಾಗ್ ಸೇರಿ ಇತರ ಹಿರಿಯ ರಂಗ ಕಲಾವಿದರಿಂದ ಬಹುರೂಪಿ ಉದ್ಘಾಟನೆ ನಡೆಯಲಿದೆ. ಸದ್ಯ ಸಮಾರೋಪದ ಬಗ್ಗೆ ರಂಗಾಯಣ ನಿರ್ದೇಶಕರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
Read more