ಹರಿಹರ ವೀರಮಲ್ಲು ಧರ್ಮಯುದ್ಧ.. ಕಟ್ಟರ್ ಹಿಂದೂ ಲೀಡರ್ ಪವನ್ ಕಲ್ಯಾಣ್ ಪವರ್ ಪಾಲಿಟಿಕ್ಸ್..!

ಹರಿಹರ ವೀರಮಲ್ಲು ಧರ್ಮಯುದ್ಧ.. ಕಟ್ಟರ್ ಹಿಂದೂ ಲೀಡರ್ ಪವನ್ ಕಲ್ಯಾಣ್ ಪವರ್ ಪಾಲಿಟಿಕ್ಸ್..!

Published : Jul 04, 2025, 01:07 PM IST

ಸದ್ಯ ರಿಲೀಸ್ ಆಗಿರೋ ಟ್ರೈಲರ್‌ ಹರಿಹರ ವೀರಮಲ್ಲು ಮೊಘಲರ ಕಾಲದ ಹಿಂದೂ ವೀರನೊಬ್ಬನ ಐತಿಹಾಸಿಕ ಕಹಾನಿ. ಕೊಹಿನೂರ್ ವಜ್ರದ ಕುರಿತ ಕಥೆ ಕೂಡ ಇದ್ರಲ್ಲಿ ಬರುತ್ತೆ. ಈ ಐತಿಹಾಸಿಕ ಚಿತ್ರವನ್ನ ಅದ್ದೂರಿಯಾಗಿ ತೆರೆಗೆ ತಂದಿರೋ ಸಿನಿಮಾ…

ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ನಟನೆಯ ಹರಿಹರ ವೀರಮಲ್ಲು ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಸದ್ಯ ಈ ಹಿಸ್ಟಾರಿಕಲ್ ಌಕ್ಷನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡ್ತಾ ಇದೆ.  ಪವನ್ ಕಲ್ಯಾಣ್ ಈಗ ನಟನಷ್ಟೇ ಅಲ್ಲ ಆಂಧ್ರ ಡಿಸಿಎಂ ಕೂಡ ಹೌದು. ಸೋ ಹರಿಹರ ವೀರಮಲ್ಲುನ ಧರ್ಮಯುದ್ಧ ಅವರ ಪಾಲಿಟಿಕ್ಸ್​​ಗೆ ಬೂಸ್ಟ್ ಕೊಡುವಂತೆ ಇದೆ.

ಹರಿಹರ ವೀರಮಲ್ಲು (Harihara Veeramallu) .. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಅಸಲಿಗೆ ಈ ಸಿನಿಮಾ ಸೆಟ್ಟೇರಿದ್ದು 2020ರಲ್ಲಿ. ಆದ್ರೆ ಪವನ್ ರಾಜಕೀಯ ಒತ್ತಡಗಳ ನಡುವೆ ಈ ಸಿನಿಮಾ ಕಂಪ್ಲೀಟ್ ಆಗ್ಲಿಕ್ಕೆ ಬರೊಬ್ಬರಿ 5 ವರ್ಷ ತೆಗೆದುಕೊಂಡಿದೆ. ಆದ್ರೆ ಇಷ್ಟು ಸಮಯವಾದ್ರೂ ನಿರ್ದೇಶಕ ಕ್ರಿಶ್ ಅಂದುಕೊಂಡಂತೆಯೇ ಸಿನಿಮಾವನ್ನ ರೆಡಿಮಾಡಿದ್ದಾರೆ.

ಸದ್ಯ ರಿಲೀಸ್ ಆಗಿರೋ ಟ್ರೈಲರ್‌ ಹರಿಹರ ವೀರಮಲ್ಲು ಮೊಘಲರ ಕಾಲದ ಹಿಂದೂ ವೀರನೊಬ್ಬನ ಐತಿಹಾಸಿಕ ಕಹಾನಿ. ಕೊಹಿನೂರ್ ವಜ್ರದ ಕುರಿತ ಕಥೆ ಕೂಡ ಇದ್ರಲ್ಲಿ ಬರುತ್ತೆ. ಈ ಐತಿಹಾಸಿಕ ಚಿತ್ರವನ್ನ ಅದ್ದೂರಿಯಾಗಿ ತೆರೆಗೆ ತಂದಿರೋ ಸಿನಿಮಾ ಪ್ರೇಕ್ಷಕರ ಎದುರು 500 ವರ್ಷಗಳ ಹಿಂದಿನ  ಕಾಲಮಾನವನ್ನ ಕಟ್ಟಿಕೊಡಲಿದೆ. ಬರೊಬ್ಬರಿ 250 ಕೋಟಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ದವಾಗಿದ್ದು, ಟ್ರೈಲರ್​ನಲ್ಲಿ ಅದ್ದೂರಿತನ ಎದ್ದು ಕಾಣ್ತಾ ಇದೆ.

ಯೆಸ್ ಹರಿಹರ ವೀರಮಲ್ಲುನಲ್ಲಿ ಮುಸ್ಲಿಂ ಚಕ್ರವರ್ತಿ ಔರಂಗಜೇಬನೊಡನೆ ಸೆಣೆಸುವ ಕಥೆ ಇದೆ. ಇತ್ತೀಚಿಗೆ ಹಿಂದಿಯಲ್ಲಿ ಔರಂಗಜೇಬನ ವಿರುದ್ದ ಸೆಳೆಸಿದ ಸಂಭಾಜಿ ಮಹಾರಾಜರ ಕಥೆ ಛಾವಾ ತೆರೆಗೆ ಬಂದಿತ್ತು. ವಿಕ್ಕಿ ಕೌಶಾಲ್ ನಟಿಸಿದ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

ಇದೀಗ ವೀರಮಲ್ಲು ಬಗ್ಗೆಯೂ ಅಂಥದ್ದೇ ನಿರೀಕ್ಷೆ ಇದೆ. ಔರಂಗಜೇಬನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಬಾಬಿ ಡಿಯೋಲ್ ಇದ್ದಾರೆ. ಪವನ್ ಕಲ್ಯಾಣ್ ವೀರಮಲ್ಲು ಆಗಿ ವೀರತನ ತೋರ್ತಾ ಇದ್ದಾರೆ.

ಅಸಲಿಗೆ ಪವನ್ ಕಲ್ಯಾಣ್ ಈಗ ಬರೀ ನಾಯಕನಟ ಅಲ್ಲ. ಆಂಧ್ರದ ಡಿಸಿಎಂ ಕೂಡ. ಟಿಡಿಪಿ ಪಕ್ಷದ ಜೊತೆ ಪವನ್​ರ ಜನಸೇನಾ ಪಾರ್ಟಿ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದ್ದು ಪವನ್ ಕಲ್ಯಾಣ್ ಆಂಧ್ರದ ಡಿಸಿಎಂ ಆಗಿದ್ದಾರೆ.

ಇನ್ನೂ ಪವನ್ ಕಲ್ಯಾಣ್ ಇತ್ತೀಚಿಗೆ ಆಂಧ್ರದ ಹಿಂದೂವಾದಿ ಲೀಡರ್ ಅಂತಾನೆ ಗುರುತಿಸಿಕೊಳ್ತಾ ಇದ್ದಾರೆ. ತಿರುಪತಿ ಪ್ರಸಾದದ ವಿಚಾರದಲ್ಲಿ ಅಪಸವ್ಯ ನಡೆದಿದ್ದು ಗೊತ್ತಾದ ವೇಳೆ, ಖುದ್ದು ಪವನ್ ತಿರುಪತಿ ದೇಗುಲದ ಸ್ವಚ್ಚತಾ ಕಾರ್ಯದಲ್ಲಿ ಭಾಗವಸಿದ್ರು.

ಇತ್ತೀಚಿಗೆ ಪವನ್ ನಡೆ ನುಡಿ ನೋಡಿದವರು ಇವರು ಪಕ್ಕಾ ಹಿಂದೂ ಲೀಡರ್ ಆಗ್ತಿದ್ದಾರೆ ಅಂತಾ ಇದ್ದಾರೆ. ಅದರ ನಡುವೆ ಬರ್ತಾ ಇರೋ  ಹರಿಹರ ವೀರಮಲ್ಲು ಸಿನಿಮಾ ಪವನ್​ರ ಈ ಇಮೇಜ್​ನ ಇನ್ನಷ್ಟು ಬಲಗೊಳಿಸೋದ್ರಲ್ಲಿ ಡೌಟೇ ಇಲ್ಲ. 
 

02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more