ಹರಿಹರಪುರ ಶ್ರೀಗಳಿಂದ ಮತದಾನ

Apr 18, 2019, 10:39 AM IST

ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರತಿಯೊಬ್ಬ ನಾಗರೀಕರೂ ಮತದಾನ ಮಾಡಲು ಉತ್ಸುಕರಾಗಿ ಕಾಯುತ್ತಿದ್ದಾರೆ. ಮತದಾನ ಮಾಡುವಲ್ಲಿ ಮಠಾಧೀಶರು ಹಿಂದೆ ಉಳಿದಿಲ್ಲ. 

ಶ್ರೀಮದ್ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರು ಹರಿಹರಪುರದಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಈ ಮೂಲಕ ಬೇರೆಯವರಿಗೆ ಮತದಾನ ಮಾಡಲು ಇನ್ನಷ್ಟು ಸ್ಫೂರ್ತಿ ನೀಡಿದ್ದಾರೆ.