ಶಿಷ್ಯನ ಭದ್ರಕೋಟೆಯಲ್ಲಿ ‘ಸಿದ್ದುರಾಗಾ’; ನಿಲುವು ಬದಲಿಸ್ತಾರಾ ಸಾಹುಕಾರ?

Apr 19, 2019, 12:54 PM IST

ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಮುಗಿದಿದೆ. ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಗೋಕಾಕ್‌ನಲ್ಲಿ ನಡೆಯಲಿರುವ ಬೃಹತ್ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಇನ್ನಿತರ ಮುಖಂಡರು  ಭಾಗವಹಿಸಲಿದ್ದಾರೆ. ಗೋಕಾಕ್ ರಮೇಶ್ ಜಾರಕಿಹೊಳಿಯ ಭದ್ರಕೋಟೆ. ಸದ್ಯ ಪಕ್ಷದ ನಾಯಕರೊಡನೆ ಮುನಿಸಿಕೊಂಡಿರುವ ರಮೇಶ್, ಚುನಾವಣೆ ವಿಚಾರದಲ್ಲಿ ತಟಸ್ಥ ನಿಲುವನ್ನು ತಾಳಿದ್ದಾರೆ. ತಮ್ಮ ರಾಜಕೀಯ ಗುರುವಿನ ಭೇಟಿಯ ಸಂದರ್ಭದಲ್ಲಿ ತಮ್ಮ ನಿಲುವನ್ನು ಬದಲಿಸುತ್ತಾರಾ ಜಾರಕಿಹೊಳಿ?