2 ದಿನವಲ್ಲ, 2 ನಿಮಿಷವೂ ಅಂಬರೀಶ್ ಹೆಸರು ಬಳಸಲ್ಲ: ಸಿಎಂ ಕುಮಾರಸ್ವಾಮಿ

Mar 25, 2019, 12:18 PM IST

ನಮ್ಮ ಕುಟುಂಬದ, ಅಂಬಿ, ದರ್ಶನ್, ಯಶ್ ಹೆಸರನ್ನು ಬಳಸದೇ ಪ್ರಚಾರ ಮಾಡಿ ಎಂದು ಸುಮಲತಾ ಹಾಕಿರುವ ಚಾಲೆಂಜ್ ಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ. ಅಂಬರೀಶ್ ಹೆಸರನ್ನು ಬಳಸದೆ ಮಂಡ್ಯದಲ್ಲಿ ಮತ ಕೇಳುತ್ತೇನೆ. ನಾನು ಮಂಡ್ಯಗಾಗಿ ದುಡಿಮೆ ಮಾಡಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತೇನೆ. ಯಾರು ಏನೇ ಹೇಳಿದರೂ, ಮಂಡ್ಯದಲ್ಲಿ ನಿಖಿಲ್ ಗೆಲವು ಖಚಿತ. ಸುಮಲತಾಗೆ ಅಂಬರೀಶ್ ಹೆಸರೊಂದೇ ಬಂಡವಾಳ ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.