ಮಂಡ್ಯ ಚುನಾವಣಾ ಕಣದಲ್ಲಿ ವೈಯುಕ್ತಿಕ ವಾಗ್ದಾಳಿಗಳ ಬಳಿಕ ‘ ಅಭಿವೃದ್ಧಿ’ ಯ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿ ಎಂದಿದ್ದ ನಿಖಿಲ್ ಕುಮಾರಸ್ವಾಮಿ ಬಹಿರಂಗ ಸವಾಲನ್ನು ಸ್ವೀಕರಿಸಿರುವ ಸುಮಲತಾ, ಚರ್ಚೆಗೆ ಸಿದ್ಧವೆಂದು ಹೇಳಿದ್ದಾರೆ.