ಮುಖ್ಯಮಂತ್ರಿಗಳೇ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿ; KPSC ಟೈಂ ಟೇಬಲ್ ಬದಲಿಸಿ

Nov 12, 2020, 12:49 PM IST

ಬೆಂಗಳೂರು (ನ. 12): UPSC ಹಾಗೂ KPSC ಪರೀಕ್ಷೆಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಕಷ್ಟವಾಗುತ್ತದೆ. ದಿನಾಂಕಗಳನ್ನು ಬದಲು ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ. 

ಒಟ್ಟಿಗೆ ಬಂದಿದೆ KPSC, UPSC ಪರೀಕ್ಷಾ ದಿನಾಂಕ : ತಯಾರಿ ನಡೆಸಲು ಅಭ್ಯರ್ಥಿಗಳಿಗೆ ಸಮಸ್ಯೆ

'ಯುಪಿಎಸ್ಸಿ, ಕೆಪಿಎಸ್‌ಸಿ ಎರಡೂ ಒಟ್ಟಿಗೆ ಬಂದಿರುವುದರಿಂದ ಓದಲು ಸಮಯ ಸಿಗದೇ ಅಭ್ಯರ್ಥಿಗಳು ಯುಪಿಎಸ್‌ಸಿಯನ್ನು ಕೈ ಬಿಟ್ಟು ಕೆಪಿಎಸ್‌ಸಿ ಪರೀಕ್ಷೆಯನ್ನು ಮಾತ್ರ ಬರೆಯುತ್ತಾರೆ. ಇದರಿಂದ ಕನ್ನಡಿಗರು ಕೇಂದ್ರ ಸೇವೆಯಿಂದ ವಂಚಿತರಾಗುತ್ತಾರೆ. ಹಾಗಾಗಿ ಕೆಪಿಎಸ್‌ಸಿ ಟೈಂ ಟೇಬಲನ್ನು ಬದಲಿಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು' ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಬಿರಾದಾರ್ ಹೇಳಿದ್ದಾರೆ.