ಆ. 23 ರಿಂದ ಶಾಲೆ ಆರಂಭ: ಗಡಿಭಾಗದ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳು ಹೀಗಿವೆ

Aug 14, 2021, 11:18 AM IST

ಬೆಂಗಳೂರು (ಆ. 13): ಆಗಸ್ಟ್ 23 ರಿಂದ 9,10,11, ಹಾಗೂ 12 ನೇ ತರಗತಿಗಳು ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. 

ರಿಕ್ಷಾ, ಬಸ್ ಚಾಲಕರು ಅಕಸ್ಮಿಕವಾಗಿ ಮೃತಪಟ್ಟರೆ 5 ಲಕ್ಷ ರೂ ಪರಿಹಾರ: ಸಚಿವ ಹೆಬ್ಬಾರ್

ತಜ್ಞರ ಅಭಿಪ್ರಾಯ ಪಡೆದು ತರಗತಿಗಳನ್ನು ಆರಂಭಿಸುತ್ತೇವೆ. ಕೊರೋನಾ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಇನ್ನು ಮಂಗಳೂರಿನ ಸ್ಥಿತಿ ನೋಡಿ ತೀರ್ಮಾನ ತೆಗೆದುಕೊಳ್ಳುವೆ. ಶೇ. 80 ರಷ್ಟು ಶಿಕ್ಷಕರಿಗೆ ಲಸಿಕೆಯಾಗಿದೆ. ಅದನ್ನ ಶೇ. 100 ರಷ್ಟು ಮಾಡುತ್ತೇವೆ. ಆ. 30 ರ ತನಕ ನೋಡಿ, ಉಳಿದ ತರಗತಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಗಡಿ ಭಾಗದ ಜಿಲ್ಲೆಗಳ ಡಿ.ಸಿಗಳ ಜೊತೆ ಚರ್ಚೆ ನಡೆಸಿ ಶಾಲೆ ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಬಿ. ಸಿ ನಾಗೇಶ್ ಹೇಳಿದ್ದಾರೆ.