ಪ್ರವಾಹದ (Flood) ವೇಳೆ ನೆಲಸಮವಾಗಿದ್ದ ಕನ್ನಡ ಶಾಲೆಗಳ (Kannada schools) ಪುನರ್ ಸ್ಥಾಪಿಸಿ, ಪಿಇಎಸ್ ಯೂನಿವರ್ಸಿಟಿ (PES University) ಸರ್ಕಾರಕ್ಕೆ ಹಸ್ತಾಂತರಿಸಿದೆ.
ಬೆಂಗಳೂರು (ಮಾ. 30): ಪ್ರವಾಹದ (Flood) ವೇಳೆ ನೆಲಸಮವಾಗಿದ್ದ ಕನ್ನಡ ಶಾಲೆಗಳ (Kannada schools) ಪುನರ್ ಸ್ಥಾಪಿಸಿ, ಪಿಇಎಸ್ ಯೂನಿವರ್ಸಿಟಿ (PES University) ಸರ್ಕಾರಕ್ಕೆ ಹಸ್ತಾಂತರಿಸಿದೆ.
ಸರ್ಕಾರಿ ಶಾಲೆಗಳ ದತ್ತು, ಪ್ರವಾಹ ಪೀಡಿತ ಭಾಗದ ಶಾಲೆಗಳ ಅಭಿವೃದ್ಧಿ ಅಲ್ಲಿನ ಜನರಿಗೆ ನೆರವಾಗುವುದು ಸೇರಿದಂತೆ ಇಂತಹ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ವಿಚಾರದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಅವರು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.