Coronavirus Karnataka

ಲಾಕ್‌ಡೌನ್‌: ನಂಜನಗೂಡಿನಲ್ಲಿ ಪುಟ್ಟ ರಥ..! ಸರಳ ರಥೋತ್ಸವ

Apr 4, 2020, 3:37 PM IST

ಮೈಸೂರು(ಏ.04): ನಂಜನಗೂಡಿನಲ್ಲಿ ನಡೆಯಬೇಕಿದ್ದ ಪಂಚ ರಥೋತ್ಸವ ಬಹಳ ಸರಳವಾಗಿ ನೆರವೇರಿದೆ. ಪಂಚ ರಥೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು ಈ ಬಾರಿ ಮಾತ್ರ ಸರಳವಾಗಿ ನಡೆಸಲಾಗಿದೆ.

ಇಟಲಿಯಲ್ಲಿ ಸೋನಿಯಾ ಗಾಂಧಿ ಗೆಳತಿಗೆ ಡೆಡ್ಲಿ ಕೊರೋನಾ!

ಲಾಕ್‌ಡೌನ್ ಹಿನ್ನೆಲೆಯಲ್ಲಿ ರಥೋತ್ಸವವನ್ನು ಸರಳವಾಗಿ ನಡೆಸಲಾಗಿದೆ. ಸಾವಿರಾರು ಜನ ಭಕ್ತರು ಭಾಗಿಯಾಗಿ ಬಹಳ ಸಂಭ್ರಮದಿಂದ ನಡೆಯುತ್ತಿದ್ದ ರಥೋತ್ಸವವದಲ್ಲಿ ಕೇವಲ 5 ಜನ ಭಾಗಿಯಾಗಿದ್ದಾರೆ. ಪುಟ್ಟದೊಂದು ರಥವನ್ನು ಸಂಪ್ರದಾಯಿಕವಾಗಿ ಬಳಸಲಾಗಿದೆ. ಯಾವುದೇ ಅದ್ಧೂರಿ ಆಚರಣೆ ಇಲ್ಲದೆ ಸರಳವಾಗಿ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ.