ಕರ್ನಾಟಕ ಬ್ಯುಸಿನೆಸ್ ಅವಾರ್ಡ್‌ಗೆ ಮೈಲಾರಿ ಗ್ರೂಪ್‌ನ ಎಂಡಿ ಮಹೇಶ್ ಭಾಜನ

Jan 22, 2021, 8:13 PM IST

ಬೆಂಗಳೂರು (ಜ. 22): ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ. ಕೊರೋನಾ ವೇಳೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದೇ ರಾಜ್ಯದ ಉದ್ಯಮಿಗಳು. ಈ ಉದ್ಯಮಿಗಳಿಂದ ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಈ ದಿನದ ಅವಾರ್ಡ್ ವಿಜೇತರು ಮೈಲಾರಿ ಅಗ್ರೋ ಪ್ರಾಡಕ್ಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಮಹೇಶ್.