ಆದಾಯಕ್ಕಿಂತ ಖರ್ಚು ಹೆಚ್ಚಾ? ಈ ವಾಸ್ತು ನಿಯಮ ಪಾಲಿಸಿದ್ರೆ ಹಣ ಉಳಿತಾಯ ಸಾಧ್ಯ!

By Suvarna NewsFirst Published Aug 25, 2022, 11:12 AM IST
Highlights

ಸಂಬಳ ಸಾವಿರದಲ್ಲಿರಲಿ, ಲಕ್ಷದಲ್ಲಿರಲಿ- ಎಷ್ಟು ಬಂದರೂ ಕೆಲವರ ಕೈಲಿ ಹಣವೇ ನಿಲ್ಲುವುದಿಲ್ಲ. ನೀರಿನಂತೆ ಖರ್ಚಾಗಿ ಬಿಡುತ್ತದೆ. ಇದು ತಪ್ಪಬೇಕೆಂದರೆ ಈ ಆರು ವಾಸ್ತು ನಿಯಮಗಳನ್ನು ಮರೆಯದೇ ಪಾಲಿಸಿ..

ದುಡಿಮೆ ಸಾವಿರದಲ್ಲಿ, ಖರ್ಚು ಲಕ್ಷದಲ್ಲಿ- ಇಂದಿನ ಬಹುತೇಕ ಮನೆಗಳ ಸ್ಥಿತಿಯೇ ಹೀಗಿದೆ.. ಹಾಗೆ ಬಂದ ಹಣ ಹೀಗೆ ಖಾಲಿಯಾಗಿರುತ್ತೆ.. ಆದರೆ, ಎಲ್ಲಿ ಹೋಯ್ತು, ಖರ್ಚು ಅಗತ್ಯವಿತ್ತಾ ಎಂದೆಲ್ಲ ಯೋಚಿಸಲು, ಲೆಕ್ಕ ಹಾಕಲು ಕೂಡಾ ಪುರುಸೊತ್ತಿಲ್ಲದ ಜಮಾನಾವಿದು. ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಆಕಾಶಮುಖಿಯಾಗಿರುವಾಗ ಸಂಬಳ ಮಾತ್ರ ಗಂಟಲಿಂದ ಹೊರ ಬರೋಕೇ ನಾಚಿಕೊಳ್ಳೋ ಮಟ್ಟಕ್ಕಿರುತ್ತದೆ. ಹತ್ತಾರೂ ಇಎಂಐ, ಕರೆಂಟ್, ಫೋನ್, ಇಂಟರ್ನೆಟ್, ನೀರು ಇತ್ಯಾದಿ ಬಿಲ್‌ಗಳು, ತಪ್ಪಿಸಿಕೊಳ್ಳಲಾರದ ಸೆಲೆಬ್ರೇಶನ್‌ಗಳು...ಹಾಗಾಗಿ, ಹೆಚ್ಚಿನ ಮಧ್ಯಮ ವರ್ಗದವರ ಕೈಲಿ ಹಣ ನಿಲ್ಲೋದೇ ಇಲ್ಲ. ಸಂಬಳವಾದ 5 ದಿನಕ್ಕೆಲ್ಲ ಜೇಬು ಖಾಲಿ ಎಂಬ ಸ್ಥಿತಿಯಲ್ಲಿರುತ್ತಾರೆ. 

ವಾಸ್ತು ಶಾಸ್ತ್ರದ ಪ್ರಕಾರ, ಅನೇಕ ವಿಧದ ವಾಸ್ತು ನಿಯಮಗಳನ್ನು ಪಾಲಿಸದೆ ಇರುವುದು ಕೂಡಾ ಹೀಗೆ ಹಣ ಬೇಕಾಬಿಟ್ಟಿ ನೀರಿನಂತೆ ಹರಿದು ಹೋಗಲು ಕಾರಣವಾಗುತ್ತದೆ. ಉಳಿತಾಯ ಸಾಧ್ಯವಾಗುವುದಿಲ್ಲ. 
ಆದಾಯವನ್ನು ಮೀರಿದ ವೆಚ್ಚಗಳಿಗೆ ಪ್ರಮುಖ ಕಾರಣವೆಂದರೆ ವಿವೇಚನೆಯಿಲ್ಲದ ಖರೀದಿ. ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣವಿಲ್ಲದಿದ್ದಾಗ ಹಠಾತ್ ಖರೀದಿ ಸಂಭವಿಸುತ್ತದೆ. ಮನೆಯ ಈಶಾನ್ಯ ವಲಯವು ಮಾನವನ ಮನಸ್ಸನ್ನು ಪ್ರತಿನಿಧಿಸುತ್ತದೆ. ನೇರಳೆ, ಗುಲಾಬಿ, ಕೆಂಪು ಬಣ್ಣಗಳ ಉಪಸ್ಥಿತಿಯು ಈ ವಲಯದಲ್ಲಿದ್ದರೆ  ಹಠಾತ್ ಖರೀದಿಗೆ ಕಾರಣವಾಗಬಹುದು. 

ಹಾಗಾಗಿ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸಬೇಕು. ಇಲ್ಲಿ ಕೈಲಿ ಸಂಪಾದಿಸಿದ ಹಣ ಉಳಿಯಲು ಪಾಲಿಸಬೇಕಾದ ನಿಯಮಗಳ ಬಗ್ಗೆ ನೋಡೋಣ. 

1. ನಿಮ್ಮ ಮನೆಯ ಬಾಗಿಲು ಶಬ್ದ ಮಾಡಿದರೆ, ತಕ್ಷಣ ಅದನ್ನು ಪರಿಹರಿಸಿ, ಇಲ್ಲದಿದ್ದರೆ ಅದು ನಿಮಗೆ ಹಣದ ಸಮಸ್ಯೆಯನ್ನು(Money problems) ಉಂಟುಮಾಡಬಹುದು. ಆದ್ದರಿಂದ, ಹೊರಗಿನ ಬಾಗಿಲು ಯಾವುದೇ ಶಬ್ದವನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕು.

ಶತಮಾನದ ಬಳಿಕ ಗುರು ಪುಷ್ಯ ಯೋಗದೊಂದಿಗೆ 10 ಮಹಾಯೋಗ! ಈ ಕೆಲ್ಸ ಮಾಡಿದ್ರೆ ಅದೃಷ್ಟ ನಿಮ್ಮದೇ!

2. ನೀವು ಮನೆಯಲ್ಲಿ ಔಷಧಿಗಳನ್ನು ಇಟ್ಟರೆ, ಮನೆಯ ಈಶಾನ್ಯದಲ್ಲಿ ಔಷಧ(medicine)ಗಳನ್ನು ಇಡಕೂಡದು ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಮಾಡುವುದರಿಂದ ಮನೆಯಲ್ಲಿ ರೋಗವು ಕೊನೆಗೊಳ್ಳುವುದಿಲ್ಲ ಮತ್ತು ಹಣದ ಸಮಸ್ಯೆಯೂ ಆಗುತ್ತದೆ.

3. ಆಗ್ನೇಯ ದಿಕ್ಕಿನಲ್ಲಿ ನೀಲಿ ಬಣ್ಣವಿದ್ದರೆ, ಅಲ್ಲಿಂದ ನೀಲಿ ಬಣ್ಣವನ್ನು ತೆಗೆದುಹಾಕಲು ಕಾಳಜಿ ವಹಿಸಬೇಕು. ಹಳದಿ ಅಥವಾ ಗುಲಾಬಿ ಬಣ್ಣವನ್ನು ಈ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ, ನಿಮ್ಮ ಮನೆಗೆ ಹಣ ಬರುತ್ತದೆ.

4. ಈ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ-ವಾಸ್ತು ಶಾಸ್ತ್ರದಲ್ಲಿ ಕಪ್ಪು ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕಪ್ಪು ಬಣ್ಣ(Black colour)ವು ನಕಾರಾತ್ಮಕತೆಯನ್ನು ಸೂಚಿಸುತ್ತದೆ.ಇಂತಹ ಪರಿಸ್ಥಿತಿಯಲ್ಲಿ, ವೃತ್ತಿಯಲ್ಲಿ ಏರಿಳಿತಗಳನ್ನು ತಪ್ಪಿಸಲು ಕಪ್ಪು ಬಟ್ಟೆಗಳನ್ನು ಧರಿಸಬೇಡಿ.

5. ಭಾರತೀಯ ಪುರಾಣಗಳಲ್ಲಿ, ಕುಬೇರನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಮತ್ತು ವೈಭವ ಮತ್ತು ಚಿನ್ನವನ್ನು ಪ್ರತಿನಿಧಿಸುತ್ತಾನೆ. ಈಶಾನ್ಯ ದಿಕ್ಕನ್ನು ಕುಬೇರನು ನಿಯಂತ್ರಿಸುತ್ತಾನೆ. ಆದ್ದರಿಂದ ಶೌಚಾಲಯ, ಶೂ ಇಡುವ ಸ್ಥಳ ಮತ್ತು ಯಾವುದೇ ಬೃಹತ್ ಪೀಠೋಪಕರಣಗಳಂತಹ ನಕಾರಾತ್ಮಕ ಶಕ್ತಿ(Negative energy)ಯನ್ನು ಸಂಗ್ರಹಿಸುವ ಎಲ್ಲಾ ಅಡೆತಡೆಗಳನ್ನು ಈಶಾನ್ಯ ದಿಕ್ಕಿನಿಂದ ತಕ್ಷಣವೇ ತೆಗೆದುಹಾಕಬೇಕು. ಇಡೀ ಮನೆಯ ಉತ್ತರ ಭಾಗದ ಉತ್ತರ ಗೋಡೆಯ ಮೇಲೆ ಕನ್ನಡಿ ಅಥವಾ ಕುಬೇರ ಯಂತ್ರವನ್ನು ಅಳವಡಿಸಿದರೆ ಹೊಸ ಆರ್ಥಿಕ ಅವಕಾಶಗಳನ್ನು ಸಕ್ರಿಯಗೊಳಿಸಬಹುದು.

Dream Astrology 2022: ಕನಸಲ್ಲಿ ತೆಂಗಿನಕಾಯಿ ಕಂಡರೆ ಶುಭವೋ ಅಶುಭವೋ?

6. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆ, ಸ್ನಾನಗೃಹ ಮತ್ತು ಹೊರಾಂಗಣ ಗಾರ್ಡನ್ ಪ್ರದೇಶದಲ್ಲಿ ನೀರಿನ ಸೋರಿಕೆಯು ಹಣದ ಸೋರಿಕೆಯ ಸಂಕೇತವಾಗಿದೆ ಮತ್ತು ಆರ್ಥಿಕ ನಷ್ಟವನ್ನು ಸೂಚಿಸುತ್ತದೆ. ಈ ಬಗ್ಗೆ ಕಾಳಜಿ ವಹಿಸಬೇಕು. ಮನೆಯೊಳಗಿನ ಗೋಡೆಗಳಿಂದ ಅಥವಾ ಮುರಿದ ಪೈಪ್‌ಲೈನ್‌ನಿಂದ, ನಲ್ಲಿಯಿಂದ ಯಾವುದೇ ನೀರಿನ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಅವು ದೊಡ್ಡ ವಿತ್ತೀಯ ನಷ್ಟವನ್ನು ತರುತ್ತವೆ.

click me!