ಏನ್​ ನಾಟ್ಕ ಗುರೂ... ಸುದೀಪ್​ಗಿಂತ್ಲೂ ಬೆಸ್ಟ್​ ಆ್ಯಕ್ಟ್​ ಮಾಡ್ತಿರಾ ಬಿಡಿ... ವರ್ತೂರ್​ ಸಂತೋಷ್​ ಸಕತ್​ ಟ್ರೋಲ್​!

Published : Nov 15, 2023, 11:59 AM ISTUpdated : Nov 16, 2023, 09:38 AM IST
ಏನ್​ ನಾಟ್ಕ ಗುರೂ... ಸುದೀಪ್​ಗಿಂತ್ಲೂ ಬೆಸ್ಟ್​ ಆ್ಯಕ್ಟ್​ ಮಾಡ್ತಿರಾ ಬಿಡಿ... ವರ್ತೂರ್​ ಸಂತೋಷ್​ ಸಕತ್​ ಟ್ರೋಲ್​!

ಸಾರಾಂಶ

ವರ್ತೂರು ಸಂತೋಷ್​ ಅವರು ಬಿಗ್​ಬಾಸ್​ ಮನೆಯಲ್ಲಿ ಕಣ್ಣೀರು ಹಾಕಿ ತಾವು ಹೊರಕ್ಕೆ ಹೋಗುವುದಾಗಿ ಹೇಳಿರುವುದು ನಾಟಕ ಎನ್ನುತ್ತಿರುವ ಟ್ರೋಲಿಗರು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ.   

ಬಿಗ್​ಬಾಸ್​ ಭಾಷೆ ಯಾವುದೇ ಇರಲಿ... ಅಲ್ಲಿ  ನಡೆಯುವುದೆಲ್ಲವೂ ಹೈಡ್ರಾಮಾಗಳೇ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲಿ ಏನೇ ನಡೆದರೂ, ಯಾವುದೇ ಕೃತ್ಯ ಜರುಗಿದರೂ ಅದು ಎಲ್ಲವೂ ಅಚಾನಕ್​ ಆಗಿ ನಡೆಯುವಂಥದ್ದು ಎಂದು ಬಿಗ್​ಬಾಸ್​ ಪ್ರಿಯರೆಲ್ಲಾ ಕಣ್​ಕಣ್​ ಬಿಟ್ಟು ನೋಡುತ್ತಿದ್ದರೂ,  ಅದರಲ್ಲಿ ನಡೆಯುವ ಘಟನೆಗಳೆಲ್ಲವೂ  ಸ್ಕ್ರಿಪ್ಟೆಡ್​ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್​ಬಾಸ್​​  ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು. ಅಳುವುದು, ಕಿರುಚಾಡುವುದು, ಹೊರಗಡೆ ಇದ್ದಾಗ ಕುಟುಂಬದವರ ಬಳಿ ಸುಳಿಯದೇ ಇದ್ದವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಅವರು ನೆನಪಾಗುತ್ತಾರೆ, ಇವರು ನೆನಪಾಗುತ್ತಾರೆ ಎಂದು ತಾವೂ ಅಳುವುದು ಅಲ್ಲದೇ, ಪ್ರೇಕ್ಷಕರನ್ನೂ ಅಳಿಸುವುದು, ಅದಕ್ಕೆ ಬಿಗ್​ಬಾಸ್​ ನಡೆಸಿಕೊಡುವವರೂ ಸೇರಿದಂತೆ ಮತ್ತೊಂದಿಷ್ಟು ಮಂದಿ ಸಮಾಧಾನ ಮಾಡಿದಂತೆ ಮಾಡುವುದು... ಹೀಗೆ ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುತ್ತದೆ, ಮನೆಯೊಳಕ್ಕೆ ಇದ್ದವರು ಕೈಗೊಂಬೆಗಳಷ್ಟೇ ಎಂದು ಬೇರೆ ಬೇರೆ ಭಾಷೆಗಳ ಸ್ಪರ್ಧಿಗಳೂ ಹೇಳಿದ್ದಾರೆ.  

ಅದೇನೇ ಇದ್ದರೂ ಬಿಗ್​ಬಾಸ್​ ನೋಡುವ ದೊಡ್ಡ ವರ್ಗವೇ ಇದೆ. ಅದೇ ಕಾರಣಕ್ಕೆ ಟಿಆರ್​ಪಿಯಲ್ಲಿಯೂ ಈ ಷೋ ನಂಬರ್​ 1 ಸ್ಥಾನ ಗಳಿಸುತ್ತದೆ. ಸೋಷಿಯಲ್​ ಮೀಡಿಯಾಗಳಲ್ಲಿ ಬಿಗ್​ಬಾಸ್​ ಸ್ಪರ್ಧಿಗಳ ಬಗ್ಗೆ ಟೀಕೆ ಮಾಡುವವರು ಅದೆಷ್ಟೋ ಮಂದಿ, ಮೀಮ್ಸ್​ಗಳಿಗಂತೂ ಕೊರತೆ ಇಲ್ಲ. ಹೀಗೆ ಶಪಿಸುತ್ತಲೇ, ಇದೊಂದು ಕೆಟ್ಟ ಆಟ, ಹುಚ್ಚರ ಸಂತೆ ಅಂತೆಲ್ಲಾ ಹೇಳುತ್ತಲೇ ದಿನವೂ ಮಿಸ್​ ಮಾಡದೇ ನೋಡುವ ವರ್ಗವೂ ಬಹಳ ದೊಡ್ಡದೇ ಇದೆ.  ಆದರೆ ಇದರಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್​ ಎನ್ನುವುದು ಮಾತ್ರ ಅರಿತವರು ಕೆಲವೇ ಮಂದಿ. ಅದೇನೇ ಇದ್ದರೂ ಈಗ ಸದ್ಯ ವರ್ತೂರು ಸಂತೋಷ್​ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಬಿಗ್​ಬಾಸ್​ ಮನೆಯ ಗೋಡೆ ಹಾರಿಕೊಂಡು ಹೋಗೋ ಪ್ಲ್ಯಾನ್​! ವೈರಲ್​ ಆಯ್ತು ವರ್ತೂರು ಸಂತೋಷ್​ ಚರ್ಚೆ

ಹುಲಿ ಉಗುರು ಪೆಂಡೆಂಟ್​ ಧರಿಸಿದ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನು ಸಿಕ್ಕ ಬಳಿಕ ಮತ್ತೆ ಬಿಗ್‌ಬಾಸ್‌ ಮನೆಗೆ ಹೋಗಿರುವ  ವರ್ತೂರ್‌ ಸಂತೋಷ್‌ ಅವರು ಬಿಗ್​ಬಾಸ್​ ಮನೆಯಲ್ಲಿ ಕಣ್ಣೀರು ಹಾಕಿದ್ದೇನು, ತಾವು ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಹೋಗುವುದಾಗಿ ಹೇಳಿದ್ದೇನು, ಸುದೀಪ್​ ಅವರೂ ಸೇರಿದಂತೆ ಉಳಿದವರು ಸಮಾಧಾನ ಮಾಡಿದ್ದೇನು... ಎಲ್ಲವೂ ಆಗಿ ಹೋಗಿದೆ.  ಇವರಿಗೆ 34 ಲಕ್ಷದ 15 ಸಾವಿರದ 472 ವೋಟುಗಳು ಬಂದಿದ್ದು, ಸೇಫ್​ ಆಗಿದ್ದರೂ ಹೊರಗೆ ಹೋಗಬೇಡಿ ಎಂದು ಸುದೀಪ್​ ಅವರೂ ಸಮಾಧಾನ ಮಾಡಿದ್ದೂ ಆಯ್ತು. ನಂತರ  ಸುದೀಪ್‌ ಜನಗಳ ವಿರುದ್ಧವಾಗಿ ನಾನು ಹೋಗಲ್ಲ. ಹೋಗೋದು ಇಲ್ಲ. ನಾನು ನಿಮ್ಮ ನಿರ್ಧಾರಕ್ಕೆ ತುಂಬಾ ಡಿಸಪಾಯಿಂಟೆಡ್‌ ಆಗಿದ್ದೇನೆ ಎಂದು ಹೇಳಿದ್ದೂ ನಡೆಯಿತು.  ಆದರೆ ಯಾರ ಮಾತನ್ನೂ ಕೇಳಿದ ಕಾರಣ, ಸೀರಿಯಲ್​ ನಾಯಕಿಯೊಬ್ಬರು ಬಿಗ್​ಬಾಸ್​ಗೆ ಹೋಗಿ ಅವರನ್ನು ಸಮಾಧಾನ ಪಡಿಸಿದ್ದೂ ನಡೆಯಿತು. ಇದಕ್ಕೂ ಸಂತೋಷ್​ ಜಗ್ಗದಾಗ ಖುದ್ದು ಅವರ ಅಮ್ಮನೇ ಊಟ ತಂದು ಕೈತುತ್ತು ಕೊಡಿಸಿದ್ದೂ ಆಯ್ತು.  

ಇಷ್ಟಾಗುತ್ತಿದ್ದಂತೆಯೇ ಸದ್ಯ ಸಂತೋಷ್​ ಹೊರಗೆ ಹೋಗುವ ಮಾತನಾಡುತ್ತಿಲ್ಲ. ಇವೆಲ್ಲಾ ನೋಡಿದವರು ಆರಂಭದಲ್ಲಿ ನಿಜ ಅಂದುಕೊಂಡುಬಿಟ್ಟಿದ್ದೆವು ಎನ್ನುತ್ತಿದ್ದಾರೆ. ಇದೀಗ ಇದೇ ಕಾರಣಕ್ಕೆ ವರ್ತೂರು ಸಂತೋಷ್​ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದು, ಅವರ ಬಗ್ಗೆ ಮೀಮ್ಸ್​ಗಳು ಹರಿದಾಡುತ್ತಿವೆ. ಏನ್​ ಗುರು ನಿಜ ಅಂದ್ಕೊಂಡು ಬಿಟ್ವಿದ್ವಿ. ಸಕತ್​ ನಾಟ್ಕ ಆಡ್ತಿಯಾ ಬಿಡು ಎಂದು ಬಿಗ್​ಬಾಸ್​ ಪ್ರೇಮಿಗಳು ಹೇಳುತ್ತಿದ್ದಾರೆ. ಸುದೀಪ್​ ಅವರೇ ಒಳ್ಳೆಯ ನಟ ಅಂದ್ಕೊಂಡ್ರೆ ನೀವು ಅವರಿಗಿಂತ್ಲೂ ಚೆನ್ನಾಗಿ ಆ್ಯಕ್ಟ್​ ಮಾಡಿದ್ರಿ ಬಿಡಿ ಎಂದು ಇನ್ನು ಹಲವರು ಹೇಳುತ್ತಿದ್ದಾರೆ. ಇವೆಲ್ಲಾ ಸ್ಕ್ರಿಪ್ಟೆಡ್​ ಎಂದು ಚಿಕ್ಕ ಮಕ್ಕಳಿಗೂ ಅರ್ಥವಾಗುತ್ತೆ ಅಂತ ಮತ್ತೆ ಕೆಲವರು ಸಂತೋಷ್​ ಹಾಗೂ ಬಿಗ್​ಬಾಸ್​ ಕಾಲೆಳೆಯುತ್ತಿದ್ದಾರೆ.

ಎಲ್ಲಕ್ಕಿಂತಲೂ ಸಕತ್​ ವೈರಲ್​ ಆಗಿರುವುದು ಟ್ರೋಲ್​ ಪಟಿಂಗ್​ ಪೇಜ್​ನಿಂದ ಬಂದಿರುವ ಮೀಮ್ಸ್​ ಒಂದು. ಇದರಲ್ಲಿ ಸಂತೋಷ್​ ಅಮ್ಮಾ ನನಗೆ ಈ ಹಾಸ್ಟೆಲ್​ನಲ್ಲಿ ಇರೋಕೆ ಆಗ್ತಿಲ್ಲ, ನಾನು ಊರಿಗೆ ಬಂದ್​ಬಿಡ್ತೀನಿ ಎನ್ನುತ್ತಾರೆ. ಆಗ ಅವರ ಅಮ್ಮ ಸುಮ್ಕಿರೋ ಮಗನೇ ಅಳ್ಬೇಡ, 10ನೇ ಕ್ಲಾಸ್ ಆದ್ಮೇಲೆ ಅಪ್ಪಂಗೆ ಹೇಳಿ ಬೈಕ್​  ಕೊಡಿಸ್ತೀನಿ ಅಂತಾರೆ. ಆಗ ವರ್ತೂರು ಸಂತೋಷ್​ ಅವ್ರು, ಹಾಗಾದ್ರೆ ಸರಿ ಬಿಡು ಅಮ್ಮ, ಮುಗಿಸಿಕೊಂಡು ಬರ್ತೀನಿ ಎನ್ನುತ್ತಾರೆ. ಈ ಮೀಮ್ಸ್ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. 

ವರ್ತೂರ್‌ ಸಂತೋಷ್‌ಗೆ ಸಿಕ್ತು ಅಮ್ಮನ ಕೈತುತ್ತು! ಜನಮತಕ್ಕಲ್ಲದಿದ್ದರೂ ಮಾತೆಯ ಮಾತಿಗೆ ತಲೆ ಬಾಗ್ತಾರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview
Muddu Sose Serial: ವಿದ್ಯಾಗೆ ಸಂಕಟ ತಂದಿಟ್ಟ ವಿನೋದಿನಿ; ಈಗ ಸೋತರೆ ಮಾತ್ರ ಭದ್ರನಿಂದ ಶಾಶ್ವತವಾಗಿ ದೂರ!