ದಾಖಲೆ ನಿರ್ಮಿಸಿದ 'ಸರ್ವಮಂಗಳ ಮಾಂಗಲ್ಯೇ'; ಮುಟ್ಟಿತು 400ನೇ ಕಂತು!

Suvarna News   | Asianet News
Published : Feb 11, 2020, 09:15 AM IST
ದಾಖಲೆ ನಿರ್ಮಿಸಿದ 'ಸರ್ವಮಂಗಳ ಮಾಂಗಲ್ಯೇ'; ಮುಟ್ಟಿತು 400ನೇ ಕಂತು!

ಸಾರಾಂಶ

ಸ್ಟಾರ್‌ ಸುವರ್ಣ ವಾಹಿ​ನಿ​ಯಲ್ಲಿ ಪ್ರಸಾ​ರ​ವಾ​ಗುವ ಜನ​ಪ್ರಿಯ ಧಾರಾ​ವಾಹಿ ‘ಸರ್ವ​ಮಂಗ​ಳ​ ಮಾಂಗ​ಲ್ಯೇ’ ಯಶಸ್ವಿ ಹಾದಿ​ಯಲ್ಲಿ 400 ಕಂತು​ಗ​ಳನ್ನು ಪೂರೈ​ಸಿದೆ. 

ಕಿರು​ತೆರೆ ಪ್ರೇಕ್ಷ​ಕ​ರಿಗೆ ಸಾಕಷ್ಟುಮನ​ರಂಜನೆ ನೀಡುತ್ತ ಹತ್ತಿ​ರ​ವಾ​ಗು​ತ್ತಿ​ರುವ ಈ ಧಾರಾ​ವಾಹಿ ಸ್ಟಾರ್‌ ಸುವರ್ಣ ವಾಹಿ​ನಿ​ಯಲ್ಲಿ ಪ್ರತಿ ದಿನ ರಾತ್ರಿ 10.30ಕ್ಕೆ ಪ್ರಸಾ​ರ​ವಾ​ಗುತ್ತಿದೆ. ಈಗ ಇದರ ವಿಶೇಷ ಸಂಚಿಕೆ ಪ್ರಸಾರವಾಗು​ತ್ತಿದೆ.

ರಾಘವೇಂದ್ರ ರಾಜ್‌ಕುಮಾರ್‌ ನಿರ್ಮಾಣದ 'ಜೀವ ಹೂವಾಗಿದೆ' ಇಂದಿನಿಂದ 9 ಗಂಟೆಗೆ ಪ್ರಸಾರ!

ಫೆ.14ರಂದು ಪ್ರೇಮಿ​ಗಳ ದಿನ​ಕ್ಕಾಗಿ ಈ ವಿಶೇಷ ಸಂಚಿ​ಕೆ​ಯನ್ನು ರೂಪಿ​ಸ​ಲಾ​ಗಿದೆ. ಧಾರಾ​ವಾ​ಹಿ ನಾಯಕ ಶಂಕರ ತನ್ನ ಹೆಂಡತಿ ವಿಚಾ​ರ​ದಲ್ಲಿ ತಪ್ಪು ಮಾಡಿದ್ದೇನೆಂದು ಭಾವಿಸಿ ದರ್ಮಸ್ಥಳಕ್ಕೆ ಪಾದಯಾತ್ರೆ ಹೊರಡುತ್ತಾನೆ. ಪಾದಯಾತ್ರೆ ಸಂದರ್ಭದಲ್ಲಿ ಶಂಕರನ ಬದುಕು ಹಳ್ಳಿಯೊಂದರಲ್ಲಿ ನೆಲೆಗೊಂಡಾ​ಗ ಅಲ್ಲಿನ ಕಾಳಿ ದರ್ಶನ ಆಗು​ತ್ತದೆ. ಭಕ್ತಿ​ಯಿಂದ ಕೂಡಿದ ಈ ವಿಶೇಷ ಸಂಚಿಕೆ ಕೂಡ ಪ್ರಸಾ​ರ​ವಾಗುತ್ತಿದೆ.

ಏನಿದು ಅಚ್ಚರಿ! 'ಲಕ್ಷ್ಮೀ ಬಾರಮ್ಮ' ಚಂದನ್‌ಗೆ 'ಗೊಂಬೆ' ಜೊತೆ ಫಸ್ಟ್‌ನೈಟ್‌!

ಸಂಸ್ಕಾರ ಹಾಗೂ ಸಂಪ್ರದಾಯವನ್ನು ಉಸಿರಾಡುವ ನಾಯಕ ಶಂಕರ ಹಾಗೂ ಬದುಕಿನ ಪ್ರತಿಕ್ಷಣವನ್ನೂ ಖುಷಿಯಿಂದ ಕಳೆಯಬೇಕು, ನಮ್ಮ ಕಟ್ಟುಪಾಡುಗಳು ಜೀವವಿರೋಧಿಯಾಗಿರಬಾರದು ಎಂದು ಬಯಸುವ ನಾಯಕಿ ಪಾರು. ಹೀಗೆ ಎರಡು ವಿರುದ್ಧ ವ್ಯಕ್ತಿತ್ವಗಳು ಮದುವೆಯಾಗಿ ಸಂಸಾರ ಹೇಗೆಸಾಗುತ್ತಾರೆ ಎಂಬುದೇ ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯ ಕಥಾಹಂದರ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!
ಗಿಲ್ಲಿ ನಟನ ಕಾಮಿಡಿ ಅತಿರೇಕ ಆಯ್ತು, ತೇಜೋವಧೆ ಅಂತೀರಾ?; Bigg Boss ಟೀಂಗೆ ಸವಾಲು ಹಾಕಿದ ವೀಕ್ಷಕರು