ಕಾಳಿಯಾಗಿ, ಮಹಾಶಕ್ತಿಯಾಗಿ ಕಾಣಿಸಿಕೊಂಡ ಸತ್ಯ ಸೀರಿಯಲ್​ ಕೀರ್ತನಾ: ದೈವ ಸ್ವರೂಪಿಸಿ ಎಂದ ಫ್ಯಾನ್ಸ್​

Published : Oct 25, 2023, 01:15 PM IST
ಕಾಳಿಯಾಗಿ, ಮಹಾಶಕ್ತಿಯಾಗಿ ಕಾಣಿಸಿಕೊಂಡ ಸತ್ಯ ಸೀರಿಯಲ್​ ಕೀರ್ತನಾ: ದೈವ ಸ್ವರೂಪಿಸಿ ಎಂದ ಫ್ಯಾನ್ಸ್​

ಸಾರಾಂಶ

ಸತ್ಯ ಸೀರಿಯಲ್​ ವಿಲನ್​ ಕೀರ್ತನಾ ಅವರು ದಸರಾ ನಿಮಿತ್ತ ಕಾಳಿ ಹಾಗೂ ಮಹಾಶಕ್ತಿ ಸ್ವರೂಪಿಣಿಯಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ನಿಜವಾಗಿಯೂ ದೇವತೆ ಎನ್ನುತ್ತಿದ್ದಾರೆ.  

ಈಗ ತಾನೇ ದಸರಾ ಹಬ್ಬದ ಸಡಗರ ಮುಗಿದು ದೀಪಾವಳಿಯ ಆಗಮನಕ್ಕೆ ಜನರು ಕಾಯುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ಸಿನಿ ತಾರೆಯರಾದಿಯಾಗಿ ಸಂಭ್ರಮದ ಸುರಿಮಳೆಯೇ ಆಗಿದೆ. ಎಷ್ಟೋ ಮಕ್ಕಳು, ಮಹಿಳೆಯರು ಶಿವಶಕ್ತಿ ಸ್ವರೂಪಿಣಿಯಾಗಿ ಈ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದಾರೆ. ದಸರಾ ಹಬ್ಬವನ್ನು ಸೆಲೆಬ್ರಿಟಿಗಳು ವಿಶೇಷ ರೂಪದಲ್ಲಿ ಸೆಲೆಬ್ರೇಟ್​ ಮಾಡಿದ್ದು, ಅವುಗಳನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವರದಲ್ಲಿ ಒಬ್ಬರು ಸತ್ಯ ಸೀರಿಯಲ್​ ವಿಲನ್​ ಕೀರ್ತನಾ ಅಲಿಯಾಸ್​ ಅನು ಜನಾರ್ದನ.  ಕೀರ್ತನಾ ಎಂದೇ ಫೇಮಸ್​ ಆಗಿರೋ ನಟಿ, ಅನು ಜನಾರ್ದನ (Anu Janardhana). ಇವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ದಿನನಿತ್ಯವೂ ಚಿಕ್ಕ ಚಿಕ್ಕ ರೀಲ್ಸ್​ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ.   

ಇದೀಗ ಕಾಳಿ ಸ್ವರೂಪಿಣಿಯಾಗಿ, ಶಿವಶಕ್ತಿ ಸ್ವರೂಪಿಣಿಯಾಗಿ ಮೇಕ್​ ಓಪರ್​ ಮಾಡಿಸಿಕೊಂಡು ಅದರ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಥೇಟ್​ ದೇವಿಯಂತೆಯೇ ಕಂಗೊಳಿಸುವ ಅನು ಅವರ ಮೇಕಪ್​ಗೆ ಫ್ಯಾನ್ಸ್​ ಮನಸೋತಿದ್ದಾರೆ. ವ್ಹಾವ್​ ಎನ್ನುತ್ತಿದ್ದಾರೆ. ನೀವು ಯಾವ ನಟನೆ ಮಾಡಿದರೂ ಅದು ಸೂಪರ್​ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

 
ಅಂದಹಾಗೆ, ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿಯಲ್ಲಿ ಕೀರ್ತನಾ ವಿಲನ್​ ಪಾತ್ರಧಾರಿ.  ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ.  ತಮ್ಮ ಅದ್ಭುತ ನಟನೆಯಿಂದ ಥೇಟ್​ ಮನೆಹಾಳಿಯಂತೆಯೇ ಕಾಣಿಸಿಕೊಳ್ಳುತ್ತಿದ್ದಾರೆ ಕೀರ್ತನಾ. ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವುದು ಈಕೆಯ ಕೆಲಸ.

 

 ಭಾರತನಾಟ್ಯ ಕಲಾವಿದೆಯೂ ಆಗಿರುವ ಅನು ಅವರಿಗೆ ಕಲೆಯಲ್ಲಿ ಮೊದಲಿನಿಂದಲೂ  ಆಸಕ್ತಿ.  ಶ್ರೀ ವಿಷ್ಣು, ಜೈ ಹನುಮಾನ್​ ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಬಳಿಕ 'ರಂಗನಾಯಕಿ' ಧಾರಾವಾಹಿಗೆ ಎಂಟ್ರಿ ಕೊಟ್ಟ ಅನು,  ಬ್ರಹ್ಮಗಂಟ, ಅಮ್ನೋರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಸತ್ಯ ಅವರಿಗೆ ಸಕತ್​ ಹೆಸರು ತಂದುಕೊಟ್ಟಿದೆ. ಸತ್ಯ ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಅನು ಬಳಕುವ ಬಳ್ಳಿಯಂತೆ ಇರುವುದನ್ನು ನೋಡಬಹುದು. ಆದರೆ ಅನು ಮೊದಲು ಹೀಗಿರಲಿಲ್ಲವಂತೆ. ನಟನಾ ಕ್ಷೇತ್ರಕ್ಕೆ ಬರುವ ಮೊದಲು ತಾವು ದಪ್ಪ ಆಗಿದ್ದು, ಆಮೇಲೆ ಸಕತ್​ ಡಯಟ್​ ಮಾಡಿ ಒಂದು ವರ್ಷಗಳ ಸತತ ಪರಿಶ್ರಮದ ನಂತರ ತೆಳ್ಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?