ಕೊರೋನಾ ಬಂದ ಮೇಲೆ ಮಾತ್ರ ಅದರ ಭಯ ಗೊತ್ತಾಗೋದು: ನಟ ಸುಜಿತ್ ಗೌಡ

Suvarna News   | Asianet News
Published : May 14, 2021, 11:45 AM ISTUpdated : May 14, 2021, 12:09 PM IST
ಕೊರೋನಾ ಬಂದ ಮೇಲೆ ಮಾತ್ರ ಅದರ ಭಯ ಗೊತ್ತಾಗೋದು: ನಟ ಸುಜಿತ್ ಗೌಡ

ಸಾರಾಂಶ

ಬೆಂಗಳೂರು ಟು ಹೈದರಾಬಾದ್‌ ನಡುವೆ ನಾನ್‌ ಸ್ಟಾಪ್ ಪ್ರಯಣಿಸುತ್ತಿದ್ದ, ಕಾರಣ ಕೊರೋನಾ ಬಂದಿರಬಹುದು. ನಟ ಸುಜಿತ್ ಗೌಡ ಕೊರೋನಾ ಕ್ವಾರಂಟೈನ್‌ ಬಗ್ಗೆ ಹೇಳಿದ್ದು ಹೀಗೆ....

'ಮನಸ್ಸೆಲ್ಲಾ ನೀನೆ' ಧಾರಾವಾಹಿ ನಟ ಸುಜಿತ್ ಗೌಡ ಅವರಿಗೆ ಕೆಲವು ದಿನಗಳ ಹಿಂದೆ ಕೊರೋನಾ ವೈರಸ್‌ ತಗುಲಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಅದ ನಟ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು,  ಕ್ವಾರಂಟೈನ್ ದಿನಗಳು ಹೇಗಿದ್ದವು ಎಂದು ಹಂಚಿಕೊಂಡಿದ್ದಾರೆ. 

'ಮನಸ್ಸೆಲ್ಲಾ ನೀನೆ' ಧಾರಾವಾಹಿ ನಟ ಸುಜಿತ್ ಗೌಡಗೆ ಕೊರೋನಾ ಪಾಸಿಟಿವ್! 

ಸುಜಿತ್ ಮಾತು:
'ಮೊದಲು ಮೈ-ಕೈ ನೋವು, ಕೆಮ್ಮು ಕಾಣಿಸಿಕೊಂಡಿತ್ತು. ಆನಂತರ ಜ್ವರ ಶುರುವಾಗಿದೆ. ಜ್ವರ ಬಂದ ತಕ್ಷಣವೇ ಕೊರೋನಾ ಟೆಸ್ಟ್ ಮಾಡಿಸಿದೆ. ಪಾಸಿಟಿವ್ ಎಂದು ತಿಳಿಯಿತು. ತೆಲುಗು ಧಾರಾವಾಹಿ ಕಸ್ತೂರಿ ಹಾಗೂ ಕನ್ನಡ ಧಾರಾವಾಹಿ ಮನಸ್ಸೆಲ್ಲಾ ನೀನೆ ಚಿತ್ರೀಕರಣಕ್ಕೆಂದು ಬೆಂಗಳೂರು-ಹೈದರಬಾದ್‌ ನಡುವೆ ಪ್ರಯಾಣ ಮಾಡುತ್ತಲೇ ಇರುತ್ತೇನೆ. ನನ್ನ ಪ್ರಕಾರ ಈ ಪ್ರಯಣದಿಂದಲೇ ಕೊರೋನಾ ಬಂದಿರ ಬಹುದು,' ಎಂದು ಸುಜಿತ್ ಹೇಳಿದ್ದಾರೆ. 

ಬಂದ್ರೆ ಭಯ ಗೊತ್ತಾಗುತ್ತೆ:
'ನನ್ನ ಪೋಷಕರು ಗಾಬರಿ ಆಗಿದ್ದರು. ವೈದ್ಯರನ್ನು ಸಂಪರ್ಕಿಸಿ ಔಷಧಿಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ. ಒಂದು ವಾರ ಕಳೆದಿದೆ, ಇನ್ನೂ ಕೆಮ್ಮು ಇದೆ. ಆದಷ್ಟು ಬೇಗ ಗುಣಮುಖನಾಗುವೆ ಎಂಬ ಭರವಸೆ ನನಗಿದೆ. ನನಗೆ ಸದಾ ಹೊರಗಿರುವುದು ಅಂದ್ರೆ ತುಂಬಾ ಇಷ್ಟ. ಇದೇ ಮೊದಲು ನಾನು ಒಂದು ರೂಮ್‌ನಲ್ಲಿ ಇಷ್ಟು ದಿನ ಇರುವುದು. ಈ ಹಿಂದೆ ಜನರು ಕೊರೋನಾ ಅಂತ ಹೇಳಿದಾಗ ನಾನು ಅಯ್ಯೋ ಇದು ಸಾಮಾನ್ಯ ಜ್ವರಗಳ ಹಾಗೆ ಎನ್ನುತ್ತಿದ್ದೆ. ಆದರೆ ವೈರಸ್‌ ನಮಗೆ ಬಂದ ಮೇಲೆಯೇ ಮಾತ್ರ ಅದರ ಭಯ ಗೊತ್ತಾಗುವುದು. ಹೊರಗಡೆ ಓಡಾಡುವವರು ದಯವಿಟ್ಟು  ನಿಯಮಗಳನ್ನು ಪಾಲಿಸಿ,' ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?