2 ವರ್ಷದಿಂದ ಒಂದೂ ಡ್ರೆಸ್​ ರಿಪೀಟ್​ ಹಾಕ್ಲಿಲ್ಲ: ರಾಯಭಾರಿ ನಿವೇದಿತಾಗೆ ಕಾರಣ ತಿಳಿಸಿದ 'ಸಾಧನಾ'

By Suchethana DFirst Published Aug 29, 2024, 11:17 AM IST
Highlights

ಕೆಂಡಸಂಪಿಗೆ ಸೀರಿಯಲ್​ ವಿಲನ್​ ಸಾಧನಾ ಅರ್ಥಾತ್​ ಅಮೃತಾ ರಾಮಮೂರ್ತಿ ಎರಡು ವರ್ಷಗಳಿಂದ ಒಂದೂ ಡ್ರೆಸ್​ ರಿಪೀಟ್​ ಹಾಕ್ಲಿಲ್ವಂತೆ! ನಿವೇದಿತಾರಿಗೆ ನಟಿ ಹೇಳಿದ್ದೇನು ನೋಡಿ.
 

ಕಳೆದ ಎರಡು ವರ್ಷಗಳಿಂದ ವೀಕ್ಷಕರನ್ನು ರಂಜಿಸಿದ್ದ ಕಲರ್ಸ್​ ಕನ್ನಡ ವಾಹಿನಿಯ ಕೆಂಡಸಂಪಿಗೆ ಸೀರಿಯಲ್​ ಇನ್ನೇನು ಮುಕ್ತಾಯಗೊಳ್ಳಲಿದೆ. ಈ ಕುರಿತು ಸೀರಿಯಲ್​ನಲ್ಲಿ ವಿಲನ್​ ಪಾತ್ರ ಮಾಡಿದ್ದ ಸಾಧನಾ ಅರ್ಥಾತ್​  ಅಮೃತಾ ರಾಮಮೂರ್ತಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸೀರಿಯಲ್​ ಹಬ್ಬ ಅಂದ್ರೆ ಅನುಬಂಧ ಅವಾರ್ಡ್ಸ್​ಗೆ ಎಲ್ಲಾ ಸೀರಿಯಲ್​ಗಳ ಕಲಾವಿದರೂ ರೆಡಿಯಾಗಿದ್ದಾರೆ. ಹಲವಾರು ವಿಭಾಗಗಳಲ್ಲಿ ನೀಡುವ ಅವಾರ್ಡ್​ಗೆ ಕೆಂಡಸಂಪಿಗೆ ಸೀರಿಯಲ್​ ಕಲಾವಿದರ ಪಾಲೂ ಇದೆ. ಇದಾಗಲೇ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರು, ಕೆಲವು ಸೀರಿಯಲ್​ ತಂಡಗಳನ್ನು ಮಾತನಾಡಿಸಿದ್ದಾರೆ. ಈ ಅವಾರ್ಡ್​ ಫಂಕ್ಷನ್​ಗೆ ಸದ್ಯ ಇವರೇ ರಾಯಭಾರಿ. ಇದಾಗಲೇ ಕೆಲ ತಂಡಗಳನ್ನು ಮಾತನಾಡಿಸಿರುವ ನಿವೇದಿತಾ ಗೌಡ ಇದೀಗ ಕೆಂಡಸಂಪಿಗೆ ತಂಡದ ಜೊತೆಯೂ ಮಾತುಕತೆ ನಡೆಸಿದ್ದು, ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ.

ಈ ಸಂದರ್ಭದಲ್ಲಿ ತಂಡದ ಸದಸ್ಯರು ಸೀರಿಯಲ್​ಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಖಳನಾಯಕಿ ಸಾಧನಾ ಅರ್ಥಾತ್​ ನಟಿ ಅಮೃತಾ ರಾಮಮೂರ್ತಿ ಅವರು ತಮ್ಮ ಡ್ರೆಸ್​ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. 2022ರ ಆಗಸ್ಟ್​ ತಿಂಗಳಿನಿಂದ ಬರೋಬ್ಬರಿ ಎರಡು ವರ್ಷ ನಡೆದಿರುವ ಈ ಸೀರಿಯಲ್​ನಲ್ಲಿ ಒಂದೇ ಒಂದು ಡ್ರೆಸ್​ ಅನ್ನು ನಾನು ರಿಪೀಟ್​ ಹಾಕಲಿಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ  ಕಾರಣ ಕೊಟ್ಟಿರುವ ಅವರು, ನಮ್ಮ ನಿರ್ದೇಶಕರು ನಿಮ್ಮದು ಸ್ಟೈಲಿಷ್​  ಪಾತ್ರ ಎಂದು ಹೇಳಿದ್ದರು. ಅದಕ್ಕಾಗಿ ಪಾತ್ರದ ಜೊತೆ ಕಾಂಪ್ರಮೈಸ್​ ಆಗುವ ಮಾತೇ ಇಲ್ಲ. ಇದೇ ಕಾರಣಕ್ಕೆ ಒಂದೇ ಒಂದು  ಕಾಸ್ಟ್ಯೂಮ್​ ರಿಪೀಟ್​ ಮಾಡಲಿಲ್ಲ. ಪಾತ್ರಕ್ಕೆ ಕರೆಕ್ಟ್​ ಆಗಿ ಡ್ರೆಸ್​ ನಿಭಾಯಿಸಬೇಕು ಎನ್ನುವ ಕಾರಣಕ್ಕೆ ಡ್ರೆಸ್​ ರಿಪೀಟ್​ ಮಾಡಿಲ್ಲ ಎಂದು ಹೇಳಿದ್ದಾರೆ. 

Latest Videos

'ಕರಿಮಣಿ'ಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ- ಮುಂದಿನ ಮಾಲೀಕ ಯಾರಮ್ಮಾ ಕೇಳ್ತಿದ್ದಾರೆ ನೆಟ್ಟಿಗರು!

ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ಅಮೃತಾ ಅವರು, 'ಕೆಂಡಸಂಪಿಗೆ' ಸೀರಿಯಲ್​ ಮುಗಿಯುತ್ತಿರುವುದಕ್ಕೆ ನೋವಿನ ವಿದಾಯ ಹೇಳಿ ಸೋಷಿಯಲ್​  ಮೀಡಿಯಾದಲ್ಲಿ ಪೋಸ್ಟ್​  ಮಾಡಿದ್ದರು.  'ಕೆಂಡಸಂಪಿಗೆ' ಧಾರಾವಾಹಿಯ ಇವರ ಓಪನಿಂಗ್ ಶಾಟ್ ಬಿಎಂಡಬ್ಲ್ಯುನಲ್ಲಿ ಆಗಿತ್ತು. ಈಗ ಅಂತ್ಯ ಹೇಗೆ ಆಗುತ್ತೆ ಅಂಥ ನೀವೇ ನೋಡಿ. ಕೊನೆಯ ಸಂಚಿಕೆಗಳನ್ನು ಮರೆಯದೇ ನೋಡಿ. ಲವ್ ಯೂ ಆಲ್ ಎಂದು ಅವರು ಬರೆದುಕೊಂಡಿದ್ದರು.  ಮಾತ್ರವಲ್ಲದೇ ವಿಡಿಯೋದ ಕೆಳಗೆ "ಕೆಂಡಸಂಪಿಗೆ ಕೊನೆಯ ಹಂತದಲ್ಲಿ. ಐ ವಿಲ್ ಮಿಸ್ ಯೂ ಸಾಧನಾ" ಎಂದು ಹೇಳಿದ್ದರು.

ಇನ್ನು ನಿವೇದಿತಾ ಗೌಡ ವಿಷಯಕ್ಕೆ ಬರುವುದಾದರೆ, ಈ ಅವಾರ್ಡ್​ ಫಂಕ್ಷನ್​ಗೆ ಇವರನ್ನು ಉಸ್ತುವಾರಿ ಮಾಡಿರುವುದಕ್ಕೆ ಇದಾಗಲೇ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಚಂದನ್​ ಶೆಟ್ಟಿ ಜೊತೆ ವಿಚ್ಛೇದನ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನಿವೇದಿತಾ ಅವರನ್ನೇ ದೋಷಿಯನ್ನಾಗಿ ಮಾಡಲಾಗುತ್ತಿದೆ. ಇದಕ್ಕಾಗಿ ನಿವೇದಿತಾ ಕಂಡರೆ ಯಾಕೋ ಇವರ ವಿರುದ್ಧ ತಿರುಗಿ ಬೀಳುವವರೇ ಹೆಚ್ಚಾಗಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ರೀಲ್ಸ್​ ಮಾಡಿದಾಗಲೂ ನೆಗೆಟಿವ್​ ಕಮೆಂಟ್ಸ್​ ಜಾಸ್ತಿ ಆಗುತ್ತಿವೆ. ಇನ್ನು ಅನುಬಂಧ ಅವಾರ್ಡ್​ ಒಳ್ಳೆಯ ಕುಟುಂಬಕ್ಕೆ ನೀಡುವ ಅವಾರ್ಡ್​.  ಅದಕ್ಕೆ ಇವರ್ಯಾಕೆ ಎಂದೂ ಹಲವರು ಮೂಗು ಮುರಿಯುತ್ತಿದ್ದಾರೆ. 
ಜನ ಮೆಚ್ಚಿದ ಸಂಸಾರ ಅವಾರ್ಡ್‌ಗೆ ನಿವೇದಿತಾ ಗೌಡ ಎಂಟ್ರಿ! ವಿಡಿಯೋ ನೋಡಿ ಬಿಸಿಬಿಸಿ ಚರ್ಚೆ ಶುರು

click me!