Bigg Bossಗೆ ಹೋಗದಂತೆ ವೈದ್ಯರ ಎಚ್ಚರಿಕೆ! ಕರುನಾಡ ಮನಗೆದ್ದಾಕೆಗೆ ಸಿಕ್ಕ ಛಾನ್ಸ್​ ಮಿಸ್​- ಜಡ್ಜಸ್​ ಭಾವುಕ​

Published : Aug 29, 2026, 09:41 PM IST
Bigg Boss 13 Agnipareekshe

ಸಾರಾಂಶ

'ಬಿಗ್​ಬಾಸ್ ಅಗ್ನಿಪರೀಕ್ಷೆ'ಯ ಸ್ಟಾರ್ ಸ್ಪರ್ಧಿ ಕುಮಾರಿ, ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ, ಅನಿರೀಕ್ಷಿತವಾಗಿ ಅವರು ಬಿಗ್‌ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಮತಗಳ ಕೊರತೆಯಿಂದಲ್ಲ, ಬದಲಾಗಿ ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿರುವ ಸತ್ಯ ಬಹಿರಂಗವಾಗಿದೆ.

ಬಿಗ್​ಬಾಸ್ ಅಗ್ನಿಪರೀಕ್ಷೆ (Bigg Boss Agni Pareekshe)ಯಲ್ಲಿ ಬಿಗ್​ಬಾಸ್​ಗೆ ಹೋಗುವ ಆಸೆಯಿಂದ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ 60 ಮಂದಿ ಫೈನಲ್​ ಆಗಿ ಆಯ್ಕೆಯಾಗಿದ್ದರು. ಮೂವರನ್ನು ಮಾತ್ರ ಬಿಗ್​ಬಾಸ್​ ಮನೆಯೊಳಕ್ಕೆ ಕಳುಹಿಸುವುದಾಗಿ ಹೇಳಲಾಗಿದೆ. ಅವರ ಪೈಕಿ ಕುಮಾರಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಎಂಟ್ರಿ ಕೊಟ್ಟಿದ್ದರು ಲಾವಣ್ಯ ಕುಮಾರಿ. ರಕ್ಷಿತಾ ಶೆಟ್ಟಿ ಅವರನ್ನು ನೆನಪಿಸುವಂತೆ ಸಕತ್​ ಜೋಕ್​ ಮಾಡುತ್ತಿದ್ದರು ಕುಮಾರಿ. ಮುಗ್ಧವಾಗಿ ಮಾತನಾಡಿ ನಾಲ್ಕೂ ಜಡ್ಜಸ್​ ಮನೆ ಗೆದ್ದಿದ್ದರು. ‘ಸ್ಟಾರ್ ಕಂಟೆಂಡರ್’ ಆಗಿ ಸೆಲೆಕ್ಟ್ ಕೂಡ ಆಗಿದ್ದರು.

ಸಾಕಷ್ಟು ಟ್ರೋಲ್​

ಈಕೆಯನ್ನು ಸೋಷಿಯಲ್​ ಮೀಡಿಯಾದಲ್ಲಿ ಕಾಲೆಳೆದವರೂ ಹಲವರು. ಅವರಿಗಿಂತಲೂ ಹೆಚ್ಚಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು ಕುಮಾರಿ. ನಂಜನಗೂಡು ಮೂಲದ ಕುಮಾರಿ ಅಡಿಷನ್‌ನಲ್ಲಿ ತನ್ನ ಮಾತಿನ ಕೌಶಲ, ಮುಗ್ಧತೆಯಿಂದ ನಾಲ್ವರು ಜ್ಯೂರಿಗಳ ಮನಗೆದ್ದಿದ್ದರೂ ಈಗ ಔಟ್​ ಆಗಿದ್ದಾರೆ. ಇದಾಗಲೇ ತಮಗೆ ಓಟ್​ ನೀಡುವಂತೆ ವಿಡಿಯೋಮಾಡಿದ್ದರು ಕುಮಾರಿ. ಆದರೆ ಫೈನಲ್​ ಲಿಸ್ಟ್​ನಲ್ಲಿ ಇವರ ಹೆಸರು ಇಲ್ಲದೇ ಇರುವುದರಿಂದ ಟ್ರೋಲ್​ ಕೂಡ ಆಗಿದ್ದರು.ಒಂದೆಡೆ ಅಕ್ಕ ವೋಟ್​ ಕೇಳ್ತಿದ್ದಾಳೆ, ಫೈನಲ್​ ಲಿಸ್ಟ್​ನಲ್ಲಿ ಹೆಸರೇ ಇಲ್ಲ ಎಂದು ಲೇವಡಿಮಾಡಿದವರೂ ಹಲವರು. ಆದರೆ ನಿಜ ಕಾರಣ ಬೇರೆನೇ ಇದೆ. ಅಷ್ಟಕ್ಕೂ ಸೆಲೆಕ್ಟ್​ ಆಗಬೇಕಿದ್ದ ಕುಮಾರಿ, ಎಲ್ಲರ ಮನಸ್ಸನ್ನು ಗೆದ್ದ ಈಕೆ ಔಟ್​ ಆಗಿದ್ದು, ವೈದ್ಯರ ಸಲಹೆಯ ಮೇರೆಗೆ ಎನ್ನುವ ಸತ್ಯ ಈಗ ರಿವೀಲ್​ ಆಗಿದೆ.

ಈ ಕುರಿತು ಪ್ರೊಮೋ ಒಂದನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿದೆ. ಅದರಲ್ಲಿ ಆ್ಯಂಕರ್​ ನಿರಂಜನ್​ ಅವರು, ಕುಮಾರಿ ಅವರು ಬಿಗ್​ಬಾಸ್​ ಆಟ ಮುಂದುವರೆಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಇದೇ ಕಾರಣಕ್ಕೆ, ವೈದ್ಯರ ಸಲಹೆ ಮೇರೆಗೆ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನು ಕೇಳಿ ತೀರ್ಪುಗಾರರು ಬೇಸರ ಪಟ್ಟುಕೊಂಡಿದ್ದಾರೆ.

ಕುಮಾರಿ ಕಣ್ಣೀರು

ಬಳಿಕ ಕುಮಾರಿ, ಅಳುತ್ತಲೇ, ನಾನು ಹುಟ್ಟಿದಾಗಿನಿಂದ ಒಂದು ದಿನನೂ ಬೆಂಗಳೂರು ನೋಡೇ ಇರಲಿಲ್ಲ. ಹಾಗಾಗಿ ನಾನು ಊರಿಂದ ಬರುವಾಗ ಎಲ್ಲನೂ ಎಂಜಾಯ್ ಮಾಡಿಕೊಂಡು ಬಂದೆ. ನಾನು ವಾಪಸ್ ಹೋದ್ರೆ ಯಾವಾಗ ಬರುತ್ತೇನೆ ಗೊತ್ತಿಲ್ಲ. ಇದು ಲಾಸ್ಟ್ ಆಗುತ್ತದೆ ಅನ್ನೋದು ನನಗೆ ಬೇಜಾರ್ ಆಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಗ್ನಿಪರೀಕ್ಷೆ ಸ್ಪರ್ಧಿಗೆ ಅಣ್ಣನಾದ 'ಬಿಗ್‌ ಬಾಸ್‌ ಆನೆ'.. ಪ್ರಾಮಿಸ್ ಉಳಿಸಿಕೊಂಡ ವಿನಯ್ ಗೌಡ!
Amruthadhaare Serial: ವರಮಹಾಲಕ್ಷ್ಮಿ ಮೂರ್ತಿಯಿಂದ ಎಡಗಡೆ ಬಿತ್ತು ಹೂವು- ಅಪಶಕುನಕ್ಕೆ ಸಿಕ್ಕಿದೆ ಟ್ವಿಸ್ಟ್​