ಜೈಲಿನಲ್ಲಿ ನಟ ದರ್ಶನ್‌ ಪರಿಸ್ಥಿತಿ ನೋಡೋಕಾಗ್ತಿಲ್ಲ; ಕಣ್ಣಾರೆ ಕಂಡ ನಿರ್ದೇಶಕ ಹೇಳಿದ್ದೇನು?

Published : Oct 25, 2025, 01:47 PM IST
Actor darshan thoogudeepa

ಸಾರಾಂಶ

Actor Darshan Thoogudeepa: ಕಿರುತೆರೆ ನಟಿಯೋರ್ವರು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹೇಮಂತ ರಿಚ್ಚಿ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಆಧಾರದ ಮೇಲೆ ಜೈಲಿಗೆ ಹೋಗಿದ್ದ ಅವರು ದರ್ಶನ್‌ ಪರಿಸ್ಥಿತಿ ಹೇಗಿದೆ ಎಂದು ವಿವರಣೆ ಮಾಡಿದ್ದಾರೆ.

ಕಿರುತೆರೆ ನಟಿಯೋರ್ವರು ನಿರ್ದೇಶಕ ಹೇಮಂತ್ ರಿಚ್ಚಿ ಅವರು ನನ್ನ ಜೊತೆ ಅನುಚಿತವಾಗಿ ನಡೆದುಕೊಂಡರು ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಜೈಲಿಗೆ ಹೋಗಿದ್ದ ರಿಚ್ಚಿ ಅವರೀಗ ಹೊರಗಡೆ ಬಂದಿದ್ದು, ಮಾಧ್ಯಮದ ಜೊತೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾನು ಯಾವುದೇ ತೊಂದರೆ ಕೊಟ್ಟಿಲ್ಲ

“ಆ ನಟಿ ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ರು. ನಾನು ಅವರಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಹಾಗೇನಾದ್ರು ಕಿರುಕುಳ ಕೊಟ್ಟಿದ್ದರೆ ದಾಖಲೆ ತೋರಿಸಲಿ, ನಾನು ಅವರಿಗೆ ಯಾವುದೇ ಮೆಸೆಜ್ ಮಾಡಿಲ್ಲ, ಕಾಲ್ ಮಾಡಿ ಟಾರ್ಚರ್​ ಕೊಟ್ಟಿಲ್ಲ, ಸೋಷಿಯಲ್ ಮೀಡಿಯಾದಲ್ಲೂ ಅವರಿಗೆ ಹಿಂಸೆ ಮಾಡಿಲ್ಲ. ಆದರೆ ಅವರನ್ನು ಸಿನಿಮಾ ಪ್ರಮೋಷನ್​​ಗೆ ಕರೆದಿದ್ದೇನೆ” ಎಂದು ಹೇಳಿದ್ದಾರೆ.

ಜೈಲಿಗೆ ಹೋಗಿ ಬಂದ್ರು

“2023ರಿಂದ ಇಲ್ಲಿಯವರೆಗೆ ನಾನು ಅವರ ಜೊತೆ ಮಾತನಾಡಿಲ್ಲ. ನನ್ನನ್ನು ಜೈಲಿಗೆ ಕಳಿಸಿದ್ರು, ಅಲ್ಲಿ ನರಕ ಅನುಭವಿಸಿ ಬಂದಿದ್ದೇನೆ” ಎಂದು ಹೇಳಿದ್ದಾರೆ. ಅಂದಹಾಗೆ ಹೇಮಂತ್‌ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಆ ವೇಳೆ ಅವರು ದರ್ಶನ್‌ ಪರಿಸ್ಥಿತಿಯನ್ನು ನೋಡಿದ್ದಾರೆ.

ನಟ ದರ್ಶನ್‌ ಹೇಗಿದ್ದಾರೆ?

“ದರ್ಶನ್​​ ಸರ್​​ನ ಜೈಲಿನಲ್ಲಿ ನೊಡೋಕೆ ಆಗುತ್ತಿಲ್ಲ. ಅವರಿಗೆ ತುಂಬ ಬೆನ್ನು ನೋವಿದೆ. ಬೆಳಗ್ಗೆ ಎದ್ದು ಅವರು ಚಾಮುಂಡೇಶ್ವರಿ ತಾಯಿಗೆ ಕೈ ಮುಗಿಯುತ್ತಾರೆ. ನಾನು ಸೆಲ್​3ರಲ್ಲಿ ಇದ್ದೆ, ದರ್ಶನ್ ಅವರು ಸೆಲ್​ ನಂಬರ್ 1ರಲ್ಲಿದ್ದಾರೆ. ಸೊಳ್ಳೆ ಕಾಟ ಹೆಚ್ಚಿದೆ. ಬರಿ ನೆಲದ ಮೇಲೆ ಒಂದು ಜಮಖಾನ ಹಾಕಿಕೊಂಡು ಮಲಗಬೇಕು. ಪೊಲೀಸರ ಟೈಟ್​ ಸೆಕ್ಯೂರಿಟಿ ಇದೆ, ಇಬ್ಬರು ಕಾನ್ಸ್​ಸ್ಟೇಬಲ್​​, ಒಬ್ಬರು ಜೈಲರ್ ದರ್ಶನ್​​​ ಹಿಂದೆಯೇ ಇರುತ್ತಾರೆ. ಯಾರ ಜೊತೆಗೂ ದರ್ಶನ್​ರನ್ನ ಮಾತಾಡೋದಕ್ಕೆ ಬಿಡೋದಿಲ್ಲ. ದರ್ಶನ್​ ಸರ್ ಕುಗ್ಗಿ ಹೋಗಿದ್ದಾರೆ. ವೀಕ್ ಆಗಿದ್ದಾರೆ. ಮನೆಯವರು ಲಾಯರ್ ಬಂದಾಗ ಮಾತ್ರ ಸೆಲ್​ನಿಂದ ಹೊರಗೆ ಬರುತ್ತಾರೆ” ಎಂದು ಹೇಮಂತ್‌ ಹೇಳಿದ್ದಾರೆ.

ಆ ನಟಿ ಹಾಗೂ ಹೇಮಂತ್‌ ರಿಚ್ಚಿ ಅವರ ಮಧ್ಯೆ ಕೆಲ ಸಮಯದಿಂದಲೂ ಮನಸ್ತಾಪ ಇದೆ. ಸಾಕಷ್ಟು ಬಾರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಸಂಧಾನ ಮಾಡಿಕೊಂಡಿದ್ದೂ ಆಗಿದೆ.

ಅಂದಹಾಗೆ ನಟ ದರ್ಶನ್‌ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದಾರೆ. ತಲೆದಿಂಬು, ಹಾಸಿಗೆ ಎಂದು ಒಂದಿಷ್ಟು ಡಿಮ್ಯಾಂಡ್‌ ಮಾಡಿದ್ದರೂ ಕೂಡ, ಅವರು ಕೇಳಿದ ಎಲ್ಲ ಸೌಲಭ್ಯಗಳನ್ನು ನೀಡಲಾಗಿಲ್ಲ, ಇನ್ನು ಅವರ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್‌ ಭೇಟಿಗೆ ಹೋಗಬೇಕು ಎಂದಾಗ ಕೆಲ ಗಂಟೆಗಳ ಕಾಲ ಕಾಯಬೇಕಾಗುವುದು. ಒಟ್ಟಿನಲ್ಲಿ ನಟ ದರ್ಶನ್‌ ಅವರು ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?