ಮದುವೆ ಆದ ಎರಡೇ ತಿಂಗಳಲ್ಲೇ ಗೊತ್ತಾಯ್ತು... ಚಾಹಲ್‌ ವಿಚಾರದಲ್ಲಿ ಹೊಸ ಬಾಂಬ್‌ ಎಸೆದ ಧನಶ್ರೀ ವರ್ಮಾ

Published : Sep 29, 2025, 09:28 PM IST
Yuzi chahal-dhanashree verma

ಸಾರಾಂಶ

Dhanashree Verma on chahal ಕೆಲವು ತಿಂಗಳ ಹಿಂದೆ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಾಗ, ಚಾಹಲ್ ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ "ವಂಚಕ" ಎಂದು ಧನಶ್ರಿ ಕರೆದಿದ್ದಳು ಎಂದಿದ್ದರು.. 

ನವದೆಹಲಿ (ಸೆ.29): ನಟಿ ಮತ್ತು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಮತ್ತು ಕ್ರಿಕೆಟಿಗ ಯಜುವೇಂದ್ರ ಚಾಹಲ್ ನಡುವಿನ ದಾಂಪತ್ಯದ ಕಥೆ ಇನ್ನೂ ಸದ್ದು ಮಾಡುತ್ತಲೇ ಇದೆ. ಅಮೆಜಾನ್ MX ಪ್ಲೇಯರ್‌ನ ರೈಸ್ ಅಂಡ್ ಫಾಲ್ ಕಾರ್ಯಕ್ರಮದ ಭಾಗವಾಗಿರುವ ಧನಶ್ರೀ ವರ್ಮಾ ಅವರ ವೈಯಕ್ತಿಕ ಜೀವನದ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಸಹ ಸ್ಪರ್ಧಿಗಳು ಕೇಳುತ್ತಿದ್ದಾರೆ. ಇನ್ನು ಧನಶ್ರೀ ವರ್ಮಾ ಕೂಡ ವಿವರಗಳನ್ನು ಯಾವುದೇ ಅಂಜಿಕೆ ಇಲ್ಲದೆ ಬಹಿರಂಗಪಡಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮಾತನಾಡುವ ವೇಳೆ, ಚಾಹಲ್‌ ಒಬ್ಬ ಮೋಸಗಾರ ಅನ್ನೋದು ಮದುವೆಯಾದ ಎರಡು ತಿಂಗಳಿಗೆ ಗೊತ್ತಾಗಿತ್ತು ಎಂದಿದ್ದಾರೆ.

ಕಾರ್ಯಕ್ರಮದ ಒಂದು ಭಾಗದಲ್ಲಿ, ಧನಶ್ರೀ ವರ್ಮಾ ಕುಬ್ರಾ ಸೇಠ್ ಜೊತೆ ಕುಳಿತು ಉಪಾಹಾರ ಸೇವಿಸುತ್ತಿರುವುದನ್ನು ತೋರಿಸಲಾಗಿದೆ. ಮಾತುಕತೆಯ ಸಮಯದಲ್ಲಿ, ಮದುವೆಯಾದ ಎರಡನೇ ತಿಂಗಳಲ್ಲಿ ಚಾಹಲ್ ತನಗೆ ಮೋಸ ಮಾಡಿದ್ದ. ಆತನನ್ನು ನಾನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾಗಿ ಧನಶ್ರಿ ವರ್ಮಾ ಹೇಳಿದ್ದಾರೆ.

"ನಿಮ್ಮ ಸಂಬಂಧದಲ್ಲಿ 'ಭಾಯ್, ಯೇ ನಹಿ ಚಲ್ ಸಕ್ತಾ, ಯೇ ಮಿಸ್ಟೇಕ್ ಹೋ ಗಯಾ ಹೈ ಅಭಿ' ಎಂದು ನೀವು ಯಾವಾಗ ಅರಿತುಕೊಂಡಿರಿ? (ನಿಮ್ಮ ಸಂಬಂಧದಲ್ಲಿ ಇದು ಮುಂದುವರಿಯಲು ಸಾಧ್ಯವಿಲ್ಲ ಮತ್ತು ಅದು ತಪ್ಪು ಎಂದು ನೀವು ಯಾವಾಗ ಅರಿತುಕೊಂಡಿರಿ?)," ಎಂದು ಕುಬ್ರಾ ಸೇಠ್‌ ಪ್ರಶ್ನೆ ಮಾಡಿದ್ದರು. ಧನಶ್ರೀ "ಮೊದಲ ವರ್ಷದಲ್ಲೇ ಗೊತ್ತಾಗಿತ್ತು. ಎರಡನೇ ತಿಂಗಳಲ್ಲಿ ಅವನನ್ನು ಹಿಡಿದೆ" ಎಂದು ಹೇಳಿದ ಬಳಿಕ ಕುಬ್ರಾ ಅಚ್ಚರಿಗೊಳಗಾದರು.

ರಾಜ್‌ ಶಮಾನಿ ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾತನಾಡಿದ್ದ ಚಾಹಲ್‌

ಕೆಲವು ತಿಂಗಳ ಹಿಂದೆ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಾಗ, ಚಾಹಲ್ ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ "ವಂಚಕ" ಎಂದು ಧನಶ್ರಿ ಕರೆದಿದ್ದಳು ಎಂದಿದ್ದರು.

"ನನ್ನ ವಿಚ್ಛೇದನ ನಡೆದಾಗ, ಜನರು ನನ್ನನ್ನು ಮೋಸಗಾರ ಎಂದು ಆರೋಪಿಸಿದರು. ನಾನು ನನ್ನ ಜೀವನದಲ್ಲಿ ಎಂದಿಗೂ ಮೋಸ ಮಾಡಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ನೀವು ನನಗಿಂತ ಹೆಚ್ಚು ನಿಷ್ಠಾವಂತ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ. ನಾನು ಯಾವಾಗಲೂ ನನ್ನ ಆತ್ಮೀಯರಿಗಾಗಿ ನನ್ನ ಹೃದಯದಿಂದ ಯೋಚಿಸುತ್ತೇನೆ. ನಾನು ಬೇಡುವುದಿಲ್ಲ, ನಾನು ಯಾವಾಗಲೂ ಕೊಡುತ್ತೇನೆ. ಜನರಿಗೆ ಏನೂ ತಿಳಿದಿಲ್ಲದಿದ್ದಾಗ, ಆದರೆ ಅವರು ನನ್ನನ್ನು ದೂಷಿಸುತ್ತಲೇ ಇರುತ್ತಾರೆ, ಆದ್ದರಿಂದ ನೀವು [ಇಲ್ಲದಿದ್ದರೆ] ಯೋಚಿಸಲು ಪ್ರಾರಂಭಿಸುತ್ತೀರಿ" ಎಂದು ಚಾಹಲ್‌ ಹೇಳಿದ್ದರು.

"ನನಗೆ ಇಬ್ಬರು ಸಹೋದರಿಯರಿದ್ದಾರೆ ಮತ್ತು ಬಾಲ್ಯದಿಂದಲೂ ಅವರೊಂದಿಗೆ ಬೆಳೆದಿದ್ದರಿಂದ, ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿದೆ, ಏಕೆಂದರೆ ನನ್ನ ಪೋಷಕರು ಅವರನ್ನು ಹೇಗೆ ಗೌರವಿಸಬೇಕೆಂದು ನನಗೆ ಕಲಿಸಿದ್ದಾರೆ. ನನ್ನ ಸುತ್ತಮುತ್ತಲಿನ ಜನರಿಂದ ನಾನು ನನ್ನ ಜೀವನ ಪಾಠಗಳನ್ನು ಕಲಿತಿದ್ದೇನೆ. ನನ್ನ ಹೆಸರನ್ನು ಯಾರೊಂದಿಗಾದರೂ ಲಿಂಕ್ ಮಾಡಿದ್ದರೆ, ಜನರು ಅದರ ಬಗ್ಗೆ ಏನನ್ನಾದರೂ ಬರೆಯಬೇಕು, ಕೇವಲ ಅಭಿಪ್ರಾಯಗಳಿಗಾಗಿ ಮಾತ್ರ" ಎಂದು ಕ್ರಿಕೆಟಿಗ ಹೇಳಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!