ತೆಲುಗು ಪರ ನಿಂತು ಕನ್ನಡ ಬಗ್ಗೆ ತಪ್ಪು ಮಾತನಾಡಿದ ನಟಿ ಆಶಿಕಾ, ಚಂದು ಗೌಡ ಬಹಿರಂಗ ಕ್ಷಮೆ!

Suvarna News   | Asianet News
Published : Jun 04, 2021, 02:46 PM ISTUpdated : Jun 04, 2021, 03:31 PM IST
ತೆಲುಗು ಪರ ನಿಂತು ಕನ್ನಡ ಬಗ್ಗೆ ತಪ್ಪು ಮಾತನಾಡಿದ ನಟಿ ಆಶಿಕಾ, ಚಂದು ಗೌಡ ಬಹಿರಂಗ ಕ್ಷಮೆ!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಭಾಷೆಯನ್ನು ತಪ್ಪಾಗಿ ಗೂಗಲ್ ತೋರಿಸುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿರುವ ಸಮಯದಲ್ಲಿಯೇ ಚಂದು ಗೌಡ ಮತ್ತು ಆಶಿಕಾ ಮಾಡಿರುವ ತಪ್ಪೂ ಅದ್ಹೇಗೋ ಗೊತ್ತಿಲ್ಲ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.   

ಗೂಗಲ್‌ನಿಂದ ಕನ್ನಡಕ್ಕೆ ಅವಮಾನ ಆಗಿದೆ. Uglist ಭಾಷೆ ಕನ್ನಡ ಅಲ್ಲ, ಗೂಗಲ್ ಹುಟ್ಟಿಕೊಳ್ಳುವ ಮುನ್ನ ಕನ್ನಡ ಹುಟ್ಟಿದ್ದು. ಹೀಗಾಗಿ ಕನ್ನಡ Queens of all languages ಅಂತ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಸಾಮಾನ್ಯರು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಧ್ವನಿ ಎತ್ತಿದ್ದಾರೆ. ಈ ಸಮಯದಲ್ಲಿ ಕಿರುತೆರೆ ನಟ ಚಂದು ಗೌಡ ಮತ್ತು ಆಶಿಕಾ ಪಡುಕೋಣೆ ನೀಡಿ ಹೇಳಿಕೆ ವೈರಲ್ ಆಗುತ್ತಿದೆ. 

ಹೌದು! ಆಶಿಕಾ ಈ ಹಿಂದೆ ಖಾಸಗಿ ಸಂದರ್ಶನವೊಂದರಲ್ಲಿ 'ಬೆಂಗಳೂರಿನಲ್ಲಿ ಇರುವ ಶೇ.70 ರಿಂದ ಶೇ.80ರಷ್ಟು ಮಂದಿ ತೆಲುಗು ಜನರೇ ಇದ್ದಾರೆ,' ಎಂದು ಹೇಳಿದ್ದರು.  ಇಬ್ಬರೂ ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು, ಇದೀಗ ತೆಲುಗು ಚಿತ್ರರಂಗಕ್ಕೆ ಹಾರಿದ ತಕ್ಷಣ ನಿಮ್ಮ ದಾಟಿ ಬದಲಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.  ವಿಷಯ ಗಂಭೀರ ಆಗುತ್ತಿದ್ದಂತೆ, ಇಬ್ಬರೂ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.

ಗೂಗಲ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ರಾಜ್ಯ ಸರ್ಕಾರ 

'ನಾನು ಹುಟ್ಟಿ, ಬೆಳದಿದ್ದು ಬೆಂಗಳೂರಿನಲ್ಲಿ. ಕನ್ನಡ ನನ್ನ ಮಾತೃಭಾಷೆ.  ಶೇ.1ರಷ್ಟು ಅದರ ಮೇಲಿರುವ ಪ್ರೇಮವೂ ಕಡಿಮೆ ಆಗುವುದಿಲ್ಲ. ಆ ಸಂದರ್ಶನವನ್ನು ದಯವಿಟ್ಟು ಪೂರ್ತಿಯಾಗಿ ನೋಡಿದರೆ ನಾವು ಅದರಲ್ಲಿ ತಪ್ಪಾಗಿ ಮಾತನಾಡಿಲ್ಲ ಎಂಬುವುದು ನಿಮಗೆ ಗೊತ್ತಾಗುತ್ತದೆ. ನಾನು ಕನ್ನಡ ಭಾಷೆಯನ್ನು ಅಗೌರವಿಸುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ದುಡ್ಡಿಗೋಸ್ಕರ ಕನ್ನಡವನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ನಮ್ಮ ಮೇಲೆ ಅರೋಪ  ಮಾಡಲಾಗುತ್ತಿದೆ. ಅಷ್ಟು ಕೀಳು ಮಟ್ಟಕ್ಕೆ ನಾವು ಇಳಿದಿಲ್ಲ,' ಎಂದು ಚಂದು ಗೌಡ ಮಾತನಾಡಿದ್ದಾರೆ.

'ನಮ್ಮಂಥ ಚಿಕ್ಕ ಕಲಾವಿದರನ್ನು ಯಾಕೆ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದೀರಿ? ಸಂದರ್ಶನದ ಸಣ್ಣ ವಿಡಿಯೋ ಇಟ್ಟುಕೊಂಡು, ಬೇರೆ ಅರ್ಥ ಕಲ್ಪಿಸಬೇಡಿ.  ನಮ್ಮ ಮಾತುಗಳಿಂದ ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ, ದಯವಿಟ್ಟು ಕ್ಷಮಿಸಿ.  ನಾವು ಬೇರೆ ರಾಜ್ಯಕ್ಕೆ ಹೋದರೂ ಕನ್ನಡ ಮರೆತಿಲ್ಲ,' ಎಂದು ಇಬ್ಬರೂ ವಿಡಿಯೋದಲ್ಲಿ ಮಾತನಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...