ಬಿಗ್​ಬಾಸ್​ ಸಂಗೀತಾಗೆ ಕ್ರಷ್​ ಆಫ್​ ಕರ್ನಾಟಕ ಬಿರುದು- ಕರಿಮಣಿ ಮಾಲಿಕ ಯಾರು ಎಂದಾಗ ಹೇಳಿದ್ದೇನು?

By Suvarna NewsFirst Published Feb 25, 2024, 4:14 PM IST
Highlights

ಬಿಗ್​ಬಾಸ್​ ಸಂಗೀತಾಗೆ ಸಿಕ್ತು ಕ್ರಷ್​ ಆಫ್​ ಕರ್ನಾಟಕ ಬಿರುದು. ಕರಿಮಣಿ ಮಾಲಿಕ ಯಾರು ಎಂಬ ಪ್ರಶ್ನೆ ಕೇಳ್ತಿದ್ದಂತೆಯೇ ಸಂಗೀತಾ ಹೇಳಿದ್ದೇನು?
 

 ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್​ಬಾಸ್​ನ ಕೆಲವು ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ನ ವಿನಯ್​, ಕಾರ್ತಿಕ್​, ಸಂಗೀತಾ ಶೃಂಗೇರಿ ಹಾಗೂ ಡ್ರೋನ್​ ಪ್ರತಾಪ್​ ಕಾಣಿಸಿಕೊಂಡಿದ್ದಾರೆ.  ಇದೇ ವೇದಿಕೆಯ ಮೇಲೆ ಪರ್ಫಾಮ್​ ಮಾಡಿದ್ದಾರೆ. ಬಿಗ್​ಬಾಸ್​ ಪ್ರೇಮಿಗಳಿಗೆ ತಿಳಿದಿರುವಂತೆ ಕಾರ್ತಿಕ್​, ಬಿಗ್​ಬಾಸ್​ ವಿನ್ನರ್​ ಆಗಿ ಹೊರಹೊಮ್ಮಿದ್ದರೆ, ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಶೃಂಗೇರಿ ಅವರು ರನ್ನರ್ಸ್​ ಅಪ್​ ಆಗಿದ್ದಾರೆ. ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ.    ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.   ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ. ಅದೇ ರೀತಿ ಹೊಸಪೇಟೆಯಲ್ಲಿಯೂ ಬಿಗ್​ಬಾಸ್​ನ ದೊಡ್ಡ ಅಭಿಮಾನಿ ಬಳಗವೇ ಇದೆ. 

ಈ ಸಮಯದಲ್ಲಿ ಆ್ಯಂಕರ್​ ನಿರಂಜನ್​ ದೇಶಪಾಂಡೆಯವರು, ಸಂಗೀತಾ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ  ಜನರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.  ಸಂಗೀತಾ ಅವ್ರು ಸ್ಟ್ರೇಟ್​ ಫಾರ್ವರ್ಡ್​ ಆಗಿ ರೆಬೆಲ್​ ಆಗಿ ಡಿಸಿಷನ್​ ತಗೊಂಡ್ರು ಎಂದಾಗ ಎಲ್ಲರೂ ಎಸ್​ ಎಂದು ಹೇಳಿದರು. ಸಂಗೀತಾ ಅವರಿಗೆ ಕೋಪ ಜಾಸ್ತಿ ಎಂದಾಗಲೂ ಹೌದು ಹೌದು ಎಂದರು ಜನ. ಅದಕ್ಕೆ ಸಂಗೀತಾ, ನನಗೆ ಕೋಪ ಬರಿಸುವವರು ಇದ್ರೆ, ಕೋಪ ಜಾಸ್ತಿನೇ ಬರುತ್ತದೆ, ಇದರಲ್ಲಿ ತಪ್ಪೇನು ಎಂದು ಕೇಳಿದರು. 

ಹೆಂಡ್ತಿಯನ್ನು ಯಾಕೆ ಅಷ್ಟು ಲವ್​ ಮಾಡ್ತೀರಿ ಅಂತ ಯುವತಿ ಕೇಳಿದಾಗ ಹೀಗೆ ಹೇಳೋದಾ ಬಿಗ್​ಬಾಸ್​ ವಿನಯ್​?

ಇದೇ ವೇಳೆ ಸಂಗೀತಾ ಅವರಿಗೆ ಕ್ರಷ್​ ಆಫ್​ ಕರ್ನಾಟಕ ಎನ್ನುವ ಬಿರುದು ಕೂಡ ಸಿಕ್ಕಿತು. ಇದಕ್ಕೆ ಕಾರಣ ಏನೆಂದ್ರೆ, ನಿರಂಜನ್​ ಅವರು, ಅಸಮರ್ಥರಾಗಿ ಆರೇಂಜ್​ ಬಟ್ಟೆ ಹಾಕಿಕೊಂಡು ಒಳಗೆ ಹೋದ ಸಂಗೀತಾ ಮೇಲೆ ಕರ್ನಾಟಕಕ್ಕೆ ಕ್ರಷ್​ ಇದೆ ಎಂದಾಗಿ ಅಲ್ಲಿ ನೆರೆದಿದ್ದ ಬಹುತೇಕ ಮಂದಿ ಎಸ್​ ಎಸ್​ ಎಂದರು. ಆಗ ನಿರಂಜನ್​ ಅವರು ಸಂಗೀತಾ ಕರ್ನಾಟಕದ ಕ್ರಷ್​ ಎಂದಾಗ ಎಲ್ಲರೂ ಹೌದು ಹೌದು ಎಂದರು. ಆಗ ಸಂಗೀತಾ ಅವರು, ನನಗೂ ಇದರ ಅನುಭವವಾಯಿತು. ಎರಡನೆಯ ವಾರದಲ್ಲಿಯೇ ಜನರು ನನ್ನ ಮೇಲೆ ತೋರಿದ ಪ್ರೀತಿ ನೋಡಿ ಖುಷಿಯಾಯಿತು ಎಂದರು.
 
ನಂತರ ನಿರಂಜನ್​ ಅವರು, ಬಿಗ್​ಬಾಸ್​ ಮನೆಗೆ ಬಂದಿದ್ದ ಜ್ಯೋತಿಷಿ ನಿಮ್ಮ ಮದ್ವೆ ಅತಿ ಶೀಘ್ರದಲ್ಲಿ ಆಗುತ್ತದೆ ಎಂದರು.  ಹಾಗಿದ್ದರೆ ಕರಿಮಣಿ ಮಾಲಿಕ ಎನ್ನುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಜನರೆಲ್ಲರೂ ಎದುರಿಗೆ ಕುಳಿತ ಕಾರ್ತಿಕ್​ರತ್ತ ಕೈ ಮಾಡಿ ತೋರಿಸಿದರು. ಆಗ ಸಂಗೀತ ತುಸು ಕೋಪಗೊಂಡು, ನಾನು ಎಷ್ಟು ಚೆನ್ನಾಗಿದ್ದೀನಿ, ಖುಷಿಖುಷಿಯಾಗಿದ್ದೀನಿ, ನಿಮಗ್ಯಾರಿಗೂ ಇದನ್ನು ನೋಡೋಕೆ ಆಗಲ್ವಾ ಎಂದು ಕೇಳಿದರು. ಬಳಿಕ ಅಲ್ಲಿಗೆ ಸುಮ್ಮನಾಗದ ನಿರಂಜನ್​ ಅವರು, ಸಂಗೀತಾ ಮದ್ವೆಯಾಗುವ ಹುಡುಗ ಇಲ್ಲಿಯೇ ಇದ್ದಾನೆ ಎಂದಾಗಲೂ ಎಲ್ಲರೂ ಹೌದು ಹೌದು ಎಂದರು. ಅಷ್ಟಕ್ಕೂ ಬಿಗ್​ಬಾಸ್​​ ಮನೆಯಲ್ಲಿ ಸಂಗೀತಾ ಮತ್ತು ಕಾರ್ತಿಕ್​ ನಡುವೆ ಕೆಲ ವಾರ  ಗಾಢ ಪ್ರೀತಿ ಬೆಳೆದಿತ್ತು.  ನಂತರ ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು. ಆದರೆ ಹೊರ ಬಂದ ಮೇಲೂ ಇವರ ಮದ್ವೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಕಾರ್ಯಕ್ರಮವೊಂದರಲ್ಲಿ ಖುದ್ದು ಕಾರ್ತಿಕ್​ ತಾಯಿ ಕೂಡ ಇದೇ ವೇದಿಕೆಯಲ್ಲಿಯೇ ಕಾರ್ತಿಕ್​ ಅವರನ್ನು ಮದ್ವೆಯಾಗುವ ಹುಡುಗಿ ಇದ್ದಾಳೆ ಎಂದೂ ಹೇಳಿದ್ದರು. ಇದೀಗ ಮತ್ತದೇ ಪ್ರಶ್ನೆ ಎದುರಾಗಿದೆ. 

ಸುಂಟರಗಾಳಿ ಪ್ರತಾಪ್​! ಒಂದ್ಸಲ ಆಗ್ಲಿಲ್ಲ... ಎರಡು ಸಲ ಆಗ್ಲಿಲ್ಲ ಎನ್ನುತ್ತಲೇ ಡ್ರೋನ್​ ಮಾಡಿದ್ರೊಂದು ಹೊಸ ಟ್ರಿಕ್ಸ್​!
 

click me!