
ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯರಲ್ಲಿ ಅಪ್ಸರಾ ಕೂಡ ಒಬ್ಬರು. 'ಸಾಂತ್ವನಂ' ಸೀರಿಯಲ್ನಲ್ಲಿ ಜಯಂತಿ ಅನ್ನೋ ವಿಲನ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದರು. ನಂತರ 'ಬಿಗ್ ಬಾಸ್ ಮಲಯಾಳಂ ಸೀಸನ್ 6'ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯರಾದರು. ಇತ್ತೀಚೆಗೆ ಅಪ್ಸರಾ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಕೆಲವು ನಿರ್ಧಾರಗಳ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಾನು ಅಂದುಕೊಂಡಿದ್ದನ್ನು ಇನ್ನೂ ಸಾಧಿಸಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
"ನನಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು, ಸನ್ಮಾನಗಳು ಸಿಕ್ಕಿವೆ. ಅದರಿಂದ ಏನಾಯ್ತು ಅಂದ್ರೆ, ಅವೆಲ್ಲಾ ಶೋಕೇಸ್ನಲ್ಲಿ ಇಟ್ಟಿದ್ದೇನೆ, ಅಷ್ಟೇ. ಇಷ್ಟು ಪ್ರಶಸ್ತಿಗಳು ಸಿಗದವರೂ ಕೂಡ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ನಾನು ಏನಾದರೂ ಸಾಧಿಸಿದ್ದೇನಾ ಎಂದು ಕೇಳಿದರೆ, ಹೌದು ಎನ್ನಬಹುದು, ಇಲ್ಲ ಎಂದೂ ಹೇಳಬಹುದು. ಸುಮಾರು 36 ಸೀರಿಯಲ್ಗಳಲ್ಲಿ ನಟಿಸಿದ್ದೇನೆ. ಹನ್ನೆರಡಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. 'ಬಡಾಯಿ ಬಂಗ್ಲಾ' ಮತ್ತು 'ಬಿಗ್ ಬಾಸ್' ಸೇರಿದಂತೆ ಹಲವು ಶೋಗಳನ್ನು ಮಾಡಿದ್ದೇನೆ. ಯಾವುದೇ ಪ್ರತಿಭೆ ಇಲ್ಲದವಳಿಗೆ ಇಷ್ಟೆಲ್ಲಾ ಮಾಡಲು ಸಾಧ್ಯವಿಲ್ಲ ಅಲ್ವಾ? ಹಾಗಂತ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನಾ ಎಂದು ಕೇಳಿದರೆ, ನನ್ನ ಉತ್ತರ ಇಲ್ಲ ಅಂತಾನೇ," ಎಂದು ಅಪ್ಸರಾ ಹೇಳಿದ್ದಾರೆ.
"ನನ್ನ ಜೀವನ ಬದಲಾಗಿದ್ದು 16 ರಿಂದ 19ನೇ ವಯಸ್ಸಿನಲ್ಲಿ. 16ನೇ ವಯಸ್ಸಿಗೆ ನಾನು ಸೀರಿಯಲ್ಗೆ ಬಂದೆ. ಆಗ ಸಿಕ್ಕ ಸೀರಿಯಲ್ಗಳನ್ನೆಲ್ಲಾ ಒಪ್ಪಿಕೊಂಡು ನಟಿಸುತ್ತಿದ್ದೆ. ನನ್ನ ಬಗ್ಗೆ ನಾನೇ ಪ್ರಚಾರ ಮಾಡಿಕೊಂಡಿಲ್ಲ. ಹತ್ತೊಂಬತ್ತು-ಇಪ್ಪತ್ತು ವರ್ಷ ಆಗುವಷ್ಟರಲ್ಲಿ ನನ್ನ ಮೊದಲ ಮದುವೆ ಆಯಿತು. ಜೀವನದಲ್ಲಿ ಯಾವುದೇ ಪ್ಲ್ಯಾನಿಂಗ್ ಇರಲಿಲ್ಲ. ಆ ವಯಸ್ಸಿನಲ್ಲಿ ಯಾರೂ ಮದುವೆಯಾಗಬಾರದು. ಈ ಇಂಡಸ್ಟ್ರಿಗೆ ಬರುವ ಹೊಸಬರಿಗೆ ನಾನೀಗ ಹೇಳುವುದೇನೆಂದರೆ, ನಿಮ್ಮ ಜೀವನ ಮತ್ತು ವೃತ್ತಿ ಬಗ್ಗೆ ಹೆಚ್ಚು ಗಮನ ಕೊಡಿ. ಯಾರೊಬ್ಬರಿಗಾಗಿಯೂ ನಿಮ್ಮ ಸಮಯ, ಜೀವನ, ಪ್ರೀತಿ ಯಾವುದನ್ನೂ ಪೂರ್ತಿಯಾಗಿ ಇನ್ವೆಸ್ಟ್ ಮಾಡಬೇಡಿ. ಮೊದಲ ಆದ್ಯತೆ ಯಾವಾಗಲೂ ನಮಗೇ ಇರಬೇಕು," ಎಂದು ಅಪ್ಸರಾ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.