
ಇದೀಗ ಸೈಬರ್ ದಾಳಿಗಳು ಹೆಚ್ಚಾಗಿವೆ. ಮೊಬೈಲ್ನಲ್ಲಿಯೇ ಬ್ಯಾಂಕ್ ವಹಿವಾಟುಗಳು ಹೆಚ್ಚಿರುವ ಕಾರಣದಿಂದ, ಸೈಬರ್ ಕ್ರಿಮಿನಲ್ಸ್ ಸುಲಭದಲ್ಲಿ ದಾಳಿ ಮಾಡುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಬ್ಯಾಂಕ್ನಲ್ಲಿ ಇರುವ ಎಲ್ಲಾ ದುಡ್ಡುಗಳೂ ಗುಳುಂ ಆಗುತ್ತವೆ. ಇವಿಷ್ಟೇ ಅಲ್ಲದೇ ಫೋನ್ ಹ್ಯಾಕ್ ಮಾಡಲು ಕೂಡ ಇದು ಅನುವು ಮಾಡಿಕೊಡುತ್ತದೆ. ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ಅರಿವಿಗೆ ಬಾರದೇ ದುಡ್ಡು ಹೋಗುತ್ತಿದ್ದರೆ, ಇನ್ನು ಕೆಲವು ಸಲ ನಿಮ್ಮ ಹೆಸರಿನಲ್ಲಿ ಇನ್ನಾರಿಗೋ ಏನೇನೋ ಕೆಟ್ಟ ಸಂದೇಶಗಳು, ಲಿಂಕ್ಗಳು ಹೋಗುತ್ತಿರುತ್ತವೆ. ಹೀಗೆ ಹೋದಾಗ ಅಲ್ಲಿ ನಿಮ್ಮ ಮೊಬೈಲ್ ಫೋನ್ನಿಂದಲೇ ಹೋದ ಹಾಗೆ ಕಾಣಿಸುತ್ತದೆ.
ಇವೆಲ್ಲವಕ್ಕೂ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಮೊಬೈಲ್ನಲ್ಲಿ ಕೂಡಲೇ ಈ ಸೆಟ್ಟಿಂಗ್ಸ್ ಆಫ್ ಮಾಡಿಕೊಳ್ಳಲು ಸಲಹೆ ಕೊಟ್ಟಿದ್ದಾರೆ. ಬೈ ಡಿಫಾಲ್ಟ್ ಬಹುತೇಕ ಸ್ಮಾರ್ಟ್ಫೋನ್ಗಳಲ್ಲಿ ಈ ಸೆಟ್ಟಿಂಗ್ಸ್ ಆನೇ ಇರುತ್ತದೆ. ಆದ್ದರಿಂದ ನೀವು ಖುದ್ದಾಗಿ ಹೋಗಿ ಅದನ್ನು ಆಫ್ ಮಾಡಬೇಕು. ಕೆಲವೊಂದು ಆಫ್ ಇದ್ದು, ಅದನ್ನು ಆನ್ ಮಾಡಬೇಕು.
ಈ ಬಗ್ಗೆ ಬೆಂಗಳೂರು ಪೊಲೀಸರು ಹೇಳಿರುವ ಮಾಹಿತಿ ಇಲ್ಲಿದೆ. ನೀವು ಮಾಡಬೇಕಿರುವುದು ಏನು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.