ಫ್ರೀ ಬಸ್‌ ಪ್ರಯಾಣ: ಇಡೀ ಬಸ್‌ ಉಚಿತ ಬುಕ್‌ ಮಾಡಲು ಬಂದ ಮಹಿಳೆ..!

Published : Jun 18, 2023, 01:06 PM IST
ಫ್ರೀ ಬಸ್‌ ಪ್ರಯಾಣ: ಇಡೀ ಬಸ್‌ ಉಚಿತ ಬುಕ್‌ ಮಾಡಲು ಬಂದ ಮಹಿಳೆ..!

ಸಾರಾಂಶ

ಬಸ್‌ಗಳಲ್ಲಿ ಕೇವಲ ಶೇ.50ರಷ್ಟು ಮಾತ್ರ ಮಹಿಳಾ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಶೇ.50 ಪುರುಷ ಪ್ರಯಾಣಿಕರು ಇರುತ್ತಾರೆ. ಮಹಿಳೆಯರು ಪ್ರವಾಸ ಅಥವಾ ಇನ್ನಿತರ ಕಾರ್ಯಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ಹಣ ಕೊಟ್ಟು ಬಸ್‌ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಅದಕ್ಕೆ ಶಕ್ತಿ ಯೋಜನೆ ಅನ್ವಯ ಆಗುವುದಿಲ್ಲ. 

ಬೆಂಗಳೂರು(ಜೂ.18):  ಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶವಿದೆ ಎಂದು ಮಹಿಳೆಯೊಬ್ಬರು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲು ಇಡೀ ಬಸ್ಸನ್ನು ಬುಕ್‌ ಮಾಡಲು ಮುಂದಾಗಿರುವ ಕುತೂ​ಹ​ಲ​ಕ​ರ ಬೆಳಕಿಗೆ ಬಂದಿದೆ. ಆದ​ರೆ ನಿಯ​ಮಾ​ನು​ಸಾರ ಇದಕ್ಕೆ ಅವ​ಕಾ​ಶ​ವಿಲ್ಲ ಎಂದು ಹೇಳಿ ಕೆಎ​ಸ್ಸಾ​ರ್ಟಿಸಿ ಸಿಬ್ಬಂದಿ ವಾಪಸು ಕಳಿ​ಸಿ​ದ್ದಾ​ರೆ.

ಬೆಂಗ​ಳೂ​ರಿನ ಬ್ಯಾಡರಹಳ್ಳಿಯ ನಿವಾಸಿ ಸುನಂದಾ ಎಂಬುವರು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ವಿಚಾರಣಾ ಕೇಂದ್ರಕ್ಕೆ ಬಂದಿದ್ದು, ಯಾವ ಧಾರ್ಮಿಕ ಕ್ಷೇತ್ರಗಳಿಗೆ ಎಷ್ಟು ಗಂಟೆಗೆ ಬಸ್‌ಗಳು ಇವೆ ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಿ ಬರೆದಿಟ್ಟು ಕೊಂಡಿದ್ದರು. ಅಲ್ಲದೇ 48 ಆಸನಗಳಿರುವ ಬಸ್‌ ಬುಕ್ಕಿಂಗ್‌ ಮಾಡುವ ಬಗ್ಗೆಯೂ ವಿಚಾರಿಸಿದರು ಎಂದು ಮೂಲಗಳು ತಿಳಿಸಿವೆ.

'ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್‌' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು

ಧಾರ್ಮಿಕ ಕ್ಷೇತ್ರಗಳಿಗೆ ಮಹಿಳಾ ತಂಡದೊಂದಿಗೆ ಹೋಗುವ ಚಿಂತನೆ ನಡೆಸಿದ್ದ ಅವರು, ಈಗಾಗಲೇ 20 ಮಹಿಳೆಯರ ತಂಡ ಮಾಡಿಕೊಂಡಿದ್ದರು. ಮಹಿಳಾ ಸಂಘಗಳು, ಕುಟುಂಬದವರು ಸೇರಿ 25 ಮಹಿಳೆಯರನ್ನು ಒಗ್ಗೂಡಿಸಿ ಒಟ್ಟು 45 ಮಂದಿ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ತೆರಳುವ ಚಿಂತನೆ ಅವರದ್ದಾಗಿತ್ತು. ಅದಕ್ಕಾಗಿ ತಲಾ 20 ರು. ಕೊಟ್ಟು ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳುವ ಯೋಜನೆಯೂ ಇತ್ತು ಎನ್ನಲಾಗಿದೆ. ಆದರೆ ಇದಕ್ಕೆ ಕೆಎಸ್ಸಾರ್ಟಿಸಿ ಸಿಬ್ಬಂದಿ ಅವಕಾಶ ನೀಡಿ​ಲ್ಲ.

ನಿರಾ​ಕ​ರಣೆ ಏಕೆ?

ಬಸ್‌ಗಳಲ್ಲಿ ಕೇವಲ ಶೇ.50ರಷ್ಟು ಮಾತ್ರ ಮಹಿಳಾ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಶೇ.50 ಪುರುಷ ಪ್ರಯಾಣಿಕರು ಇರುತ್ತಾರೆ. ಮಹಿಳೆಯರು ಪ್ರವಾಸ ಅಥವಾ ಇನ್ನಿತರ ಕಾರ್ಯಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ಹಣ ಕೊಟ್ಟು ಬಸ್‌ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಅದಕ್ಕೆ ಶಕ್ತಿ ಯೋಜನೆ ಅನ್ವಯ ಆಗುವುದಿಲ್ಲ ಎಂದು ಮಹಿಳೆಗೆ ಮಾಹಿತಿ ನೀಡಿರುವುದಾಗಿ ಕೆಎಸ್‌ಆರ್‌ಟಿಸಿ ವಿಚಾರಣಾ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ