ರಾಜ್ಯಾದ್ಯಂತ ಶನಿವಾರ ರಾತ್ರಿಯಿಂದಲೇ ಲಾಕ್​ಡೌನ್: ಏನಿರುತ್ತೆ..ಏನಿರಲ್ಲ..?

Published : Jul 25, 2020, 08:58 PM ISTUpdated : Jul 26, 2020, 04:17 PM IST
ರಾಜ್ಯಾದ್ಯಂತ ಶನಿವಾರ ರಾತ್ರಿಯಿಂದಲೇ ಲಾಕ್​ಡೌನ್: ಏನಿರುತ್ತೆ..ಏನಿರಲ್ಲ..?

ಸಾರಾಂಶ

ರಾಜ್ಯದಲ್ಲಿ ಕೋವಿಡ್​ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ 36 ಗಂಟೆಗಳ ಕಾಲ ವೀಕೆಂಡ್ ಲಾಕ್‌ಡೌನ್  ಲಾಕ್​ಡೌನ್ ಜಾರಿಯಾಗಿದೆ. ಈ ವೇಳೆ ಏನಿರುತ್ತೆ..ಏನಿರಲ್ಲ..? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಜುಲೈ.25): ರಾಜ್ಯದಲ್ಲಿ ಕೋವಿಡ್​ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ವೀಕ್ ಎಂಡ್ ಲಾಕ್​ಡೌನ್ ಅಸ್ತ್ರ ಬಳಸಿದ್ದು, ಇಂದು(ಜು.25) ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರವರೆಗೆ ರಾಜ್ಯ ವ್ಯಾಪಿ ಲಾಕ್​ಡೌನ್​ ಜಾರಿಯಲ್ಲಿರಲಿದೆ. 

"

ಭಾನುವಾರದ ರಜೆ ಗುಂಗಿನಲ್ಲಿ ಹೊರಗೆ ಬರುವ ಬದಲು ಜನರು ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು.  ವೀಕೆಂಡ್ ಲಾಕ್​ಡೌನ್​ ವೇಳೆ ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶವಿದೆ.

ಶನಿವಾರ ರಾಜ್ಯದಲ್ಲಿ ಬೆಚ್ಚಿಬೀಳಿಸಿದ ಕೊರೋನಾ: ಆದ್ರೂ ಇದೆ ಸ್ವಲ್ಪ ಸಮಾಧಾನ

36 ಗಂಟೆಗಳ ಕಾಲ ಲಾಕ್​ಡೌನ್ ಜಾರಿ ಆಗಿದ್ದು, ನಿಷೇಧಾಜ್ಞೆ ನಡುವೆ ಜನರು ಬೇಕಾಬಿಟ್ಟಿಯಾಗಿ ರಸ್ತೆಗೆ ಇಳಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ವಾಹನಗಳು ಜಪ್ತಿ ಆಗಲಿದ್ದು, ದಂಡ ಬೀಳಲಿದೆ. ಭಾನುವಾರ ಏನಿರುತ್ತೆ..ಏನಿರಲ್ಲ..? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಭಾನುವಾರ ಏನಿರಲ್ಲ..?
* ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ..!
* ಅಗತ್ಯ ವಸ್ತು ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್..!
*ಬಾರ್,ಬ್ಯೂಟಿ ಪಾರ್ಲರ್,ಸಲೂನ್,ಸ್ಪಾ,ಬಟ್ಟೆ ಅಂಗಡಿ,ಚಪ್ಪಲಿ ಅಂಗಡಿ ಮುಂಗಟ್ಟುಗಳು ಬಂದ್..!
* ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿದಂತೆ ಎಲ್ಲಾ ಕಾರ್ಖಾನೆಗಳು ಲಾಕ್
* ಖಾಸಗಿ ಕಂಪನಿಗಳೂ ಕೂಡ ಬಂದ್
* ಎಲ್ಲಾ ಪಾರ್ಕ್ ಗಳಿಗೂ ಬೀಗ,ಜಾಗಿಂಗ್ ವಾಕಿಂಗ್ ಇಲ್ಲ..
* ಚಿನ್ನದ ಅಂಗಡಿಗಳು ಕೂಡ ಬಂದ್..!
* ಆಟೋ,ಟ್ಯಾಕ್ಸಿ ಕ್ಯಾಬ್ ಗಳು ರಸ್ತೆಗೆ ಇಳಿಯುವಂತಿಲ್ಲ..
* ಖಾಸಗಿ ವಾಹನ‌ ಬಳಸಿ ಓಡಾಡುವ ಹಾಗಿಲ್ಲ..
* ಬೇರೆ ಜಿಲ್ಲೆಗೆ ಹೋಗಲು ಇಲ್ಲ ಅನುಮತಿ

ಏನಿರುತ್ತೆ..?
* ಹಣ್ಣು,ತರಕಾರಿ,ದಿನಸಿ, ಮಾಂಸದ ಅಂಗಡಿಗೆ ಅವಕಾಶ
* ಆಸ್ಪತ್ರೆಗಳು,ಮೆಡಿಕಲ್ ಸ್ಟೋರ್ಸ್,ಫಾರ್ಮಸಿ ಗಳಿಗೆ ಅವಕಾಶ
* ಮಾಧ್ಯಮಗಳಿಗೆ ಓಡಾಡಲು ಅನುಮತಿ
* ಡಾಕ್ಟರ್ಸ್,ನರ್ಸ್,ಆ್ಯಂಬುಲೆನ್ಸ್ ಓಡಾಟಕ್ಕೆ ಅವಕಾಶ..
* ಡಯಾಲಿಸಿಸ್,ಅನಾರೋಗ್ಯ ಸಮಸ್ಯೆ ಇದ್ದವರ ಓಡಾಟಕ್ಕೆ ಅನುಮತಿ
* ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು ಅನುಮತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ