'ಅತೀ ಕಡಿಮೆ ಬೆಲೆ ಖರೀದಿ : ದುಬಾರಿ ಬೆಲೆ ಮಾರಾಟ -ಕೃಷಿ ಕಾಯ್ದೆ ಹುನ್ನಾರ'

Kannadaprabha News   | Asianet News
Published : Mar 31, 2021, 07:06 AM IST
'ಅತೀ ಕಡಿಮೆ ಬೆಲೆ ಖರೀದಿ : ದುಬಾರಿ ಬೆಲೆ ಮಾರಾಟ -ಕೃಷಿ ಕಾಯ್ದೆ ಹುನ್ನಾರ'

ಸಾರಾಂಶ

ನಮಗೆ ಈ ನೂತನ ಕೃಷಿ ಕಾಯ್ದೆ ಬೇಡವೆ ಬೇಡ. ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಹುನ್ನಾರ ಇದು ಎಂದು ರೈತ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ ಹೇಳಿದ್ದಾರೆ. 

ಧಾರವಾಡ (ಮಾ.31): ರೈತರ ಅಭಿವೃದ್ಧಿಗಾಗಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲಾಗುತ್ತಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕ್ಯಾಬಿನೆಟ್‌ ಮಂತ್ರಿಗಳು ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಈ ಸಂಗತಿಯನ್ನು ಏತಕ್ಕಾಗಿ ಬಳಸಲಿಲ್ಲ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ಪ್ರಶ್ನಿಸಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರು ಕಾಯ್ದೆಗಳು ಅನುಷ್ಠಾನಗೊಂಡಲ್ಲಿ ಬಡ ರೈತ ತನ್ನ ಜಮೀನು ಹಾಗೂ ಇಳುವರಿ ಎರಡನ್ನೂ ಕಳೆದುಕೊಳ್ಳಲಿದ್ದಾನೆ.

ಟಿಕಾಯತ್‌ ವಿರುದ್ಧ ಕೇಸ್‌ : ಯಾವ ಪ್ರಕರಣ ...

 ಗುತ್ತಿಗೆ ಕೃಷಿಗೆ ಇದು ಪ್ರೋತ್ಸಾಹ ನೀಡಿ ಭಾರತೀಯ ಕೃಷಿ ಚಟುವಟಿಕೆ ಮೇಲೆ ಬಂಡವಾಳಶಾಹಿಗಳು ತಮ್ಮ ಹಿಡಿತ ಸಾಧಿಸಲಿದ್ದಾರೆ. ತಮಗೆ ಬೇಕಾದ ಬೆಳೆಗಳನ್ನು ರೈತರಿಂದ ಬೆಳೆಸಿ ಅತಿ ಕಡಿಮೆ ದರಲ್ಲಿ ಬೆಳೆಗಳನ್ನು ಖರೀದಿಸಿ, ಜನರಿಗೆ ದುಬಾರಿ ಬೆಲೆಯಲ್ಲಿ ಮಾರುವ ಹುನ್ನಾರ ಈ ಕೃಷಿ ಕಾಯ್ದೆಗಳಲ್ಲಿದೆ. ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆ ಜಾರಿಗೆ ತರಬಾರದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್