ವಿಧಾನಸೌಧ 'ಗೈಡೆಡ್ ಟೂರ್' ಆರಂಭ; ಪ್ರತಿ ವ್ಯಕ್ತಿಗೆ ₹150 ಶುಲ್ಕ!

Published : Apr 23, 2025, 07:08 PM ISTUpdated : Apr 23, 2025, 07:19 PM IST
ವಿಧಾನಸೌಧ 'ಗೈಡೆಡ್ ಟೂರ್' ಆರಂಭ; ಪ್ರತಿ ವ್ಯಕ್ತಿಗೆ ₹150 ಶುಲ್ಕ!

ಸಾರಾಂಶ

ಸಾರ್ವಜನಿಕರಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ₹೧೫೦ ಪ್ರವೇಶ ಶುಲ್ಕದ ಮಾರ್ಗದರ್ಶಿತ ಪ್ರವಾಸ ರಜಾ ದಿನಗಳಲ್ಲಿ ಲಭ್ಯ. ವಿಧಾನಮಂಡಲದ ಘಟಕಗಳ ವೀಕ್ಷಣೆ, ಐತಿಹಾಸಿಕ ಮಾಹಿತಿ ಒದಗಿಸಲಾಗುವುದು. ಆನ್‌ಲೈನ್ ಟಿಕೆಟ್ ಬುಕಿಂಗ್ ಮತ್ತು ಗುರುತಿನ ಚೀಟಿ ಕಡ್ಡಾಯ. ಭದ್ರತೆ ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕ ಕ್ರಮ.

ಬೆಂಗಳೂರು (ಏ.23): ಬೆಂಗಳೂರು ನಗರದ ಹೆಮ್ಮೆ ಮತ್ತು ರಾಜ್ಯದ ಆಡಳಿತದ ಕೇಂದ್ರವಾದ ವಿಧಾನಸೌಧವನ್ನು ನೋಡಲು ಈಗ ಸಾರ್ವಜನಿಕರಿಗೆ ಅವಕಾಶ ದೊರೆಯಲಿದೆ. ಡಿಪಿಎಆರ್ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ನೀಡಿರುವ ಅನುಮತಿಯೊಂದಿಗೆ, ಸರ್ಕಾರ ಇದೀಗ ಮಾರ್ಗದರ್ಶಿತ ಪ್ರವಾಸ (Guided Tour) ಪ್ರಾರಂಭಿಸಲಿದೆ. ಪ್ರವೇಶ ದರವನ್ನು ಪ್ರತಿ ವ್ಯಕ್ತಿಗೆ ₹150 ಎಂದು ನಿಗದಿಪಡಿಸಲಾಗಿದೆ.

ಈ ಪ್ರವಾಸವು ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಇತರ ಸರ್ಕಾರಿ ರಜಾದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇರಲಿದೆ. ಪ್ರವಾಸದ ವೇಳೆ, ಸಾರ್ವಜನಿಕರನ್ನು ವಿಧಾನಸಭೆ, ವಿಧಾನಪರಿಷತ್ತು ಸೇರಿದಂತೆ ವಿವಿಧ ಮಹತ್ವದ ಘಟಕಗಳಿಗೆ ಕರೆದೊಯ್ಯಲಾಗುತ್ತದೆ. ಪ್ರವಾಸ ಮಾರ್ಗದರ್ಶಕರು ಕಟ್ಟಡದ ಇತಿಹಾಸ, ಶೈಲಿಶಾಸ್ತ್ರ ಮತ್ತು ರಾಜಕೀಯ ಮಹತ್ವದ ಕುರಿತು ವಿವರವಾಗಿ ಮಾಹಿತಿ ನೀಡಲಿದ್ದಾರೆ.

ವಿದೇಶಿ ಪ್ರಜೆಗಳಿಗೂ ಇದೇ ದರ ಅನ್ವಯವಾಗುತ್ತದೆ. ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕವೇ ಬುಕ್ ಮಾಡಬೇಕು ಹಾಗೂ ಗುರುತಿನ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆ. ಈ ಕ್ರಮವು ಭದ್ರತೆ ಮತ್ತು ವ್ಯವಸ್ಥಿತ ಪ್ರವೇಶಕ್ಕೆ ಸಹಾಯ ಮಾಡಲಿದೆ. ಇದರಿಂದ ರಾಜ್ಯದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ನಾಗರಿಕರು ಮತ್ತು ಪ್ರವಾಸಿಗರು ಈಗ ವಿಧಾನಸೌಧದ ಒಳಾಂಗಣದ ವೈಭವವನ್ನು ನೇರವಾಗಿ ಅನುಭವಿಸಬಹುದು. ಜೊತೆಗೆ, ಜನರು ವಿಧಾನಸೌಧದ ಮಹತ್ವವನ್ನು ತಿಳಿಯುವ ಅವಕಾಶವನ್ನು ಒದಗಿಸಬಹುದು.

ಇದನ್ನೂ ಓದಿ: ಭಾರತದಲ್ಲಿ ಮಹಿಳೆಯರ ಕೆಲಸ, ವಾಸಕ್ಕೆ ಬೆಂಗಳೂರು ಅತ್ಯುತ್ತಮ ನಗರ!

ಈ ಹೊಸ ಕಾರ್ಯಕ್ರಮದ ಬಗ್ಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರತಿಕ್ರಿಯಿಸುತ್ತಾ, 'ವಿಧಾನಸೌಧವು ಕರ್ನಾಟಕದ ಶ್ರೇಷ್ಠ ಸಂಸ್ಕೃತಿ ಮತ್ತು ಆಡಳಿತ ಪರಂಪರೆಯ ಪ್ರತೀಕವಾಗಿದೆ. ಸಾರ್ವಜನಿಕರಿಗೆ ಈ ವಿಧಾನಸೌಧದ ಭವ್ಯತೆಯನ್ನು ಅನಾವರಣಗೊಳಿಸುವ ಅವಕಾಶ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ' ಎಂದು ಹೇಳಿದರು.

ಈ ಯೋಜನೆ ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ವಿಧಾನಸೌಧ ಸ್ಪೀಕರ್ ಯು.ಟಿ. ಖಾದರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇಲ್ಲಿ ವಿಧಾನಸೌಧದ ಒಳಗೆ ಹೋಗಲು ಸಾರ್ವಜನಿಕರಿಗೆ ಅವಕಾಶ ನೀಡದೇ ಹೊರಾವರಣವನ್ನು ಮತ್ತು ಸಾರ್ವಜನಿಕ ಕಚೇರಿಗಳನ್ನು ನೋಡುವುದಕ್ಕೆ ಅವಕಾಶ ನೀಡಲಾಗುತ್ತದೆ. ವಿಧಾನಸೌಧದ ಮೂಲ ರಚನೆ, ಪ್ರತಿಮೆಗಳು ಮತ್ತು ಇತರ ರಚನೆಗಳಿಗೆ ಹಾನಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳುಬೇಕು. ವೈದ್ಯಕೀಯ ಮತ್ತು ಇತರ ತುರ್ತು ಸೇವೆ ಲಭ್ಯವಾಗುವಂತೆ ಪ್ರವಾಸೋದ್ಯಮ ಇಲಾಖೆಯು ನಿರ್ವಹಿಸಬೇಕು ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋದಲ್ಲಿ ಕುಳಿತು ಬಾಯಿಗೆ ವಿಮಲ್ ಹಾಕಿಕೊಂಡ ಪ್ರಯಾಣಿಕ; ಗುಟ್ಕಾ ಬ್ಯಾನ್ ಮಾಡಿದ ಬಿಎಂಆರ್‌ಸಿಎಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ