
ಶಿವಮೊಗ್ಗ (ಅ.21): ಕೂಡಲಿ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ಕಳೆದ ತೊಂಬತ್ತು ದಿನಗಳಿಂದ ಋಗ್ವೇದ ಘನಪಾರಾಯಣ ನಡೆಸಿದ ವೇದಭ್ರಹ್ಮಶ್ರೀ ಚಂದ್ರಮೌಳಿ ಘನಪಾಠಿ ಅವರಿಗೆ ಶಿವಮೊಗ್ಗ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಶ್ರೀ ಶಾರದಾ ಫೌಂಡೇಶನ್ ವತಿಯಿಂದ ಹತ್ತು ಲಕ್ಷ ರೂಪಾಯಿಗಳ ಗೌರವ ಧನ ನೀಡಿ ಶ್ರೀ ಶೃಂಗೇರಿ ಶಾರದಾ ಪೀಠದ ಪೀಠಾಧೀಶರಾದ ಶ್ರೀ ಅಭಿನವ ಶಂಕರ ಮಹಾಸ್ವಾಮಿಗಳು ಆಶೀರ್ವದಿಸಿದರು.
ಸಭೆಯಲ್ಲಿ ಮಾತನಾಡಿದ ಶ್ರೀಗಳು ಭಾರತೀಯ ಶ್ರೀಮಂತ ಪರಂಪರೆಯ ಮತ್ತು ಸನಾತನ ಧರ್ಮದ ಸಾರವಾದ ವೇದಗಳನ್ನು ಅನಿವಾರ್ಯವಾಗಿ ರಕ್ಷಿಸಬೇಕಾದ ಮತ್ತು ಅದನ್ನು ವಿದ್ಯಾರ್ಥಿಗಳಿಗೆ ಕಲಿಸಲೇಬೇಕಾದ ಅನಿವಾರ್ಯತೆಯನ್ನು ಮಾರ್ಮಿಕವಾಗಿ ತಿಳಿಸಿದರು.
ರಾಮನ ಗುಣಗಳು ಮೈಗೂಡಿಸಿಕೊಂಡು ಪ್ರಜೆಗಳು ರಾಮನಾದ್ರೆ ದೇಶ ರಾಮರಾಜ್ಯ: ಪೇಜಾವರಶ್ರೀ
ಉತ್ತಮ ಆಹಾರಕ್ಕಾಗಿ ಶ್ರೇಷ್ಠ ಬೀಜಗಳನ್ನು ರಕ್ಷಿಸದಿದ್ದರೆ ಭವಿಷ್ಯದಲ್ಲಿ ಹೇಗೆ ಆಹಾರ ಸತ್ವಯುತ ಮತ್ತು ಶಕ್ತಿಯುತವಾಗಿ ಇರಲಾರದೊ ಹಾಗೆಯೇ ವೇದಗಳು ಭಾರತೀಯ ಪರಂಪರೆಯ ರಕ್ಷಣೆಗೆ ಅನಿವಾರ್ಯವಾ ಭೌತಿಕ ಆಹಾರವೆಂದು ಹೇಳಿದರು.
ಸಭೆಗೂ ಮುನ್ನ ನಡೆದ ಘನಪಾಠಿಗಳ ಮೆರವಣಿಗೆಯಲ್ಲಿ ಮತ್ತು ನಂತರ ನಡೆದ ಸಭೆಯಲ್ಲಿ ಅಪಾರ ಸಂಖ್ಯೆಯ ವೇದಾಭಿಮಾನಿಗಳು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ