ಗಲಭೆಕೋರರಿಗೆ ಮರೆಯದಂತಹ ಪಾಠ ಕಲಿಸುತ್ತೇವೆ: ಸದಾನಂದ ಗೌಡ

By Kannadaprabha NewsFirst Published Aug 29, 2020, 8:24 AM IST
Highlights

ಗಲಭೆ ವೇಳೆ ಸಂತ್ರಸ್ತರಾದವರಿಗೆ ಬಿಜೆಪಿ ವತಿಯಿಂದ ಪರಿಹಾರ ವಿತರಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ| ಗಲಭೆಯಲ್ಲಿ ವಾಹನ ಕಳೆದುಕೊಂಡ ಹಾಗೂ ಮನೆಗಳಿಗೆ ಹಾನಿಯಾಗಿರುವ ಜನರಿಗೆ ಪರಿಹಾರ ವಿತರಿಸಲಾಗಿದೆ| ಅದೆಷ್ಟೇ ದೊಡ್ಡ ವ್ಯಕ್ತಿ ಅಥವಾ ಸಂಘಟನೆಯಾದರೂ ಬಿಡುವುದಿಲ್ಲ|

ಬೆಂಗಳೂರು(ಆ.29): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಯ ಹಿಂದೆ ಅದೆಷ್ಟೇ ದೊಡ್ಡ ವ್ಯಕ್ತಿ ಅಥವಾ ಸಂಘಟನೆಯಾದರೂ ಇರಲಿ ಅವರನ್ನು ಬಿಡುವುದಿಲ್ಲ. ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತಹ ಪಾಠ ಕಲಿಸುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಎಚ್ಚರಿಕೆ ನೀಡಿದ್ದಾರೆ. ಗಲಭೆ ವೇಳೆ ಸಂತ್ರಸ್ತರಾದವರಿಗೆ ಶುಕ್ರವಾರ ಬಿಜೆಪಿ ವತಿಯಿಂದ ಪರಿಹಾರ ವಿತರಿಸಿದ ಬಳಿಕ ಮಾತನಾಡಿದ ಸಚಿವರು, ಹಿಂಸಾಚಾರದ ಕುರಿತು ಸಮಗ್ರ ತನಿಖೆ ನಡೆಯಲಿದೆ ಎಂದರು.

ಪುಲಿಕೇಶಿನಗರದಲ್ಲಿ ಅಹಿತಕರ ನಡೆದಿದೆ. ಆದರೆ ಮತ್ತೆ ಆ ರೀತಿಯ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಗಾಂಜಾ ದಂಧೆ, ಗೋವುಗಳ ಸಾಗಾಣಿಕೆ ಸೇರಿದಂತೆ ಎಲ್ಲ ಮಾದರಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುತ್ತೇವೆ. ಇದಕ್ಕೆ ಜನರ ಸಹಕಾರ ಸಹ ಅಗತ್ಯವಾಗಿದೆ. ಸರ್ಕಾರದ ಕೆಲಸಗಳಿಗೆ ಜನರು ಒಗ್ಗೂಡಿ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಬೆಂಗಳೂರು ಗಲಭೆ: ಶಾಸಕ ಅಖಂಡ ಶ್ರೀನಿವಾಸ್‌ಗೆ ಹೈಕೋರ್ಟ್‌ ನೋಟಿಸ್‌

ಗಲಭೆಯಲ್ಲಿ ವಾಹನ ಕಳೆದುಕೊಂಡ ಹಾಗೂ ಮನೆಗಳಿಗೆ ಹಾನಿಯಾಗಿರುವ ಜನರಿಗೆ ಪರಿಹಾರ ವಿತರಿಸಲಾಗಿದೆ. ಗಲಭೆಕೋರರನ್ನು ಅಂತ್ಯ ಕಾಣಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವರು, ಪೊಲೀಸ್‌ ಅಧಿಕಾರಿಗಳ ಸಭೆ ನಡೆದು ನಿರ್ಣಯಿಸಲಾಗಿದೆ. ಅದೆಷ್ಟೇ ದೊಡ್ಡ ವ್ಯಕ್ತಿ ಅಥವಾ ಸಂಘಟನೆಯಾದರೂ ಬಿಡುವುದಿಲ್ಲ. ಜೀವನ ಪರ್ಯಂತ ನೆನೆಯುವಂತಹ ಪಾಠ ಕಲಿಸುತ್ತೇವೆ ಎಂದು ಅವರು ಗುಡುಗಿದರು.
 

click me!