
ಕಂಪ್ಲಿ (ಆ.12): ತುಂಗಭದ್ರಾ ಜಲಾಶಯದ ಗೇಟ್ ನ ಚೈನ್ ಲಿಂಕ್ ತುಂಡಾದ ವಿಡಿಯೋದ ತುಣುಕೊಂದು ಶನಿವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇಲ್ಲಿನ ಜನ ಗಾಬರಿಗೊಂಡರು. ಡ್ಯಾಂ ಒಡೆದಿದ್ದು, ಕಂಪ್ಲಿ ಕೋಟೆಗೆ ನೀರು ನುಗ್ಗಲಿದೆ, ಮನೆಗಳು ಜಲಾವೃತಗೊಳ್ಳಲಿವೆ ಎಂಬ ವದಂತಿ ಹರಡಿ, ಕೋಟೆ ಪ್ರದೇಶದ ಮೀನುಗಾರರೆಲ್ಲ ನಿದ್ದೆಯಿಂದ ಎದ್ದು, ಮನೆಯಲ್ಲಿನ ಸಾಮಗ್ರಿ, ಸರಂಜಾಮುಗಳನ್ನು ಕಟ್ಟಿಕೊಂಡು ಸ್ಥಳಾಂತರಕ್ಕೆ ಸಿದ್ಧರಾಗಿದ್ದರು.
ಈ ವೇಳೆ, ಕೆಲವರು ಟಿಬಿ ಬೋರ್ಡ್ನ ಅಧಿಕಾರಿಗಳಿಗೆ ಕರೆ ಮಾಡಿದಾಗ, ಜಲಾಶಯದ ಗೇಟ್ನ ಚೈನ್ ಲಿಂಕ್ ತುಂಡಾಗಿದೆ. ಸದ್ಯ 30 ಸಾವಿರ ಕ್ಯುಸೆಕ್ ನೀರು ಮಾತ್ರ ಬಿಡಲಾಗಿದೆ. ಗಾಬರಿಪಡುವುದು ಬೇಡ ಎಂದು ಅಧಿಕಾರಿಗಳು ಧೈರ್ಯ ತುಂಬಿದರು. ಆಗ ಸಮಾಧಾನಗೊಂಡ ಜನ ತಮ್ಮ ಮನೆಗಳಲ್ಲೇ ಉಳಿದರು. ಕೆಲವರು ರಾತ್ರಿ ಪೂರ್ತಿ ಎಚ್ಚರವಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ