ಹುಬ್ಬಳ್ಳಿ: ಮದುವೆ ಮನೆಯಲ್ಲಿ ಸುಡುವ ಸಾಂಬಾರು ಬಿದ್ದು ಎರಡೂವರೆ ವರ್ಷದ ಮಗು ದುರಂತ ಸಾವು

Published : Jun 20, 2025, 05:11 PM ISTUpdated : Jun 20, 2025, 05:30 PM IST
Tragic death of a child in a marriage house in Hubballi! Parents, how safe are your children?

ಸಾರಾಂಶ

ಶಿಗ್ಗಾಂವ ತಾಲೂಕಿನ ಕುಣ್ಣೂರು ಗ್ರಾಮದ ಮದುವೆ ಮನೆಯೊಂದರಲ್ಲಿ ಸುಟ್ಟ ಗಾಯಗಳಿಂದಾಗಿ ಎರಡೂವರೆ ವರ್ಷದ ಬಾಲಕಿ ರುಕ್ಸಾನಾಬಾನು ಸಾವನ್ನಪ್ಪಿದ್ದಾಳೆ.

ಹುಬ್ಬಳ್ಳಿ (ಜೂ.20): ಶಿಗ್ಗಾಂವ ತಾಲೂಕಿನ ಕುಣ್ಣೂರು ಗ್ರಾಮದ ಮದುವೆ ಮನೆಯೊಂದರಲ್ಲಿ ನಡೆದ ದುರಂತದಲ್ಲಿ ಎರಡೂವರೆ ವರ್ಷದ ಬಾಲಕಿ ರುಕ್ಸಾನಾಬಾನು ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಚನ್ನಾಪುರ ಗ್ರಾಮದ ಮಕ್ತುಮ್ ಸಾಬ್ ಸನದಿ ಅವರ ಪುತ್ರಿ ರುಕ್ಸಾನಾಬಾನು, ನಾಲ್ಕು ದಿನಗಳ ಹಿಂದೆ ಸುಡುವ ಸಾಂಬಾರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಪೋಷಕರು ತಕ್ಷಣ ಬಾಲಕಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.

ಬಾಲಕಿಯ ದೇಹದ ಬಹುತೇಕ ಭಾಗಗಳು ಸುಟ್ಟುಹೋಗಿತ್ತು. ಬಾಲಕಿ ಬದುಕುಳಿಯುವ ಭರವಸೆಯಲ್ಲಿದ್ದ ಪೋಷಕರು. ಆದರೆ ತೀವ್ರವಾದ ಗಾಯ, ನೋವುಗಳಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಳಾಗಿದ್ದಾಳೆ.. ಈ ಘಟನೆ ಪೋಷಕರಿಗೆ ಆಘಾತವನ್ನುಂಟುಮಾಡಿದೆ.

ಪೋಷಕರೇ ಮದುವೆ ಮನೆಯಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ

ಈ ಘಟನೆ ಮದುವೆ ಮನೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ವಿದ್ಯುತ್, ನೀರು, ಬೆಂಕಿ ಮುಂತಾದ ಅಪಾಯಕಾರಿ ವಸ್ತುಗಳಿರುವ ಸ್ಥಳಗಳಿಂದ ಚಿಕ್ಕ ಮಕ್ಕಳನ್ನು ದೂರವಿಡಬೇಕು ಎಂದು ಪೊಲೀಸರು ಮತ್ತು ತಜ್ಞರು ಸಲಹೆ ನೀಡುತ್ತಲೇ ಬಂದಿದ್ದಾರೆ. ಆದರೂ ಪೋಷಕರ ನಿರ್ಲಕ್ಷ್ಯದಿಂದ ಇಂಥ ದುರಂತಗಳಿಗೆ ಮಕ್ಕಳು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಈ ಘಟನೆಯಿಂದ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದ್ದು, ಸಮಾಜಕ್ಕೆ ಮಕ್ಕಳ ಸುರಕ್ಷತೆಯ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದೆ.

ಪೋಷಕರು ತಮ್ಮ ಮಕ್ಕಳನ್ನು ಸುರಕ್ಷತೆ ಬಗ್ಗೆ ಆದ್ಯತೆ ನೀಡಿ, ದುರಂತವನ್ನು ತಪ್ಪಿಸಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌