'ದ್ರೌಪದಿಗೆ ಅಪಮಾನ ಮಾಡಿದ ಭೈರಪ್ಪ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ'

Kannadaprabha News   | Asianet News
Published : Mar 05, 2021, 12:56 PM ISTUpdated : Mar 05, 2021, 01:12 PM IST
'ದ್ರೌಪದಿಗೆ ಅಪಮಾನ ಮಾಡಿದ ಭೈರಪ್ಪ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ'

ಸಾರಾಂಶ

ವಹ್ನಿಕುಲದ ಆದಿ ಶಕ್ತಿ ಬಗ್ಗೆ ಅವಹೇಳನ| ‘ದ್ರೌಪದಿ ಆಕರ್ಷಕ ಹೆಣ್ಣು, ಹಾಗಾಗಿ ಹತ್ತಾರು ಜನರ ಕಣ್ಣು ಅವಳ ಮೇಲಿತ್ತು’ ಎಂದು ಹೇಳಿದ ಭೈರಪ್ಪ| ತಮ್ಮ ಕಲ್ಪನೆ ಮೂಲಕ ಪಾತ್ರಗಳನ್ನು ತಮಗೆ ಬಂದಂತೆ ಚಿತ್ರಿಸುವ ಭೈರಪ್ಪ ಹೇಳಿಕೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಿದೆ| ಐಪಿಸಿ 295/ಎ, 298, 505, 153, 153/ಎ ಅನ್ವಯ ಕ್ರಮಕ್ಕೆ ಆಗ್ರಹ| 

ಬೆಂಗಳೂರು(ಮಾ.05):  ಹಿರಿಯ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಹಾಭಾರತದ ದ್ರೌಪದಿ ಬಗ್ಗೆ ಅಸಹ್ಯ ರೀತಿಯಲ್ಲಿ ಮಾತನಾಡುವ ಮೂಲಕ ವಹ್ನಿಕುಲ ಸಮಾಜದ ಆರಾಧಿಸುವ ಆದಿ ಪರಾಶಕ್ತಿಗೆ ಅಪಮಾನ ಮಾಡಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಪಿ.ಅರ್‌. ರಮೇಶ್‌ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್‌ನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಎಸ್‌.ಎಲ್‌. ಭೈರಪ್ಪ ಅವರು, ‘ದ್ರೌಪದಿ ಆಕರ್ಷಕ ಹೆಣ್ಣು, ಹಾಗಾಗಿ ಹತ್ತಾರು ಜನರ ಕಣ್ಣು ಅವಳ ಮೇಲಿತ್ತು’ ಎಂದೆಲ್ಲಾ ಹೇಳಿದ್ದಾರೆ. ಅವರ ಹೇಳಿಕೆ ಅಸಂಬದ್ಧ ಹಾಗೂ ಅಸಹ್ಯದಿಂದ ಕೂಡಿದೆ. ತಮ್ಮ ಕಲ್ಪನೆ ಮೂಲಕ ಪಾತ್ರಗಳನ್ನು ತಮಗೆ ಬಂದಂತೆ ಚಿತ್ರಿಸುವ ಭೈರಪ್ಪ ಅವರ ಹೇಳಿಕೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಾಗಿದೆ. ಈ ಸಂಬಂಧ ಈಗಾಗಲೇ ದೂರು ಸಲ್ಲಿಸಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕಾರಣ ಅವರ ಮೇಲೆ ಐಪಿಸಿ 295/ಎ, 298, 505, 153, 153/ಎ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮುಕ್ತವಾಗಿ ಮಾತನಾಡಿದರೆ ಬಲಪಂಥೀಯ ಎನ್ನುತ್ತಾರೆ

ಇದಕ್ಕೂ ಮುನ್ನ ಶೂನ್ಯ ವೇಳೆಯಲ್ಲಿ ರಮೇಶ್‌ ಈ ವಿಷಯ ಪ್ರಸ್ತಾಪಿಸಲು ಮುಂದಾದಾಗ, ಸಭಾಪತಿ ಬಸವರಾಜ ಹೊರಟ್ಟಿ ಈ ಬಗ್ಗೆ ತಮ್ಮೊಂದಿಗೆ ಚರ್ಚಿಸಬೇಕೆಂದು ಹೇಳಿ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ. ಇದರಿಂದ ತೀವ್ರ ಕೆರಳಿದ ರಮೇಶ್‌, ಒಂದು ಸಮಾಜ ಆರಾಧಿಸುವ ದೇವತೆ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದೇ ಇರುವುದು ಸರಿಯಲ್ಲ ಎಂದು ಪ್ರತಿಭಟನೆಗೆ ಮುಂದಾದರು. ಆಗ ಹೊರಟ್ಟಿಅವರು ಈ ಬಗ್ಗೆ ಪ್ರತಿಪಕ್ಷದ ನಾಯಕರು ಹಾಗೂ ತಮ್ಮೊಂದಿಗೆ (ಪಿ.ಆರ್‌. ರಮೇಶ್‌) ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದರು. ನಂತರ ಕೆಲವು ನಿಮಿಷಗಳ ನಂತರ ಪ್ರಸ್ತಾಪಿಸಲು ಅವಕಾಶ ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ