ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸುವರ್ಣ ನ್ಯೂಸ್‌ನ ಎಂ.ಸಿ. ಶೋಭಾ ನೇಮಕ !

By Sathish Kumar KHFirst Published Sep 26, 2024, 5:18 PM IST
Highlights

ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸುವರ್ಣ ನ್ಯೂಸ್ ಔಟ್‌ಪುಟ್ ಎಡಿಟರ್ ಎಂ.ಸಿ. ಶೋಭಾ ಸೇರಿದಂತೆ 11 ಮಂದಿ ಸದಸ್ಯರಾಗಿ ನೇಮಕವಾಗಿದ್ದಾರೆ.

ಬೆಂಗಳೂರು (ಸೆ.26): ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ಸುವರ್ಣ ನ್ಯೂಸ್  ಔಟ್‌ಪುಟ್ ಎಡಿಟರ್ ಶ್ರೀಮತಿ ಎಂ.ಸಿ. ಶೋಭಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಈ ಕುರಿತು ಕರ್ನಾಟಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 11 ಜನ ಹಿರಿಯ ಪತ್ರಕರ್ತರು ಮತ್ತು ವರದಿಗಾರರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸುವರ್ಣ ನ್ಯೂಸ್ ಔಟ್‌ಪುಟ್ ಮುಖ್ಯಸ್ಥರಾದ ಶ್ರೀಮತಿ ಎಂ.ಸಿ. ಶೋಭಾ ಹಾಗೂ ಕನ್ನಡ ಪ್ರಭ ಉಡುಪಿ ಜಿಲ್ಲಾ ವರದಿಗಾರರಾದ ಯು. ಸುರೇಂದ್ರ ಶೆಣೈ ಅವರು ಹನ್ನೊಂದು ಸದಸ್ಯರ ಬಳಗದಲ್ಲಿದ್ದಾರೆ. ಜೊತೆಗೆ, ಎರಡು ಪತ್ರಿಕೋದ್ಯಮ ಕಾಲೇಜುಗಳ ಮುಖ್ಯಸ್ಥರನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Latest Videos

ಕನ್ನಡಿಗರನ್ನು ಕೆಣಕಿದ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂತು: ಕೆಲಸ ಕಳೆದುಕೊಂಡವಳಿಗೆ ನೆಲೆ ಕಳೆದುಕೊಳ್ಳುವ ಆತಂಕ!

ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದವರು:

  1. ಶೋಭಾ ಎಂ.ಸಿ., ಬೆಂಗಳೂರು
  2. ಶಿವಾನಂದ ತಗಡೂರು, ಬೆಂಗಳೂರು
  3. ಎಂ.ಇ. ಮಂಜುನಾಥ್, ದಾವಣಗೆರೆ
  4. ಸಂಗಮೇಶ ಚೂರಿ, ವಿಜಯಪುರ
  5. ಜೆ. ಅಬ್ಬಾಸ್‌ ಮುಲ್ಲಾ, ಧಾರವಾಡ
  6. ಹೆಚ್.ವಿ. ಕಿರಣ್, ಬೆಂಗಳೂರು
  7. ಅನಿಲ್ ವಿ. ಗೆಜ್ಜಿ, ಬೆಂಗಳೂರು
  8. ಕೆಂಚೇಗೌಡ, ಬೆಂಗಳೂರು
  9. ಯು. ಸುರೇಂದ್ರ ಶೆಣೈ, ಉಡುಪಿ
  10. ರವಿ ಕೋಟಿ, ಮೈಸೂರು
  11. ರಶ್ಮಿ ಎಸ್, ಬೆಂಗಳೂರು

ಪದನಿಮಿತ್ತ ಸದಸ್ಯರು
ಮೈಸೂರು ಮಾನಸ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
ಮಂಗಳೂರು ಮಂಗಳ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು

click me!