‘ರೈತರಿಂದ ಲಂಚ ಕೇಳಿದ್ರೆ ಕಠಿಣ ಕ್ರಮ’

Kannadaprabha News   | Asianet News
Published : Jan 05, 2020, 09:34 AM IST
‘ರೈತರಿಂದ ಲಂಚ ಕೇಳಿದ್ರೆ ಕಠಿಣ ಕ್ರಮ’

ಸಾರಾಂಶ

ರೈತ​ರಿಗೆ ಪರಿ​ಹಾರ ಧನ ನೀಡಲು ಲಂಚ ಕೇಳುವ ಅಧಿ​ಕಾ​ರಿ​ಗಳ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳಲಾ​ಗು​ವುದು ಎಂದು ಕೈಗಾ​ರಿಕೆ ಸಚಿವ ಜಗ​ದೀಶ್‌ ಶೆಟ್ಟರ್‌ ಎಚ್ಚ​ರಿಕೆ ನೀಡಿ​ದ್ದಾರೆ.

ಬೆಂಗ​ಳೂರು [ಜ.05]: ಕೈಗಾ​ರಿಕಾ ಪ್ರದೇ​ಶ​ಕ್ಕಾಗಿ ಸ್ವಾಧೀನ ಪಡಿ​ಸಿ​ಕೊಂಡ ಜಮೀ​ನಿನ ರೈತ​ರಿಗೆ ಪರಿ​ಹಾರ ಧನ ನೀಡಲು ಲಂಚ ಕೇಳುವ ಅಧಿ​ಕಾ​ರಿ​ಗಳ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳಲಾ​ಗು​ವುದು ಎಂದು ಕೈಗಾ​ರಿಕೆ ಸಚಿವ ಜಗ​ದೀಶ್‌ ಶೆಟ್ಟರ್‌ ಎಚ್ಚ​ರಿಕೆ ನೀಡಿ​ದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀ​ಪದ ಹರಲೂರು ಮುದ್ದೇನಹಳ್ಳಿಯಲ್ಲಿನ ರಕ್ಷಣೆ, ಏರೋಸ್ಪೇಸ್‌, ಹೈಟೆಕ್‌ ಇಂಡಸ್ಟ್ರಿ ಬಡಾ​ವ​ಣೆ​ಗಳ ಕೈಗಾರಿಕಾ ಪ್ರದೇಶಕ್ಕೆ ಜಗ​ದೀಶ್‌ ಶೆಟ್ಟರ್‌ ಶನಿ​ವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ​ದರು.

ಈ ವೇಳೆ ಮಾತ​ನಾ​ಡಿ, ರೈತ​ರಿಂದ ಭೂಮಿ​ ಸ್ವಾಧೀ​ನ​ಪ​ಡಿ​ಸಿ​ಕೊಂಡ ನಂತರ ಅವ​ರಿಗೆ ಪರಿ​ಹಾರ ನೀಡು​ವುದು ಸರ್ಕಾರದ ಕರ್ತವ್ಯ. ಆದರೆ ಪರಿ​ಹಾರ ಧನ ಬಿಡು​ಗಡೆ ಮಾಡು​ವಾಗ ಅಧಿ​ಕಾ​ರಿ​ಗಳು ಹಣ ಕೇಳಿದರೆ ದೂರು ನೀಡಿ. ತಕ್ಷ​ಣವೇ ಅವರ ವಿರುದ್ಧ ಕ್ರಮ ಕೈಗೊ​ಳ್ಳು​ತ್ತೇನೆ ಎಂದು ಎಚ್ಚ​ರಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರ ನೂತನ ಕೈಗಾರಿಕಾ ಪ್ರದೇಶಕ್ಕಾಗಿ 1,800 ಎಕರೆ ಪ್ರದೇಶವನ್ನು ಸ್ವಾಧಿನಪಡಿಸಿಕೊಂಡಿದ್ದು, ಹಲವು ಬಗೆಯ ಕೈಗಾರಿಕೆಗಳನ್ನು ಸ್ಥಾಪಿಸಲಾ​ಗು​ತ್ತಿದೆ. ಇದ​ರಿಂದ ರೈತರ ಮಕ್ಕಳಿಗೆ ಉದ್ಯೋಗ ಸಿಗು​ತ್ತದೆ. ರಾಜ್ಯ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಹೀಗಾಗಿ ರಾಜ್ಯಕ್ಕೆ ವಿದೇಶಿ ಬಂಡವಾಳ ಹರಿದು ಬರ​ಲಿದೆ. ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಈ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದ​ಲಿದೆ ಎಂಬ ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಇದೇ ವೇಳೆ ಹರಳೂರು, ಪೋಲನಹಳ್ಳಿ, ಮುದ್ದೇನಹಳ್ಳಿ ಮತ್ತಿ​ತರ ಕಡೆ ಭೇಟಿ ನೀಡಿ ರೈತರ ಜತೆ ಮಾತುಕತೆ ನಡೆಸಿದರು. ಸಿಇ​ಟಿ​ಯುಎಂ, ವಿಪ್ರೋ, ಶೆಲ್‌ ಹಾಗೂ ಏರೋಸ್ಪೇಸ್‌ ಕೈಗಾರಿಕೆಗಳಲ್ಲಿನ ಕಾಮ​ಗಾ​ರಿ​ಗ​ಳನ್ನು ಪರಿಶೀಲಿಸಿ​ದ​ರು. ಭೂಮಿ ನೀಡಿದ ರೈತರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇ​ಶಿ​ಸಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!