ತಿರುಪತಿ ದೇಗುಲಕ್ಕೆ ಸಚಿವ ರಾಮುಲು 1.2 ಕೋಟಿ ಮೌಲ್ಯದ ಕೊಡುಗೆ

Kannadaprabha News   | Asianet News
Published : Nov 21, 2020, 07:51 AM ISTUpdated : Nov 21, 2020, 09:13 AM IST
ತಿರುಪತಿ ದೇಗುಲಕ್ಕೆ ಸಚಿವ ರಾಮುಲು 1.2 ಕೋಟಿ ಮೌಲ್ಯದ ಕೊಡುಗೆ

ಸಾರಾಂಶ

ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಕೋಟಿ ಮೌಲ್ಯದ ದೇಣಿಗೆಯನ್ನು ಸಚಿವ ಶ್ರೀ ರಾಮುಲು ನೀಡಿದ್ದಾರೆ. ಕೊಟ್ಟ ಕೊಡುಗೆ ಏನು?

ತಿರುಪತಿ (ನ.21): ಕರ್ನಾಟಕದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಡಿಜಿಟಲ್‌ ಸ್ಯಾಟಲೈಟ್‌ ನ್ಯೂಸ್‌ ಸಂಗ್ರಹಣೆ ವ್ಯವಸ್ಥೆ (ಡಿಎಸ್‌ಎನ್‌ಜಿ)ಯ ವಾಹನವನ್ನು ದೇಣಿಗೆಯಾಗಿ ನೀಡಿದ್ದಾರೆ.

ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ಸಂಪೂರ್ಣ ಎಡಿಟಿಂಗ್‌ಗೆ ಅವಕಾಶ ಮಾಡಿಕೊಡುವ ಈ ವಾಹನ 1.2 ಕೋಟಿ ರು. ಮೌಲ್ಯದ್ದಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಹೊಂದಿರುವ ಈ ವಾಹನವನ್ನು ಟಿಟಿಡಿ ನಿರ್ವಹಣೆಯಲ್ಲಿರುವ ಶ್ರೀ ವೆಂಕಟೇಶ್ವರ ಭಕ್ತಿ ಟೀವಿ ಚಾನೆಲ್‌ಗಾಗಿ ಬಳಕೆ ಮಾಡಲಾಗುವುದು ಎನ್ನಲಾಗಿದೆ. 

ಸಿಎಂ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟ ರಾಮುಲು :ಕುತೂಹಲದ ಭೇಟಿ

ಶುಕ್ರವಾರ ಸಚಿವ ಶ್ರೀರಾಮುಲು ಅವರ ಪರವಾಗಿ ಪ್ರತಿನಿಧಿಯೊಬ್ಬರು ತಿರುಮಲ ತಿರುಪತಿ ದೇಗುಲ ಆಡಳಿತ ಮಂಡಳಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರಿಗೆ ಹಸ್ತಾಂತರಿಸಿದರು.

ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭಕ್ತರು ದೇಣಿಗೆ ನೀಡುತ್ತಾರೆ. ಹಾಗೆ ರಾಜಕಾರಣಿಗಳೂ ಕೋಟಿ ಕೋಟಿ ಮೌಲ್ಯದ ದೇಣಿಗೆಗಳನ್ನು ಈ ಹಿಂದೆಯೂ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ