ಕಾಂಗ್ರೆಸಿಗನ ಜೊತೆ ಶ್ರೀ ರಾಮುಲು ಸಹೋದರಿ ಪುತ್ರಿ ವಿವಾಹ

Published : Oct 07, 2018, 09:37 AM IST
ಕಾಂಗ್ರೆಸಿಗನ ಜೊತೆ ಶ್ರೀ ರಾಮುಲು ಸಹೋದರಿ ಪುತ್ರಿ ವಿವಾಹ

ಸಾರಾಂಶ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರ ಸಹೋದರಿ, ಮಾಜಿ ಸಂಸದೆ ಬಿ.ಶಾಂತಾರ ಪುತ್ರಿ ಬಿ. ಪ್ರಸನ್ನ ಲಕ್ಷ್ಮಿ ಅವರ ವಿವಾಹ ಸ್ಥಳೀಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬುವರ ಪುತ್ರನೊಂದಿಗೆ ನಿಶ್ಚಯವಾಗಿದೆ.

ಬಳ್ಳಾರಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರ ಸಹೋದರಿ, ಮಾಜಿ ಸಂಸದೆ ಬಿ.ಶಾಂತಾರ ಪುತ್ರಿ ಬಿ. ಪ್ರಸನ್ನ ಲಕ್ಷ್ಮಿ ಅವರ ವಿವಾಹ ಸ್ಥಳೀಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬುವರ ಪುತ್ರನೊಂದಿಗೆ ನಿಶ್ಚಯವಾಗಿದೆ. ವಧು ಪ್ರಸನ್ನ ಲಕ್ಷ್ಮಿ ಬಿ.ಕಾಂ ಪದವೀಧರೆ ಯಾಗಿದ್ದು, ವರ ಪವನ್ ಕುಮಾರ್ ಸಹ ಬಿ.ಕಾಂ ಪದವಿ ಪಡೆದಿದ್ದಾರೆ. 

ಇದೇ ಅ.11 ರಂದು ನಗರದ ಅಲ್ಲಂ ಭವನದಲ್ಲಿ ವಿವಾಹ ನೆರವೇರಲಿದೆ. ಪ್ರಸ್ತುತ ಕಾಂಗ್ರೆಸ್ ನಲ್ಲಿರುವ ಶ್ರೀನಿವಾಸ್, ‘ಬ್ರಾಂದಿ ಸೀನಾ’ ಎಂದೇ ಈ ಭಾಗದಲ್ಲಿ ಹೆಸರುವಾಸಿಯಾಗಿದ್ದು, ಈ ಹಿಂದೆ ಬಿಜೆಪಿಯಿಂದ ಪಾಲಿಕೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಎಂದು ತಿಳಿದುಬಂದಿದೆ.

ಇನ್ನು ಆಮಂತ್ರಣ ಪತ್ರಿಕೆಯಲ್ಲಿ ಸುಖಾಗಮನ ಬಯಸುವವರು ಎಂದು ಶಾಸಕ ಶ್ರೀರಾಮಲು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಹೆಸರನ್ನು ನಮೂದಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ