ಸಿಎಂ ಕೌಶಲ್ಯ ಕರ್ನಾಟಕ ಯೋಜನೆಯ ಅಕ್ರಮ, 106 ವರ್ಷದ ವೃದ್ದೆಗೆ ಹೊಲಿಗೆ ತರಬೇತಿ, ನವಜಾತ ಶಿಶು ಬ್ಯೂಟಿ ಥೆರಪಿಸ್ಟ್‌!

Published : Aug 22, 2025, 08:46 AM ISTUpdated : Aug 23, 2025, 09:40 AM IST
CAG Report

ಸಾರಾಂಶ

ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ವಯಸ್ಸು ಮೀರಿದ 3,487 ಅಭ್ಯರ್ಥಿಗಳಿಗೆ ತರಬೇತಿ ನೀಡಿ 3.90 ಕೋಟಿ ರೂ. ದುರ್ಬಳಕೆ ಮಾಡಲಾಗಿದೆ. 106 ವರ್ಷದ ವೃದ್ಧೆ ಮತ್ತು ನವಜಾತ ಶಿಶುಗಳಿಗೂ ತರಬೇತಿ ನೀಡಿರುವುದು ಬೆಳಕಿಗೆ ಬಂದಿದೆ. ಸಿಎಜಿ ವರದಿಯಲ್ಲಿ ಹಲವು ಲೋಪಗಳನ್ನು ಎತ್ತಿ ತೋರಿಸಲಾಗಿದೆ.

ಬೆಂಗಳೂರು (ಆ.22): ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ 2018-2022ರ ಅನುಷ್ಠಾನ ಅವಧಿಯಲ್ಲಿ ಹಲವು ನ್ಯೂನ್ಯತೆಗಳನ್ನು ಸಿಎಜಿ ಪತ್ತೆ ಹಚ್ಚಿದ್ದು, 106 ವರ್ಷದ ವೃದ್ಧ ಮಹಿಳೆ ಸೇರಿ ವಯಸ್ಸು ಮೀರಿದ 3,487 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ 3.90 ಕೋಟಿ ರು. ವೆಚ್ಚ ಮಾಡಲಾಗಿದೆ. ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷದ ಅನುಸರಣಾ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಅಂಶಗಳು ಪತ್ತೆಯಾಗಿವೆ.

2019-20ರಲ್ಲಿ ಧಾರವಾಡದ ರೇಣುಕಾ ಎಜುಕೇಷನ್ ಸೊಸೈಟಿ ಹೊಲಿಗೆ ಯಂತ್ರ ಆವರೇ ಟರ್‌ತಂಡದ ಅಭ್ಯರ್ಥಿ ಸಹೇರಾಬಾನು (ಎಸ್ ಎಎಫ್‌ ಸಂಖ್ಯೆ -0960268)ತರಬೇತಿ ಪಡೆದಿದ್ದು, ಆಕೆ 1913ರ ಜ.1 ರಂದು ಜನಿಸಿರುವ 106 ವರ್ಷದ ವೃದ್ಧೆ ಫಲಾನುಭವಿ ಆಗಿರುವುದಾಗಿ ಹೇಳಲಾಗಿದೆ. ಇದೇ ಸೊಸೈಟಿಯಲ್ಲಿ ಅದೇ ಸಾಲಿನಲ್ಲಿ ಆಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್ ಹುದ್ದೆಗೆ ಒಂದು ವರ್ಷವೂ ಪೂರೈಸದ ಖಯ್ಯ ಮತ್ತು ಕನಿಶಾ ಎಂಬ 2019ರಲ್ಲಿ ಜನಿಸಿದ ನವಜಾತ ಶಿಶುಗಳಿಗೆ 2019ರಲ್ಲಿ ಅಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್ ತರಬೇತಿ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಈ ರೀತಿಯಲ್ಲಿ 2018-19ರಲ್ಲಿ ವಯಸ್ಸು ಮೀರಿದ 185, 2019-20ರಲ್ಲಿ 420, 2020-21ರಲ್ಲಿ 832,2021-22ರಲ್ಲಿ 738,2022-23ರಲ್ಲಿ 1,312 ಸೇರಿ ಒಟ್ಟು 3,487 ಮಂದಿಗೆ ತರಬೇತಿ ನೀಡಿದ್ದು, ಇದಕ್ಕಾಗಿ 3.90 ಕೋಟಿ ರು. ವೆಚ್ಚ ಮಾಡಲಾಗಿದೆ.ಸಾಮಾನ್ಯ ಅಭ್ಯರ್ಥಿಗಳಿಗೆ 18-35 ವರ್ಷ ವಯೋಮಿತಿ ನಿಗದಿ ಮಾಡಿದ್ದರೂ ಕಡಿಮೆ ವಯಸ್ಸಿನ ಹಾಗೂ ವೃದ್ಧರ ಹೆಸರಿನಲ್ಲಿ ಹಣ ದುರ್ಬಳಕೆಯಾಗಿದೆ.

ಹಲವು ಕೊರತೆಗಳು ಪತ್ತೆ: 2023ರವರೆಗೆ ತಾಲೂಕು ಮಟ್ಟದಲ್ಲಿ ಕೌಶಲ್ಯ ಮಿಷನ್‌ ಗಳನ್ನು ಸ್ಥಾಪಿಸಿರಲಿಲ್ಲ. ಸರ್ಕಾರದ ನೀತಿ ಪ್ರಕಾರ ತಾಲೂಕು ಕೌಶಲ್ಯ ಮಿಷನ್‌ಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿತ್ತು. ಕೌಶಲ್ಯ ಕರ್ನಾಟಕ ಯೋಜನೆಯಡಿ ಯುವಕರನ್ನು ಸಬಲೀಕರಣಗೊಳಿಸುವ ಯೋಜನೆಗಾಗಿ ಅಸ್ತಿತ್ವಕ್ಕೆ ಬಂದ ಕೌಶಲಕಾರ್‌ ವೆಬ್ ಸೈಟ್ ತಂತ್ರಾಂಶದಲ್ಲಿ ಸಮಸ್ಯೆಗಳು ಹೇರಳವಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿ, ಅಭ್ಯರ್ಥಿ ನೋಂದಣಿ ವೇಳೆ ಆಧಾರ್‌ ದೃಢೀಕರಣ ಒಳಗೊಂಡಿಲ್ಲ. ನಕಲಿ ಆಧಾರ್‌ ಸಂಖ್ಯೆಗಳ ಬಹು ನೋಂದಣಿ ಮಾಡಿ ಲೋಪ ಎಸಗಲಾಗಿದೆ. ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಕಡೆಗಣಿಸಲಾಗಿದೆ. ಇಂತಹ ಅನೇಕ ಲೋಪಗಳನ್ನು ವಿವರಿಸಿ, ಇಲಾಖೆಗಳು ತಪ್ಪಿಸಬಹುದಾಗಿದ್ದ ವೆಚ್ಚದ ಬಗ್ಗೆಯೂ ಸಿಎಜಿ ವರದಿ ಉಲ್ಲೇಖಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌