ಸಿದ್ದರಾಮಯ್ಯ ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ: ಕಟೀಲ್‌ ವ್ಯಂಗ್ಯ

Published : Oct 19, 2019, 08:14 AM ISTUpdated : Oct 19, 2019, 08:16 AM IST
ಸಿದ್ದರಾಮಯ್ಯ ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ: ಕಟೀಲ್‌ ವ್ಯಂಗ್ಯ

ಸಾರಾಂಶ

ಸಿದ್ದು ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ| ಸಂತೋಷ್‌ ಸ್ವಿಚ್‌ ಒತ್ತಿದ್ರೆ ನಳಿನ್‌ ಡ್ಯಾನ್ಸ್‌ ಎಂದಿದ್ದ ಸಿದ್ದರಾಮಯ್ಯಗೆ ಕಟೀಲ್‌ ವ್ಯಂಗ್ಯ| 

ಮಂಡ್ಯ[ಅ.19]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯರು, ಜ್ಞಾನಿಗಳು, ಪಂಡಿತರು, ಸ್ವಲ್ಪ ಇತಿಹಾಸವನ್ನೀ ಅಧ್ಯಯನ ಮಾಡಿದ್ದಾರೆ. ಅದಕ್ಕಾಗಿ ವೀರ ಸಾವರ್ಕರ್‌ಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ಎಗ್ಗಿಲ್ಲದೇ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂತೋಷ್‌ ಸ್ವಿಚ್‌ ಒತ್ತಿದ್ರೆ ನಳಿನ್‌ ಡ್ಯಾನ್ಸ್‌: ಸಿದ್ದರಾಮಯ್ಯ

ಶುಕ್ರವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್‌ ಕುಮಾರ್‌ ಕಟೀಲ್‌ಗೆ ಜ್ಞಾನವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಎಲ್ಲೂ ಕೂಡ ಜ್ಞಾನಿ ಎಂದು ಹೇಳಿಕೊಂಡಿಲ್ಲ. ಸಿದ್ದರಾಮಯ್ಯ ಭ್ರಮೆಯಲ್ಲೇ ಮಾತನಾಡಿದ್ದಾರೆ ಎಂದು ಟೀಕಿಸಿದರು.

ಮಾಹಿತಿ ಇಲ್ಲದೆ ಬಾಲಿಶ ಹೇಳಿಕೆ ನೀಡಬಾರದು: ಕಟೀಲ್‌ಗೆ ಸಿದ್ದು ತಿರುಗೇಟು

ಪುರಾಣದಲ್ಲಿ ಬಹಳ ಜ್ಞಾನವಂತರು, ಪಂಡಿತರು ಇದ್ದರು. ರಾವಣ ಕೂಡ ಒಬ್ಬ ಜ್ಞಾನವಂತ, ಪಂಡಿತನಾಗಿದ್ದ ಎನ್ನುವ ಮೂಲಕ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ರಾವಣನಿಗೆ ಹೋಲಿಕೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!