
ಕೊಪ್ಪಳ (ಫೆ.24): ನನ್ನ ಮಗ ಶಶಿಕುಮಾರ ಸಿನಿಮಾ ನಟನೆಯ ತರಬೇತಿ ಪಡೆದಿದ್ದು, ಸಿನಿಮಾ ಹೀರೋ ಆಗಲು ಆಸಕ್ತಿ ಹೊಂದಿದ್ದಾನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
‘ನಿಮ್ಮ ಮಗ ರಾಜಕೀಯಕ್ಕೆ ಬರುತ್ತಾನಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ, ‘ನನ್ನ ಮಗನನ್ನು ರಾಜಕೀಯಕ್ಕೆ ತರುವುದಿಲ್ಲ. ಆದರೆ ರಾಜಕೀಯದಲ್ಲಿ ಆಸಕ್ತಿ ಇದ್ದು ಅವನಾಗಿ ಬಂದರೆ ತಡೆಯಲು ಆಗದು’ ಎಂದರು. ಆದರೆ ಅವನು ರಾಜಕೀಯಕ್ಕೆ ಬರುವುದು ಅನುಮಾನ. ನನ್ನ ಮಗ ಶಶಿಕುಮಾರ ರಾಜಕೀಯಕ್ಕಿಂತ ಸಿನಿಮಾದಲ್ಲಿ ಆಸಕ್ತಿ ಹೆಚ್ಚಾಗಿದೆ. ಅವನು ಈಗಾಗಲೇ ಸಿನಿಮಾ ನಟನೆಯ ತರಬೇತಿ ಪಡೆದಿದ್ದಾನೆ. ಮುಂದೆ ಸಿನಿಮಾದಲ್ಲಿ ಹೀರೋ ಆಗುವುದಾದರೆ ಬೇಡ ಅನ್ನೋಲ್ಲ. ಆದರೆ, ಸಿನಿಮಾ ಇಂಡಸ್ಟ್ರೀ ಸದ್ಯ ಅಷ್ಟಾಗಿ ಸರಿಯಾಗಿಲ್ಲ, ಮುಂದಿನ ದಿನಗಳಲ್ಲಿ ನಾನು ಈ ಬಗ್ಗೆ ವಿಚಾರ ಮಾಡುತ್ತೇನೆ ಎಂದಿದ್ದಾನೆ ಎಂದಿದ್ದಾನೆ ಎಂದರು.
ಇದನ್ನೂ ಓದಿ: ಛತ್ರಪತಿ ಶಿವಾಜಿ ಒಂದು ಧರ್ಮಕ್ಕೆ ಸೀಮಿತವಲ್ಲ, ಕೇಸರಿಕರಣ ಯತ್ನ ನಡೆಯುತ್ತಿದೆ:ಶಿವರಾಜ ತಂಗಡಗಿ
ನಾನು ಕಾರ್ಯಕ್ರಮದ ನಂತರ ಬಾಗಲಕೋಟೆಗೆ ಹೋಗುತ್ತಿದ್ದೇನೆ, ಹೀಗಾಗಿ, ನನ್ನ ಜತೆ ಮಗ ಶಶಿಕುಮಾರ ಆಗಮಿಸಿದ್ದಾನೆ, ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ