
ಬಾಗಲಕೋಟೆ (ಆ.14) : ರಾತ್ರೋರಾತ್ರಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಘಟನೆ ಬಾಗಲಕೋಟೆಯ ಲಯನ್ಸ್ ವೃತ್ತದ ಬಳಿ ನಡೆದಿದೆ.
ಶಿವಾಜಿ ಮೂರ್ತಿ ಸ್ಥಾಪನೆಯ ಸ್ಥಳ ವಿಚಾರವಾಗಿ ಮರಾಠ ಸಮುದಾಯದ ನಾಯಕರಲ್ಲಿ ಪರ ವಿರೋಧವಿತ್ತು. ಆದರೆ ಮರಾಠ ಸಮುದಾಯದಲ್ಲೇ ಕೆಲವರು ಸ್ಥಳ ಬದಲಾವಣೆಗೆ ಸೂಚಿಸಿದರೆ ಇನ್ನೂ ಕೆಲವರಿಂದ ನಿಗದಿಯಾದ ಸ್ಥಳದಲ್ಲೇ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿದ್ದರು. ಈ ವಿಚಾರ ಚರ್ಚೆಯಲ್ಲಿರುವಾಗಲೇ ಇಂದು ದಿಢೀರ್ ನಿಗದಿಯಾದ ಸ್ಥಳದಲ್ಲೇ ಬೇರೊಂದು ಶಿವಾಜಿ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿರುವ ಒಂದು ಗುಂಪು.
ಬಿಜೆಪಿಗೆ ಬಿಸಿ ತುಪ್ಪವಾದ ಪುತ್ತಿಲ; ಪುತ್ತಿಲ ಪರಿವಾರದಿಂದ ಸೌಜನ್ಯ ಪರ ಹೋರಾಟ
ಈಗಾಗಲೇ ಪ್ರತಿಷ್ಠಾಪನೆಗೆ ಸಿದ್ದಗೊಂಡಿರೋ ಬೃಹತ್ ಶಿವಾಜಿ ಮೂರ್ತಿ. ಅದರ ಬದಲಾಗಿ ಬೇರೊಂದು ಚಿಕ್ಕದಾದ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣ ಭಾಂಡಗೆ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಶಿವಾಜಿ ಮೂರ್ತಿಯನ್ನ ಅಭಿಮಾನಿಗಳು ಸ್ಥಾಪನೆ ಮಾಡಿರೋದಕ್ಕೆ ಸ್ವಾಗತ ಎಂದರು.
ಭೈರಾಪುರ ಸೇತುವೆ ಬಳಿ ಹಳೇ ಕಾಲದ ನಾಣ್ಯ, ಮಣಿನಾಲ್ಮೂರುನಲ್ಲಿ ಶಿಲಾಮಯ ದೇಗುಲ ಕುರುಹು ಪತ್ತೆ!
ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನ ವಿಚಾರವಾಗಿ ಸರ್ಕಾರದ ಅನುಮತಿ ಪಡೆದೆ ನಿರ್ಧಾರ ಮಾಡಲಾಗಿತ್ತು. ಆದ್ರೆ ಕೆಲವರು ಅಭಿಮಾನಿಗಳು ಇಂದು ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಸ್ಥಾಪನೆ ಮಾಡಿರುವುದು ಸಂತೋಷ. ಆದರೆ ನಿಗದಿಯಾಗಿರೋ ಸ್ಥಳದಲ್ಲೇ ಬೃಹತ್ ಶಿವಾಜಿ ಮೂರ್ತಿಯನ್ನು ಶೀಘ್ರದಲ್ಲಿಯೇ ಸ್ಥಾಪನೆ ಮಾಡಲಾಗುವುದೆಂದು ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ