ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!

Published : Jul 07, 2023, 07:16 PM ISTUpdated : Jul 07, 2023, 07:41 PM IST
ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!

ಸಾರಾಂಶ

ಸವಣೂರು ಪಟ್ಟಣದ ಶ್ರೀ ದೊಡ್ಡಹುಣಸೆ ಕಲ್ಲ ಮಠದ ಆವರಣದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸ ಇರುವ ಹಾವೇರಿಯ ದೊಡ್ಡ ಹುಣಸೆ ಮರ ಧರೆಗೆ ಉರುಳಿದೆ.

ಹಾವೇರಿ(ಜು.7): ಸಾವಿರಾರು ವರ್ಷಗಳ ಇತಿಹಾಸ ಇರುವ ಹಾವೇರಿಯ ದೊಡ್ಡ ಹುಣಸೆ ಮರ ಧರೆಗೆ ಉರುಳಿದೆ. ಸವಣೂರು ಪಟ್ಟಣದ ಶ್ರೀ ದೊಡ್ಡಹುಣಸೆ ಕಲ್ಲ ಮಠದ ಆವರಣದಲ್ಲಿರುವ ಈ ಮರವಿದೆ. ಸಾವಿರಾರು ವರ್ಷಗಳ ಹಿಂದೆ ಘೋರಕನಾಥ ತಪಸ್ವಿಗಳು ನೆಟ್ಟು ಹೋಗಿರುವ ಗಿಡ ಬೃಹತ್  ಮರವಾಗಿ ಬೆಳೆದು ಪ್ರವಾಸಿಗರ ಮೆಚ್ಚುಗೆ ಪಡೆದಿತ್ತು. ಇದೀಗ ವಿಪರೀತ ಮಳೆಯ ಕಾರಣದಿಂದ ಮರ ಧರೆಗುಳಿದೆ.

ಸುಂಟಿಕೊಪ್ಪ: ಭಾರಿ ಮಳೆಗೆ ಧರೆಗೆ ಉರುಳಿದ ವಿದ್ಯುತ್ ಕಂಬಗಳು!

ಶ್ರೀ ಮಠದಲ್ಲಿದ್ದ ಈ ಮರ ಅನೇಕರ ಭಕ್ತಿಯ ಪ್ರತಿಕವಾಗಿತ್ತು. ದೊಡ್ಡ ಹುಣಸೆ ಮರ ನೋಡಲು ಅನೇಕರು ಮಠಕ್ಕೆ ಭೇಟಿ ನೀಡುತ್ತಿದ್ದರು. ಶ್ರೀ ಮಠದಲ್ಲಿ ಒಟ್ಟು ಮೂರು ದೊಡ್ಡ ಹುಣಸೆ ಮರಗಳಿವೆ. ಅದರ ಪೈಕಿ ಇಂದು ಒಂದು ಮರ  ಧರೆಗೆ ಉರುಳಿದೆ. ಸ್ಥಳಕ್ಕೆ ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮರವನ್ನು ಮತ್ತೆ ಯಥಾವತ್ತಾಗಿ ನೆಡಲು ಚಿಂತನೆ ನಡೆಸಿದ್ದಾರೆ.

KARNATAKA BUDGET 2023: ಕಾಂಗ್ರೆಸ್‌ನಿಂದ ಹೊಸ ಶಿಕ್ಷಣ ನೀತಿ, ನೇಮಕಾತಿಯಲ್ಲಿ ಡಿಜಿಲಾಕರ್ ಅಂಕಪಟ್ಟಿ ಕಡ್ಡಾಯ

ಜುಲೈ 8ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರು ಭೇಟಿ ನೀಡಲಿದ್ದಾರೆ. ದೊಡ್ಡ ಹುಣಸೆ ಮರ ಕೇವಲ ಮರ ಆಗದೆ ನಮ್ಮ‌ಮಠದ ಅವಿಭಾಜ್ಯ ಅಂಗವಾಗಿತ್ತು. ಅನೇಕ ಭಕ್ತರ ಪ್ರತೀಕವಾಗಿದ್ದ ಈ ಮರ ಇಂದು ಧರೆಗೆ ಉರುಳಿದ್ದ ಮಠಕ್ಕೆ ದೊಡ್ಡ ನಷ್ಟವಾಗಿದೆ.  ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮರವನ್ನು ಮತ್ತೆ ನೆಡಲು ಪ್ರಯತ್ನಿಸುತ್ತಿದ್ದೇವೆ. ಸವಣೂರು ದೊಡ್ಡಹುಣಸೆ ಕಲ್ಮಠದ ಚೆನ್ನ ಬಸವ ಸ್ವಾಮಿಜಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್