
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
ಬಳ್ಳಾರಿ/ ವಿಜಯನಗರ (ಸೆ.21): ಗಣೇಶನ ಹಬವೆಂದ್ರೇ ಇಡೀ ದೇಶದ್ಯಾಂತ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ಚಿಕ್ಕ ಚಿಕ್ಕ ಮೂರ್ತಿಗಳಿಂದ ಹಿಡಿದು ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗ್ತದೆ. ಆದ್ರೇ ವಿಶ್ವ ವಿಖ್ಯಾತ ಹಂಪಿಯಲ್ಲಿರುವ ಗಣೇಶನ ಈ ಬೃಹತ್ ಕಲ್ಲಿನ ಎರಡು ಮೂರ್ತಿಗಳಿಗೆ ಮಾತ್ರ ಹಬ್ಬವಿಲ್ಲ. ಪೂಜಾ ಭಾಗ್ಯವಿಲ್ಲ. ಈ ಮೂರ್ತಿಗಳನ್ನು ನೋಡಲು ಮಾತ್ರ ದೇಶವಿದೇಶಗಳಿಂದ ಜನರು ಬರುತ್ತಾರೆ. ಆದ್ರೇ ವಿಶ್ವಪರಂಪರೆ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿರುವ ಈ ಮೂರ್ತಿಗಳ ಪೂಜೆ ಮಾತ್ರ ಪೂಜೆಗೆ ಅವಕಾಶವಿಲ್ಲ..
ಸಾಸಿವೆ ಕಾಳು ಗಣಪ, ಕಡೆಲೆ ಕಾಳು ಗಣಪನ ಮೂರ್ತಿಗಳಿಗೆ ಪೂಜೆ ಮಾಡೋದಿಲ್ಲ: ನಾಡಿನೆಲ್ಲಡೆ ಗಣೇಶ ಚತುರ್ಥಿಯ ಸಂಭ್ರಮಾಚರಣೆ ಮನೆ ಮಾಡಿದೆ.. ಗಲ್ಲಿಗಲ್ಲಿಯಲ್ಲಿ ಗಣಪನ ಹರ್ಷೋದ್ಗಾರ, ಪೂಜೆ ಜೈಕಾರ ಜೋರಾಗಿದೆ. ಆದ್ರೇ ಏನು ಮಾಡೋದು ತೆರೆದ ಮ್ಯೂಸಿಯಂ ಎಂದು ಹೆಸರುವಾಸಿಯಾಗಿರುವ ಹಂಪಿಯ ಈ ಎರಡು ಬೃಹತ್ ಎತ್ತರದ ಗಣೇಶನ ವಿಗ್ರಹಗಳು ಮಾತ್ರ ಪೂಜೆ ನಡೆಯುತ್ತಿಲ್ಲ. ಹೌದು, ದಿನಬೆಳಗಾದ್ರೆ ಹಂಪಿಗೆ ಬರುವ ಪ್ರವಾಸಿಗರು ತದೇಕಚಿತ್ತದಿಂದ ಹಂಪಿಯ ಏಕಶಿಲೆಯಲ್ಲಿರೋ ಕಡಲೆಕಾಳು ಹಾಗೂ ಸಾಸಿವೆಕಾಳು ಗಣೇಶ ವಿಗ್ರಹಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ.
ಬಿಜೆಪಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ನೆನಪಾಗಿದೆ: ಮಹದೇವಪ್ಪ
ದೇಶವಿದೇಶಗಳಿಂದ ಬರೋ ಜನರು ಪೋಟೋ ತೆಗೆಸಿಕೊಂಡು ಸಂಭ್ರಮಿಸ್ತಾರೆ. ಆದ್ರೇ ವಿಶ್ವಪರಂಪರೆ ಪಟ್ಟಿಯಲ್ಲಿರುವ ಗಣೇಶನ ಸ್ಮಾರಕಗಳಿಗೆ ಪೂಜೆ ಮಾಡಲು ನಿಷೇಧವಿದೆ. ಹೀಗಾಗಿ ಈ ವಿಗ್ರಹಗಳನ್ನು ಇಲ್ಲಿಗೆ ಬರೋ ಪ್ರವಾಸಿಗರು ಸ್ಮಾರಕದ ರೀತಿ ನೋಡುತ್ತಾರೆ ವಿನಃ ಕೈಮುಗಿಯೋದು ದೇವರೆಂದು ಪೂಜೆ ಮಾಡೋದಿಲ್ಲ..ಇನ್ನೂ ಈ ಸ್ಮಾರಕಗಳು ಮುಕ್ಕಾದ ( ಬಿರುಕು ಅಥವಾ ಭಿನ್ನಾ) ಕಾರಣ ಪೂಜೆ ಮಾಡಬಾರದೆನ್ನು ನಂಬಿಕೆಯಿದೆ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ.
ಹಂಪಿಯ ಐಕಾನ್ ನಂತಿರೋ ಮೂರ್ತಿಗಳು: ಹಂಪಿಯ ಈ ಪ್ರಸಿದ್ಧ ಗಣೇಶನ ಮೂರ್ತಿಗಳು ಇರುವುದು ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ. ಹೇಮಕೂಟದ ಬೆಟ್ಟದ ಕೆಳಭಾಗದಲ್ಲಿರುವ ಸಾಸಿವೆ ಕಾಳು ಗಣೇಶ ಮೂರ್ತಿ 8 ಅಡಿ ಉದ್ದವಿದೆ. ಪುರಾಣದ ಪ್ರಕಾರ ಗಣಪ ಮಿತಿಮೀರಿ ತಿಂದಿದ್ದರಿಂದ ತನ್ನ ಹೊಟ್ಟೆ ಒಡೆಯುವಂತಾಯಿತು. ಆ ಸಂದರ್ಭದಲ್ಲಿ ಅದನ್ನು ತಡೆಯಲು ಹೊಟ್ಟೆ ಅಡ್ಡಲಾಗಿ ಸರ್ಪವನ್ನು ಸುತ್ತಿಕೊಂಡನೆಂಬ ಪ್ರತೀತಿಯಿದೆ. ಇನ್ನೂ ಈ ವಿಗ್ರಹದಲ್ಲಿ ಬಲಗೈ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು. ಈ ಮೂರ್ತಿಯನ್ನು ಕ್ರಿ.ಶ.1506ರಲ್ಲಿ ಚಂದ್ರಗಿರಿಯ ವ್ಯಾಪಾರಿಯೊಬ್ಬರು ವಿಜಯನಗರ ಸಾಮ್ರಾಜ್ಯದ ದೊರೆಗಳಿಗಾಗಿ ನಿರ್ಮಿಸಿದ ಎನ್ನುವ ಮಾಹಿತಿಯಿದೆ.
ದಕ್ಷಿಣ ಕಾಶಿ ಹಂಪಿಯ ಎರಡು ಮೂರ್ತಿಗಳಿಗೆ ಪೂಜೆ ಸಲ್ಲೋಲ್ಲ: ಇನ್ನೂ ಕಡಲೆಕಾಳು ಗಣೇಶನ ಮೂರ್ತಿ ಏಕಶಿಲೆಯಾಗಿದ್ದು, 18 ಅಡಿ ಎತ್ತರವಿದೆ. ನೋಡಲು ಬಲು ಸೊಗಸು ಈ ಗಣೇಶನ ಮೂರ್ತಿ. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ವಿಶೇಷವಾಗಿ ಪೂಜೆ ಮಾಡಲಾಗ್ತಿತ್ತು ಹಂಪಿಯ ಈ ಎರಡು ಗಣೇಶನ ಮೂರ್ತಿಗಳು ಇದೀಗ ಪೂಜೆ ಭಾಗ್ಯವಿಲ್ಲ. ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಹಂಪಿಯಾಗಿ ಮಾರ್ಪಾಟಾಯಿತು. ಈ ಸಂದರ್ಭದಲ್ಲಿ ಹಲವು ದೇವಸ್ಥಾನಗಳ ಗರ್ಭ ಗುಡಿಯಲ್ಲಿರುವ ಮೂರ್ತಿಗಳು ನಾಶವಾದವು. ಗಣೇಶನ ಏಕಶಿಲಾ ಮೂರ್ತಿಗಳು ಭಿನ್ನವಾದವು. ( ಮುಕ್ಕಾದವು) ಪುರಾತತ್ವ ಇಲಾಖೆಯವರು ಪೂಜೆಗೆ ಒತ್ತು ನೀಡದ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇದರಿಂದಾಗಿ ಹಂಪಿಯ ಗಣೇಶದ್ವಯರಿಗೆ ದರ್ಶನ ಭಾಗ್ಯವಿದೆ, ಪೂಜೆ ನಡೆಯೋದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ