ಮತ್ತೆ ಸ್ಯಾಂಕಿ ರಸ್ತೆ ಕುಸಿತ; ಮಲ್ಲೇಶ್ವರ 18ನೇ ಕ್ರಾಸ್ ಮಾರ್ಗ ಬಂದ್

Published : Oct 17, 2022, 10:16 AM IST
ಮತ್ತೆ ಸ್ಯಾಂಕಿ ರಸ್ತೆ ಕುಸಿತ; ಮಲ್ಲೇಶ್ವರ 18ನೇ ಕ್ರಾಸ್ ಮಾರ್ಗ ಬಂದ್

ಸಾರಾಂಶ

ನಗರದಲ್ಲಿ ಸುರಿದ ಭಾರೀ ಮಳೆಗೆ ಸ್ಯಾಂಕಿ ಕೆರೆ ರಸ್ತೆ ಮತ್ತೆ ಕುಸಿದಿದ್ದು, ಸದಾಶಿವ ನಗರ ಜಂಕ್ಷನ್‌ನಿಂದ ಮಲ್ಲೇಶ್ವರ 18 ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್‌ ಮಾಡಲಾಗಿದೆ.

ಬೆಂಗಳೂರು (ಅ.17) : ನಗರದಲ್ಲಿ ಸುರಿದ ಭಾರೀ ಮಳೆಗೆ ಸ್ಯಾಂಕಿ ಕೆರೆ ರಸ್ತೆ ಮತ್ತೆ ಕುಸಿದಿದ್ದು, ಸದಾಶಿವ ನಗರ ಜಂಕ್ಷನ್‌ನಿಂದ ಮಲ್ಲೇಶ್ವರ 18 ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್‌ ಮಾಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಸ್ಯಾಂಕಿ ಕೆರೆಯ ಏರಿಯ ಮೇಲಿನ ರಸ್ತೆ ಕುಸಿದಿತ್ತು. ಇದೀಗ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಮತ್ತೆ ಸ್ಯಾಂಕಿ ಕೆರೆ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ರಸ್ತೆಯ ಮೇಲೆ ಬಿದ್ದ ಮಳೆ ನೀರು ಹರಿದು ಹೋಗದೇ ಜಮಾವಣೆಗೊಂಡಿದ್ದರಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ.

ಬೆಂಗ್ಳೂರಿನ ವಿಧಾನಸೌಧದ ಮುಂದೆಯೇ ರಸ್ತೆ ಗುಂಡಿ..!

ಬಿಬಿಎಂಪಿಯಿಂದ ಕಳೆದ ಕೆಲವು ದಿನಗಳ ಹಿಂದೆ ಸ್ಯಾಂಕಿ ಕೆರೆ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿತ್ತು. ರಸ್ತೆ ನೀರು ಹೊರ ಹೋಗುವ ಜಾಗಕ್ಕೆ ಡಾಂಬರ್‌ ಸುರಿದ ಪರಿಣಾಮ ನೀರು ರಸ್ತೆಯಲ್ಲಿಯೇ ನಿಂತಿದ್ದರಿಂದ ಪದೇ ಪದೆ ಕುಸಿಯುತ್ತಿದೆ. ಬಿಬಿಎಂಪಿಯು ಕುಸಿದ ರಸ್ತೆ ಗುಂಡಿಗೆ ಬೇಕಾಬಿಟ್ಟಿಕೋಲ್ಡ್‌ ಬಿಟುಮಿನ್‌ ಸುರಿದು ಮುಚ್ಚಿದ್ದು, ಕಳೆದ ಒಂದು ತಿಂಗಳ ಹಿಂದೆಯೂ ಇದೇ ರೀತಿ ಕಳೆದ ಕಾಮಗಾರಿ ಮಾಡಿ ಕುಸಿದ ಗುಂಡಿಗೆ ತೇಪೆ ಹಾಕಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೆ ರಸ್ತೆ ಕುಸಿದಿದೆ.

ಅನಾಹುತಕ್ಕೆ ಮುನ್ನೆಚ್ಚರಿಕೆ

ಕೇವಲ ಎರಡು ತಿಂಗಳಲ್ಲಿ ಕೆರೆಯ ದಂಡೆಯ ಮೇಲಿನ ರಸ್ತೆ ಎರಡು ಬಾರಿ ಕುಸಿದಿದ್ದರೂ ಬಿಬಿಎಂಪಿ ಅಧಿಕಾರಿಗಳು ಕುಸಿತಕ್ಕೆ ಕಾರಣ ಪತ್ತೆ ಹಚ್ಚದೇ ಬೇಕಾಬಿಟ್ಟಿಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಕುಸಿದ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸಿದರೆ ಸ್ಯಾಂಕಿ ಕೆರೆಯ ದಂಡೆಗೆ ಸಂಚಕಾರ ಎದುರಾಗಬಹುದು. ಹಾಗಾಗಿ, ಮುನ್ನೆಚ್ಚರಿಕೆ ವಹಿಸಿ ಕುಸಿದ ರಸ್ತೆಯನ್ನು ಕೂಡಲೇ ಸರಿ ಪಡಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

Bengaluru: ಇನ್ನೂ 1051 ರಸ್ತೆ ಗುಂಡಿ ಭರ್ತಿ ಬಾಕಿ: ತ್ವರಿತವಾಗಿ ಮುಚ್ಚುವಂತೆ ರಾಕೇಶ್ ಸಿಂಗ್‌ ಸೂಚನೆ

ವಾಹನ ಸಂಚಾರ ವ್ಯತ್ಯಯ

ರಸ್ತೆ ಕುಸಿದ ಪರಿಣಾಮ ಸದಾಶಿವ ನಗರದಿಂದ ಯಶವಂತಪುರಕ್ಕೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಕೆ ಮಾಡಿಕೊಂಡು ಮಲ್ಲೇಶ್ವರದ 18 ಕ್ರಾಸ್‌ ಹಾಗೂ ಯಶವಂತಪುರ ಕಡೆ ಸಾಗಬೇಕಿದೆ. ಆದರೆ ಮಲ್ಲೇಶ್ವರ 18 ಕ್ರಾಸ್‌ನಿಂದ ಸದಾಶಿವ ನಗರದ ಕಡೆ ಮಾರ್ಗದಲ್ಲಿ ಯಥಾ ಪ್ರಕಾರ ವಾಹನ ಸಂಚಾರವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ