ಹಿರಿಯ ಸಾಹಿತಿ ಬಂಜಗೆರೆ ಸೇರಿ 15 ಮಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Published : Nov 07, 2024, 10:46 AM IST
ಹಿರಿಯ ಸಾಹಿತಿ ಬಂಜಗೆರೆ ಸೇರಿ 15 ಮಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸಾರಾಂಶ

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ 'ವಾರ್ಷಿಕ' ಪ್ರಶಸ್ತಿ, 'ಸಾಹಿತ್ಯ' ಪ್ರಶಸ್ತಿ ಮತ್ತು 2021ನೇ ಸಾಲಿನ ಪುಸ್ತಕ ಪ್ರಶಸ್ತಿ ಗಳು ಪ್ರಕಟಗೊಂಡಿದ್ದು, ಅಗ್ರಹಾರ ಕೃಷ್ಣಮೂರ್ತಿ, ರಂಜಾನ್ ದರ್ಗಾ, ಬಂಜಗೆರೆ ಜಯಪ್ರಕಾಶ್ ಸೇರಿದಂತೆ 15 ಸಾಹಿತಿಗಳು ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಬೆಂಗಳೂರು (ನ.07): ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ 'ವಾರ್ಷಿಕ' ಪ್ರಶಸ್ತಿ, 'ಸಾಹಿತ್ಯ' ಪ್ರಶಸ್ತಿ ಮತ್ತು 2021ನೇ ಸಾಲಿನ ಪುಸ್ತಕ ಪ್ರಶಸ್ತಿ ಗಳು ಪ್ರಕಟಗೊಂಡಿದ್ದು, ಅಗ್ರಹಾರ ಕೃಷ್ಣಮೂರ್ತಿ, ರಂಜಾನ್ ದರ್ಗಾ, ಬಂಜಗೆರೆ ಜಯಪ್ರಕಾಶ್ ಸೇರಿದಂತೆ 15 ಸಾಹಿತಿಗಳು ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, 2022ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಆರ್.ಕೆ.ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗಡೆ, ರಂಜಾನ್‌ದರ್ಗಾ ಮತ್ತು ತುಂಬಾಡಿ ರಾಮಯ್ಯ ಅವರು ಆಯ್ಕೆಗೊಂಡಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರು. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು. 

2022ನೇ ಸಾಲಿನ 'ಸಾಹಿತ್ಯ ಶ್ರೀ' ಪ್ರಶಸ್ತಿಗೆ ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿ ಮತ್ತು ಸೃಜನೇತರ ಸಾಹಿತ್ಯ ಕ್ಷೇತ್ರದ ಸಾಧಕರಿಗೆ 4 ಮತ್ತು ಸಾಹಿತ್ಯ ಪರಿಚಾರಿಕೆಗೆ 1 ಪ್ರಶಸ್ತಿ ಸೇರಿದಂತೆ ಒಟ್ಟು 10 ಸಾಧಕರಿಗೆ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್, ರೂಮಿ ಹರೀಶ್‌, ಡಾ.ಎಂ.ಜಿ.ಮಂಜುನಾಥ, ದಾಸನೂರು ಕೂಸಣ್ಣ, ಡಾ.ರಾಜಶೇಖರ ಹತಗುಂದಿ, ಎಚ್‌.ಎನ್.ಆರತಿ, ಡಾ.ಸಾರಿಕಾ ದೇವಿ ಕಾಳಗಿ, ಮಹೇಶ್ ಹರವೆ, ಅನಸೂಯ ಕಾಂಬ್ಳೆ, ಚಲಂ ಹಾಡ್ಲಹಳ್ಳಿ ಅವರನ್ನು ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಈ ಪ್ರಶಸ್ತಿಯು ತಲಾ 25 ಸಾವಿರ ರು.ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ಹೇಳಿದರು.

ಸಿದ್ದರಾಮಯ್ಯ ರಾಜೀನಾಮೆ ಫಿಕ್ಸಾಗಿದೆ, ಹುಡುಗಾಟಕ್ಕೆ ಹೇಳ್ತಿಲ್ಲ: ಬಿ.ವೈ.ವಿಜಯೇಂದ್ರ

ಪುಸ್ತಕ ಬಹುಮಾನ: 2021ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ವಿವಿಧ 19 ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಚೇಮನಹಳ್ಳಿ ರಮೇಶ್‌ಬಾಬು-ರಾಗಿ ಕಾಳು(ಕಾವ್ಯ), ಡಾ.ಶೈಲೇಶ್ ಕುಮಾರ್ - ದಡ ಸೇರಿದ ಕನಸು (ನವ ಕವಿಗಳ ಪ್ರಥಮ ಸಂಕಲನ), ಡಾ.ಗಜಾನನ ಶರ್ಮ- ಚೆನ್ನ ಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ (ಕಾದಂಬರಿ), ಜಿ.ವಿ.ಆನಂದಮೂರ್ತಿ- ಗುಣಸಾಗರಿ ಮತ್ತು ಇತರೆ ಕತೆಗಳು (ಸಣ್ಣಕತೆ), ಮಹಾ ಬಿ.ಆರ್.ಪೊಲೀಸ್‌ಪಾಟೀಲ- ಮಹಿಮ ಎಡೆಯೂರು ಸಿದ್ದಲಿಂಗ ಶಿವಯೋಗಿ (ನಾಟಕ), ಬಿ.ವಿ.ಭಾರತಿ- ಎಲ್ಲಿಂದಲೋ ಬಂದವರು (ಲಲಿತ ಪ್ರಬಂಧ), ಡಾ.ಎಸ್.ಬಿ. ಪದ್ಮಪ್ರಸಾದ್- ಬುದ್ಧ ಭಕ್ತರ ನಾಡಿನಲ್ಲಿ (ಪ್ರವಾಸ ಸಾಹಿತ್ಯ), ಡಾ.ಡಿ.ಡೊಮಿನಿಕ್- ಅಕ್ಕಯ್ (ಜೀವನ ಚರಿತ್ರೆ/ಆತ್ಮಕಥೆ) ಆಯ್ಕೆ ಮಾಡಲಾಗಿದೆ. 

ಡಾ.ಎಚ್.ಎಸ್.ಸತ್ಯನಾರಾಯಣ - ಕಣೋಟ (ಸಾಹಿತ್ಯ ವಿಮರ್ಶೆ),ಸಿ.ವಿ.ಶೇಷಾದ್ರಿ ಹೊಳವನಹಳ್ಳಿ- ವಜ್ರದ ಕಿರೀಟ (ಮಕ್ಕಳ ಸಾಹಿತ್ಯ), ಡಾ.ವಿ.ಎಸ್.ಕಿರಣ್‌ - ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು (ವಿಜ್ಞಾನ ಸಾಹಿತ್ಯ), ಡಾ.ಕೆ.ಎಸ್.ನಾಗರಾಜ- ಸಂಕೇತ ವ್ಯಾಕರಣ ಮತ್ತು ಪದಕೋಶ (ಮಾನವಿಕ), ಡಾ.ಎ.ಎಸ್.ಪ್ರಭಾಕರ್- ಚಹರೆಗಳೆಂದರೆ ಗಾಯಗಳೂ ಹೌದು (ಸಂಶೋಧನೆ), ದಾದಾಪೀರ್ ಜೈಮನ್ - ಪರ್ದಾ ಮತ್ತು ಪಾಲಿಗಮಿ (ಅನುವಾದ 1 ಭಾರತೀಯ ಭಾಷೆ ಯಿಂದ ಕನ್ನಡಕ್ಕೆ), ಮುಜಾಫರ್ ಅಸಾದಿ- ಅಲ್ಪಸಂಖ್ಯಾತರುಮತ್ತು ಜಾತಿವ್ಯವಸ್ಥೆ (ಅಂಕಣ ಬರಹ/ ವೈಚಾರಿಕ ಬರಹ), ಡಾ.ಜಿ.ಕೃಷ್ಣಪ್ಪ- ವಚನ ದೀಪಿಕೆ (ಸಂಕೀರ್ಣ) ಮತ್ತು ಯಶಸ್ವಿನಿ ಕದ್ರಿ - ಊರು ಹೇಳದ ಕತೆ (ಲೇಖಕರ ಮೊದಲ ಸ್ವತಂತ್ರ ಕೃತಿ) ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಪುಸ್ತಕ ಪ್ರಶಸ್ತಿಯು ತಲಾ 25 ಸಾವಿರ ರು.ನಗದು, ಫಲಕ, ಪ್ರಮಾಣ ಪತ್ರ ಒಳಗೊಂಡಿದೆ ಎಂದು ತಿಳಿಸಿದರು.

10 ಸಾವಿರ ಅರ್ಹ ಫಲಾನುಭವಿಗಳ ಬಿಪಿಎಲ್‌ ಕಾರ್ಡ್‌ಗಳು ರದ್ದು: ಯಾಕೆ ಗೊತ್ತಾ?

ವಿವಿಧ ದತ್ತಿ ಪ್ರಶಸ್ತಿಗಳು: ಅಕ್ಷಯ ಕಾಂತ ಬೈಲು- ಹದಿನೆಂಟರಿಂದ ಇಪ್ಪತ್ತೆಂಟರ ಕವಿತೆ ಗಳು (ಜಿ.ಶ್ರೀನಿವಾಸರಾಜುದತ್ತಿ ಬಹುಮಾನ), ಡಾ.ಎಚ್.ಜಿ.ಶ್ರೀಧರ್ - ಚಪಡ ಇದು ಅಕ್ಷರದ ಪಯಣ (ಚದುರಂಗ ದತ್ತಿ), ಸಹನಾ ಕಾಂತಬೈಲು- ಇದು ಬರಿ ಮಣ್ಣಲ್ಲ (ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ), ಡಾ.ನಾಗ ಎಚ್.ಹುಬ್ಬಿ ಹಾಕಿಮಾಂತ್ರಿಕ ಮೇಜರ್ ಧ್ಯಾನಚಂದ್ (ಸಿಂಪಿ ಲಿಂಗಣ್ಣ ದತ್ತಿ), ಡಾ.ಎಸ್.ಪ್ರಸಾದಸ್ವಾಮಿ- ಬೆಡಗು ಬಿನ್ನಾಣ(ಜಿ.ಶ್ರೀನಿವಾಸರಾಜು ದತ್ತಿ), ಸುಮಂ ಗಲಾ- ಸೆಬಾಸ್ಟಿಯನ್ ಆ್ಯಂಡ್ ಸನ್ಸ್‌ ಗುಂಡಪ್ಪ ಮತ್ತು ಶಾರದಮ್ಮ ದತ್ತಿ), ಅಕ್ಷಯ ಪಂಡಿತ್ - ಬಯಲಲಿ ತೇಲುವ ತಾನು (ಮಧು ರಚೆನ್ನ ದತ್ತಿ), ಡಾ.ಸುಶಿ ಕಾಡನಕುಪ್ಪೆ- ಅಸತ್ಯ ದ ಕೇಡು (ಬಿ.ವಿ.ವೀರಭದ್ರಪ್ಪ ದತ್ತಿ ಬಹು ಮಾನ) ಕೃತಿ ಆಯ್ಕೆಯಾಗಿದೆ. ಈ ಎಲ್ಲ ದತ್ತಿ ಪ್ರಶಸ್ತಿಗಳಿಗೆ ತಲಾ 10000 ರು.ನಗದು ಮತ್ತು ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಇರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ