ಬೆಂಗಳೂರು: ಹಾಡುಹಗಲೇ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕು ಇರಿದು ದರೋಡೆ !

Published : Sep 11, 2023, 05:55 AM IST
ಬೆಂಗಳೂರು: ಹಾಡುಹಗಲೇ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕು ಇರಿದು ದರೋಡೆ !

ಸಾರಾಂಶ

ಹಾಡುಹಗಲೇ ಅಪರಿಚಿತನೊಬ್ಬ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆಗೈದು ಸುಮಾರು .52 ಸಾವಿರಕ್ಕೂ ಹೆಚ್ಚು ನಗದನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಬನ್ನೇರುಘಟ್ಟಮುಖ್ಯ ರಸ್ತೆಯ ಗೊಟ್ಟಿಗೆರೆಯಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ (ಸೆ.11) :  ಹಾಡುಹಗಲೇ ಅಪರಿಚಿತನೊಬ್ಬ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆಗೈದು ಸುಮಾರು .52 ಸಾವಿರಕ್ಕೂ ಹೆಚ್ಚು ನಗದನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಬನ್ನೇರುಘಟ್ಟಮುಖ್ಯ ರಸ್ತೆಯ ಗೊಟ್ಟಿಗೆರೆಯಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟಮುಖ್ಯರಸ್ತೆಯಲ್ಲಿ ಇರುವ ಗೊಟ್ಟಿಗೆರೆಯ ಅಪೊಲೋ ಫಾರ್ಮಸಿಗೆ ಭಾನುವಾರ ಬೆಳಗ್ಗೆ 7.40ರ ಸುಮಾರಿಗೆ ಹೆಲ್ಮೆಟ್‌ ಮತ್ತು ಮಾÓ್ಕ… ಧರಿಸಿ ಕೈನಲ್ಲಿ ಚಾಕುವಿರುವ ಚೀಲ ಹಿಡಿದು ಫಾರ್ಮಿಸಿಗೆ ಗ್ರಾಹಕನ ಸೋಗಿನಲ್ಲಿ ಓರ್ವ ನುಗ್ಗಿದ್ದಾನೆ. ಕೌಂಟರ್‌ನಲ್ಲಿ ಒಂಟಿಯಾಗಿದ್ದ ಫಾರ್ಮಸಿ ಸಿಬ್ಬಂದಿ ವಿN್ನೕಶ್‌ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪ್ರತಿರೋಧ ಒಡ್ಡಿದ ಫಾರ್ಮಸಿ ಸಿಬ್ಬಂದಿ ವಿN್ನೕಶ್‌ನ ಎದೆಗೆ ಕಳ್ಳ ಚಾಕುವಿನಿಂದ ಇರಿದಿದ್ದಾನೆ. ಆದರೆ ವಿಘ್ನೇಶ್‌ ಧರಿಸಿದ ಜಾಕೆಟ್‌ನಿಂದಾಗಿ ಪ್ರಾಣಾಪಾಯ ಸಂಭವಿಸಿಲ್ಲ. ಬಳಿಕ ಆಗುಂತಕ ವಿಘ್ನೇಶ್‌ ಅವರ ಕಾಲಿಗೆ ಇರಿದು ಗಾಯಗೊಳಿಸಿ ಕ್ಯಾಶ್‌ ಕೌಂಟರ್‌ನಲ್ಲಿದ್ದ ನಗದನ್ನು ದೋಚಿ ಪರಾರಿಯಾಗಿದ್ದಾನೆ.

ಮಾಜಿ ಸಂಸದ ಪತ್ನಿಯನ್ನೂ ಬಿಡದ ಕಳ್ಳರು! ನೀರು ಕೇಳೋ ನೆಪದಲ್ಲಿ ಸರ ಕಿತ್ತು ಪರಾರಿ!

ವಿಷಯ ತಿಳಿಯುತ್ತಿದ್ದಂತೆ ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಹುಳಿಮಾವು ಠಾಣೆ ಪೊಲೀಸರು ಘಟನೆ ಸಂಪೂರ್ಣ ವಿವರ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ಅಪೊಲೋ ಫಾರ್ಮಸಿ ಹಾಗೂ ಕೆಲವು ಮೆಡಿಕಲ್‌ ಶಾಪ್‌ಗಳಲ್ಲಿ ಹೆಚ್ಚಾಗಿ ಒಬ್ಬರೇ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕಾರ್ಯ ನಿರ್ವಹಿಸಿವುದೇ ಹೆಚ್ಚು. ಸುರಕ್ಷತೆ ಬಗ್ಗೆ ಮಾಲಿಕರು ಹಾಗೂ ಪೊಲೀಸರು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಗಲೆಲ್ಲ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳಿಗೆ ನುಗ್ಗುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಮತ್ತೆ ಮಳೆ ಚುರುಕು: ಬೆಂಗಳೂರಲ್ಲಿ ಮಳೆ ಎಚ್ಚರಿಕೆ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
Karnataka News Live 17 September 2026: Jupiter Transit - ನಿಮ್ಮ ಬದುಕಿನಲ್ಲಿ ಈಗ ಗುರು ಕೃಪೆ ಶುರುವಾಗಿದೆ, ಈ 5 ರಾಶಿಯವರ ಲೈಫ್‌ಗೆ ಬಿಗ್‌ ಟರ್ನಿಂಗ್‌