Tumakuru: ದ್ವೇಷ ನಿಲ್ಲಲಿ, ಭ್ರಾತೃತ್ವ ಹಬ್ಬಲಿ: ರಾಹುಲ್‌ ಗಾಂಧಿ

Published : Apr 01, 2022, 04:45 AM IST
Tumakuru: ದ್ವೇಷ ನಿಲ್ಲಲಿ, ಭ್ರಾತೃತ್ವ ಹಬ್ಬಲಿ: ರಾಹುಲ್‌ ಗಾಂಧಿ

ಸಾರಾಂಶ

*  ಸಿದ್ಧಗಂಗಾ ಮಠಕ್ಕೆ ಕಾಂಗ್ರೆಸ್‌ ವರಿಷ್ಠ ನಾಯಕ ಭೇಟಿ *  ಮಕ್ಕಳ ಜತೆ ಸಾಮೂಹಿಕ ಪ್ರಾರ್ಥನೆ *  ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಿದ್ದಲಿಂಗ ಸ್ವಾಮೀಜಿ ಜತೆ 1 ತಾಸು ಚರ್ಚೆ   

ತುಮಕೂರು(ಏ.01): ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ(Dr Shivakumar Swamiji) ಅವ​ರ 115ನೇ ಜಯಂತಿ ಹಿನ್ನೆ​ಲೆ​ಯಲ್ಲಿ ಸಿದ್ಧಗಂಗಾ ಮಠಕ್ಕೆ(Siddaganga Matha) ಗುರು​ವಾರ ಭೇಟಿ ನೀಡಿದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ(Rahul Gandhi) ಅವರು, ಶ್ರೀಗಳ ಗದ್ದುಗೆ ದರ್ಶನ ಪಡೆ​ದ​ರು. ಬಳಿಕ ಮಕ್ಕಳ ಮಧ್ಯೆ ಕೆಲ​ಕಾಲ ಕಳೆ​ದ​ರು.

ಸಂಜೆ 5.50 ಕ್ಕೆ ಸಿದ್ಧಗಂಗಾ ಮಠಕ್ಕೆ ಆಗ​ಮಿ​ಸಿದ ರಾಹುಲ್‌ ನೇರವಾಗಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಭೇಟಿ ಪೂಜೆ ಸಲ್ಲಿ​ಸಿ​ದರು. ಬಳಿಕ ಸಿದ್ಧಲಿಂಗ ಸ್ವಾಮೀಜಿ ಅವರ ಕಚೇರಿಗೆ ತೆರಳಿ ಸ್ವಾಮೀಜಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು. ನಂತರ ಉಪಹಾರ ಸೇವಿಸಿ ಸಾಮೂಹಿಕ ಪ್ರಾರ್ಥನಾ ಸಭಾಂಗಣಕ್ಕೆ ಬರುತ್ತಿದ್ದಂತೆ ಮಠದ ವಿದ್ಯಾರ್ಥಿಗಳು(Students) ಭಾರೀ ಕರತಾಡನದೊಂದಿಗೆ ಸ್ವಾಗ​ತಿ​ಸಿ​ದ​ರು. ಸುಮಾರು 15 ನಿಮಿಷ ಕಾಲ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ​ರು. ಮಠ​ದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಳೆ​ದ ರಾಹುಲ್‌ ನಂತರ ಕಾರಿ​ನಲ್ಲಿ ಬೆಂಗಳೂರಿಗೆ ವಾಪ​ಸಾ​ದರು.

26 ಲಕ್ಷ ಕೋಟಿ ರು. ಪೆಟ್ರೋಲ್‌ ತೆರಿಗೆ ಲೆಕ್ಕ ಕೊಡಿ: ಕೇಂದ್ರಕ್ಕೆ ಕಾಂಗ್ರೆಸ್‌ ಸವಾಲು!

ದ್ವೇಷ ನಿಲ್ಲ​ಲಿ: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು,ದೇಶದಲ್ಲಿ ದ್ವೇಷ ಹರಡುವುದನ್ನು ನಿಲ್ಲಿಸಬೇಕು, ಭ್ರಾತೃತ್ವ ಭಾವನೆ ಹರಡಬೇಕು. ಬಸವಣ್ಣನವ(Basavanna) ಜಾತ್ಯತೀತ ಮನೋಭಾವ, ಅವರ ವಚನಗಳ ಆಶಯ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದು ಹೇಳಿ​ದ​ರು.

ಸಿದ್ಧ​ಗಂಗಾ ಮಠ ಹಾಗೂ ನಮ್ಮ ಕುಟುಂಬಕ್ಕೂ ಹಿಂದಿನಿಂದಲೂ ಅವಿನಾಭಾವ ಹಾಗೂ ಗೌರವಯುತ ಸಂಬಂಧವಿದೆ. ನಮ್ಮ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್‌ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ(Sonia Gandhi) ಅವರು ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದಿದ್ದರು. ಈಗ ನಾನು ಮಠಕ್ಕೆ ಬಂದಿರುವುದು ವೈಯಕ್ತಿಕವಾಗಿ ಬಹಳ ಸಂತೋಷ ಕೊಟ್ಟಿದೆ. ಸಿದ್ಧಗಂಗಾ ಮಠ ಶಿಕ್ಷಣ, ದಾಸೋಹಕ್ಕೆ ಪ್ರಸಿದ್ಧಿ, ಬಸವಣ್ಣನವರ ಜಾತ್ಯತೀತ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ. ಹಿಂದೆ ತಾವು ಮಠಕ್ಕೆ ಭೇಟಿ ನೀಡಿದ್ದಾಗ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೆ. ಈ ಬಾರಿ ಅವರಿಲ್ಲದಿರುವುದು ಬೇಸರದ ಸಂಗತಿ ಎಂದರು.

ಅವರು ಹಾಕಿ ಕೊಟ್ಟಿರುವ ಮಾರ್ಗ ನಮಗೆ ದಾರಿದೀಪ. ಭ್ರಾತೃತ್ವ, ಸೋದ​ರತ್ವ, ಸಾಮರಸ್ಯವನ್ನು ಪ್ರಚಾರ ಮಾಡುವ ಕೆಲಸವನ್ನು ಸಿದ್ಧಗಂಗಾ ಮಠ ಮಾಡುತ್ತಿದೆ. ಇದಕ್ಕಾಗಿ ನಾವು ಸಿದ್ಧಗಂಗಾ ಮಠ ಹಾಗೂ ಶ್ರೀಗಳನ್ನು ಅಭಿನಂದಿಸುತ್ತೇವೆ ಎಂದರು. ಮಾಜಿ ಸಿಎಂ ಸಿದ್ದ​ರಾ​ಮ​ಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್‌, ಈಶ್ವರ ಖಂಡ್ರೆ ಲಕ್ಷ್ಮೇ ಹೆಬ್ಬಾಳಕರ್‌ ಮತ್ತಿತರರು ಇದ್ದರು.

ಗಾಂಧಿಗಳೇ ಅಧಿಕಾರದಲ್ಲಿದ್ದರೆ ವೋಟು ಬೀಳೋದಿಲ್ಲ, ಗಾಂಧಿಗಳು ಅಧಿಕಾರ ಬಿಟ್ರೆ ಪಕ್ಷ ಉಳಿಯೋದಿಲ್ಲ..!

ರಾಹು​ಲ್‌ಗೆ ಅದ್ಧೂರಿ ಸ್ವಾಗ​ತ

ಬೆಂಗ​ಳೂ​ರಿ​ನಿಂದ ರಸ್ತೆ ಮಾರ್ಗ​ವಾಗಿ ಆಗ​ಮಿ​ಸಿದ ರಾಹುಲ್‌ ಗಾಂಧಿ ಅವ​ರನ್ನು ತುಮ​ಕೂ​ರಿ​ನ ಕಾಂಗ್ರೆ(Congress) ಪಕ್ಷದ ವತಿ​ಯಿಂದ ಜಾಸ್‌ಟೋಲ್‌ ಗೇಟ್‌ನಲ್ಲಿ ಅದ್ಧೂರಿ, ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಬೈಕ್‌ ರಾರ‍ಯಲಿ ಮೂಲಕ ಸಿದ್ಧಗಂಗಾ ಮಠಕ್ಕೆ ಕರೆತರಲಾಯಿತು. ಮಠದಿಂದ ಕಾರಿನ ಮೂಲಕ ಬೆಂಗಳೂರಿಗೆ ನಿರ್ಗಮಿಸುವಾಗ ಸುರ್ಜೆವಾಲ ಅವರು ಡ್ರೈವರ್‌ ಸೀಟಿನಲ್ಲಿ ಕುಳಿತಿದ್ದು ವಿಶೇಷ.

ಲಿಂಗೈಕ್ಯ ಶ್ರೀಗಳು, ಸೋನಿಯಾ, ನಾನು ಒಟ್ಟಿಗೆ ಪ್ರಯಾಣಿಸಿದ್ದೆವು: ಸಿದ್ಧ​ಲಿಂಗ ಶ್ರೀ

ಸಿದ್ಧಗಂಗಾ ಮಠಕ್ಕೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಅವರ ಕುಟುಂಬಕ್ಕೂ ಸುದೀರ್ಘ ಸಂಬಂಧ​ವಿ​ದೆ. ಈ ಹಿಂದೆ ಸೋನಿಯಾಗಾಂಧಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಶಿವಕುಮಾರ ಸ್ವಾಮೀಜಿ, ತಾವು ಹಾಗೂ ಸೋನಿಯಾಗಾಂಧಿ ಜತೆ​ಯಾಗಿ ಕಾರಿನಲ್ಲಿ ಪ್ರಯಾಣಿಸಿದ್ದು ಅವಿಸ್ಮರಣೀಯ ಎಂದು ಸಿದ್ಧ​ಲಿಂಗ ಶ್ರೀಗಳು(Siddalinga Shri) ಸ್ಮರಿ​ಸಿ​ದ​ರು.

ರಾಹುಲ್‌ ಗಾಂಧಿ ಯುವಜನರಿಗೆ ಸ್ಪೂರ್ತಿ. ಲಿಂಗೈಕ್ಯ ಶ್ರೀಗಳು ಪ್ರಜಾಪ್ರಭುತ್ವ ಯಶಸ್ವಿಯಾಗಲು ಗುಣ ಸಂಪನ್ನ ರಾಜಕೀಯ ಮುಖಂಡರು ಅಗತ್ಯವಾಗಿ ಬೇಕು ಎಂದು ಪದೇ ಪದೆ ಹೇಳುತ್ತಿದ್ದರು. ರಾಹುಲ್‌ ಗಾಂಧಿ ಅವರಿಗೆ ಭಗವಂತ ಶಕ್ತಿಯನ್ನು ಕೊಟ್ಟು ಸನ್ಮಂಗಳ ಉಂಟು ಮಾಡಲಿ ಎಂದು ಹಾರೈಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್